ಬೆಂಗಳೂರು: ಗುರುವಾರವಷ್ಟೇ ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್ಸಿಬಿ) ರಾಜ್ಯ ರಾಜಧಾನಿಯಲ್ಲಿ ಬೃಹತ್ ಡ್ರಗ್ಸ್ ಜಾಲವನ್ನು ಭೇದಿಸಿದ್ದು, ಡ್ರಗ್ಸ್ ಜಾಲದಲ್ಲಿ ಸ್ಯಾಂಡಲ್ವುಡ್ ಹೆಸರು ಸಹ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ಕೆಲವು ಆಸಕ್ತಿದಾಯಕ ವಿಚಾರಗಳನ್ನು ದಿಗ್ವಿಜಯ ನ್ಯೂಸ್ನೊಂದಿಗೆ ಹಂಚಿಕೊಂಡಿದ್ದಾರೆ.
ನೀವು ಹೇಳುತ್ತಿರುವಂತೆ ಜಾಲ ನಟ-ನಟಿಯರು ಡ್ರಗ್ಸ್ ವ್ಯಸನಿಗಳಲ್ಲ. ಒಬ್ಬೇ ಒಬ್ಬ ನಟ-ನಟಿಯರು ಯಾರಾದ್ರೂ ಇದ್ರೆ ತೋರಿಸಿ, ನೀವು ಕೇಳಿದನ್ನು ನಾನು ಕೊಡುತ್ತೇನೆಂದು ಸವಾಲು ಹಾಕಿದರು. ಕೆಲವರು ಸಂಗೀತ ನಿರ್ದೇಶಕರು, ನಿರ್ದೇಶಕರು ಹಾಗೂ ಟೆಕ್ನಿಷಿಯನ್ಸ್ಗಳು ತಗೆದುಕೊಳ್ಳಬಹುದಷ್ಟೇ. ಅದನ್ನು ಬಿಟ್ಟು ಕಲಾವಿದರು ತೆಗೆದುಕೊಳ್ಳುವುದಿಲ್ಲ ಎಂದು ನಟ-ನಟಿಯರ ಪರ ಬ್ಯಾಟ್ ಬೀಸಿದರು.
ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದರೆ ಸುಮಾರು 15 ನೈಜೀರಿಯನ್ ಡ್ರಗ್ಸ್ ಪೆಡ್ಲರ್ಗಳು ಸಿಗುತ್ತಾರೆ. ಅವರೇ ಹೆಚ್ಚು ಅಪಾಯಕಾರಿಗಳು. ಯಾರ್ಯಾರೋ ಡ್ರಗ್ಸ್ ತೆಗೆದುಕೊಳ್ಳುತ್ತಾರೆ ಅನ್ನುವುದನ್ನು ಬಿಟ್ಟು ಡ್ರಗ್ಸ್ ಮೂಲವನ್ನು ಭೇದಿಸಿ, ಅವರನ್ನು ಹಿಡಿಯಿರಿ ಎಂದರು.
ಎಲ್ಲಾ ರೀತಿಯ ಡ್ರಗ್ಸ್ ರಾಜ್ಯಕ್ಕೆ ಬರ್ತಿದೆ. ಡ್ರಗ್ಸ್ ಕೊಳ್ಳುವವರನ್ನು ಬಿಟ್ಟು, ಯಾರೂ ತಂದು ಕೊಡ್ತಾರೋ ಅವರನ್ನು ಹಿಡಿಯಿರಿ. ಈಗಿನ ಪೊಲೀಸ್ ಕಮೀಷನರ್ ಕೆಲಸ ಸರಿಯಿಲ್ಲ. ಪೊಲೀಸ್ ಇಲಾಖೆ ನಿಷ್ಕ್ರಿಯೆ ಆಗಿದೆ. ಅಲ್ಲದೆ, ಗೃಹ ಸಚಿವರು ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ರವಿ ಬೆಳಗೆರೆ ಅವರು ಹೇಳಿದರು.
ದುಬೈ ಹಾಗೂ ಕರಾಚಿಗೆ ಸ್ಯಾಂಡಲ್ವುಡ್ ಲಿಂಕ್ ಇದೆ ಎನ್ನುತ್ತಾರೆ ನಿಜಾನ ಎಂಬ ಪ್ರಶ್ನೆಗೆ ಉತ್ತರಿಸಿದ ಬೆಳಗೆರೆ ಅವರು ಆ ರೀತಿಯಾದ ಯಾವುದೇ ಲಿಂಕ್ ಇಲ್ಲ. ನಮ್ಮ ಸ್ಯಾಂಡಲ್ವುಡ್ಗೆ ಅಷ್ಟು ದೊಡ್ಡದಾದ ಸಂಪರ್ಕ ಇಲ್ಲ ಎಂದು ಸ್ಪಷ್ಟನೆ ನೀಡಿದರು. (ದಿಗ್ವಿಜಯ ನ್ಯೂಸ್)
ಡ್ರಗ್ಸ್ ಜಾಲದ ಕಿಂಗ್ಪಿನ್ ಅನಿಕಾ ಬಾಯ್ಬಿಟ್ಲು ಸ್ಫೋಟಕ ರಹಸ್ಯ, ಕನ್ನಡ ನಟ-ನಟಿಯರೇ ಗಿರಾಕಿಗಳು!