ಹೈದರಾಬಾದ್: ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ಪಾತ್ರವನ್ನು ಸುದೀಪ್ ಅವರು ಮಾಡಬೇಕಿತ್ತಂತೆ. ಪಾತ್ರ ಮಾಡುವುದಕ್ಕೆ ಚಿತ್ರತಂಡದವರು ಸುದೀಪ್ಗೆ ಆಫರ್ ಸಹ ಕೊಟ್ಟಿದ್ದರಂತೆ. ಕಾರಣಾಂತರಗಳಿಂದ ಸುದೀಪ್ ಈ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ ಮತ್ತು ಅವರು ಮಾಡಬೇಕಿದ್ದ ಪಾತ್ರವು ಇದೀಗ ರಾಣಾ ದಗ್ಗುಬಟ್ಟಿ ಪಾಲಾಗಿದೆ.
ಇದನ್ನೂ ಓದಿ: ಟೈಟಲ್ ಏನೋ ಹಳೇದು, ಕಥೆ ಹೊಸದು ತಾನೇ?
ಹೌದು, ಸುದೀಪ್ ಅಭಿನಯಿಸಬೇಕಿದ್ದ ಈ ಪಾತ್ರವನ್ನು ರಾಣಾ ದಗ್ಗುಬಾಟಿ ಪಾಲಾಗಿದ್ದು, ಸದ್ಯದಲ್ಲೇ ಈ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ. ಅಂದಹಾಗೆ, ಆ ಚಿತ್ರ ಯಾವುದು ಎಂಬ ಕುತೂಹಲವಾಯ್ತಾ? ಮಲಯಾಳಂನ ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರದ ತೆಲುಗು ರೀಮೇಕ್.
‘ಅಯ್ಯಪ್ಪನುಂ ಕೋಶಿಯುಂ’ ಚಿತ್ರವು ತೆಲುಗಿಗೆ ರೀಮೇಕ್ ಆಗುತ್ತಿದೆ ಮತ್ತು ಬಿಜು ಮೆನನ್ ಮಾಡಿದ್ದ ಪಾತ್ರವನ್ನು ಪವನ್ ಕಲ್ಯಾಣ್ ಮಾಡುತ್ತಿದ್ದಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಇನ್ನು, ಪೃಥ್ವಿರಾಜ್ ಮಾಡಿದ್ದ ಪಾತ್ರವನ್ನು ಯಾರಿಂದ ಮಾಡಿಸಬೇಕು ಎಂದು ಚರ್ಚೆಯಾದಾಗ, ಸುದೀಪ್ ಅವರ ಹೆಸರು ಕೇಳಿಬಂದಿತ್ತು.
ಅದರಂತೆ, ಚಿತ್ರತಂಡದವರು ಸುದೀಪ್ ಅವರನ್ನು ಸಂಪರ್ಕಿಸಿದ್ದರಂತೆ. ಆದರೆ, ಕಾರಣಾಂತರಗಳಿಂದ ಅವರು ನಟಿಸುವುದಕ್ಕೆ ಸಾಧ್ಯವಾಗದೆ, ಇದೀಗ ಆ ಪಾತ್ರವನ್ನು ರಾಣಾ ದಗ್ಗುಬಾಟಿ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿದೆ. ಇನ್ನು ರಾಣಾ ಅವರ ತಂದೆಯ ಪಾತ್ರವನ್ನು ತಮಿಳು ನಟ ಸಮುದ್ರಕಣಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಜನವರಿ 08ಕ್ಕೆ ‘ಕೆಜಿಎಫ್ 2’ ಚಿತ್ರದ ಮೊದಲ ಟೀಸರ್ …
ಈ ಹೆಸರಿಡದ ಚಿತ್ರವನ್ನು ಸಾಗರ್ ಕೆ ಚಂದ್ರ ಎನ್ನುವವರು ನಿರ್ದೇಶಿಸುತ್ತಿದ್ದು, ಸಿತಾರಾ ಎಂಟರ್ಟೈನ್ಮೆಂಟ್ಸ್ ಸಂಸ್ಥೆಯು ಈ ಚಿತ್ರವನ್ನು ನಿರ್ಮಿಸುತ್ತಿದೆ. ಸದ್ಯದಲ್ಲೇ ಈ ಚಿತ್ರದ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಲಿದೆ.