More

    ಸರಗಳ್ಳನ ಬಂಧನ, 3.3 ಲಕ್ಷ ರೂ. ಮೌಲ್ಯದ ವಸ್ತು ವಶ

    ಮೈಸೂರು: ಸರಗಳ್ಳತನ ಮಾಡುತ್ತಿದ್ದ ಹಳೇ ಕಳ್ಳನನ್ನು ಬಂಧಿಸಿರುವ ಕುವೆಂಪುನಗರ ಪೊಲೀಸರು, 3.3 ಲಕ್ಷ ರೂ. ಮೌಲ್ಯದ 55 ಗ್ರಾಂ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಂಡಿದ್ದಾರೆ.
    ಚಾಮರಾಜನಗರದ ರಂಗಸ್ವಾಮಿ (28) ಬಂಧಿತ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
    ಶ್ರೀರಾಂಪುರ ಎರಡನೇ ಹಂತದ ಮಧುವನ ಉದ್ಯಾನದಲ್ಲಿ ಏ.23ರಂದು ಬೆಳಗ್ಗೆ ವಾಯು ವಿಹಾರ ಮಾಡುತ್ತಿದ್ದ ಮಹದೇವಮ್ಮ ಅವರ ಸರ ಕಿತ್ತುಕೊಂಡು ಆರೋಪಿ ಪರಾರಿಯಾಗಿದ್ದ ಎನ್ನಲಾಗಿದೆ. ಅಲ್ಲಿಂದ ಸಂಜೆ ದೇವಯ್ಯನಹುಂಡಿ ಬಳಿಯ ಕಲ್ಯಾಣಮಂಟಪದಲ್ಲಿ ಇತರರೊಂದಿಗೆ ಕ್ಯಾತೆ ತೆಗೆದು ಜಗಳ ಮಾಡುತ್ತಿದ್ದಾಗ ಅಲ್ಲಿದ್ದವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
    ವಿಚಾರಣೆ ವೇಳೆ ಆತ ಮಹಿಳೆಯಿಂದ ಸರ ಕಿತ್ತು ಪರಾರಿಯಾಗಿರುವುದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ ತನಿಖೆ ಕಾಲಕ್ಕೆ ಆತ ಹಳೇ ಕಳ್ಳ ಎನ್ನುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts