ಮೈಸೂರು: ರೋಗಿಗಳು ಮತದಾನದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ನಗರದ ಮಣಿಪಾಲ್ ಆಸ್ಪತ್ರೆಯ ಆಡಳಿತ ಮಂಡಳಿ ವೈದ್ಯಕೀಯ ವ್ಯವಸ್ಥೆಯಲ್ಲಿಯೇ ಮತದಾನ ಮಾಡಲು ಅವಕಾಶ ನೀಡಿತ್ತು.
ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವು ರೋಗಿಗಳಿಗೆ ಅಗತ್ಯ ಸಾರಿಗೆ ಮತ್ತು ವೈದ್ಯಕೀಯ ನೆರವು ಒದಗಿಸಿ ಅವರು ಮತದಾನ ಮಾಡಲು ನೆರವು ನೀಡಿತ್ತು.
ತೀವ್ರವಾದ ಎಡ-ಬದಿಯ ತಲೆನೋವು ಮತ್ತು ಮೂಗಿನ ರಕ್ತಸ್ರಾವದ (ಎಪಿಸ್ಟಾಕ್ಸಿಸ್) ತೊಂದರೆ ಹೊಂದಿರುವ ಶೋಭಾರಾಣಿ, ಲ್ಯಾಪರೊಸ್ಕೋಪಿಕ್ ಗರ್ಭಾಶಯದ ತೆಗೆಯುವಿಕೆಗೆ ಒಳಗಾಗಿರುವ ಅರುಣಾ ಯಾದವ, ಜ್ವರ ಮತ್ತು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿರುವ ನವ್ಯಾಶ್ರೀ ಸೇರಿದಂತೆ ನಿಖಿಲ್, ನೂರ್ ಅಹಮ್ಮದ್, ತೇಜಸ್ವಿ, ಪುಷ್ಪಲತಾ ಅವರನ್ನು ಅವರ ಊರುಗಳ ಮತಗಟ್ಟೆಗೆ ಕರೆದುಕೊಂಡು ಹೋಗಿ ಮತದಾನ ಮಾಡಲು ಸಹಕಾರ ನೀಡಲಾಯಿತು.