ಮೈಸೂರು: ನಗರದ ಕೆಆರ್ಎಸ್ ರಸ್ತೆಯ ಮಂಟಿಯ ಸಮೀಪದ ಸಾದನಹಳ್ಳಿ ಸಪ್ತರ್ಷಿ ಗುರುಕುಲ ಆಶ್ರಮದ ಉಚಿತ ವಿದ್ಯಾರ್ಥಿನಿಲಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಆಶ್ರಮದಲ್ಲಿ ಓದ ಬಯಸುವವರಿಗೆ ವೇದ, ಸಂಸ್ಕೃತ, ಪ್ರಾಚೀನ ಗುರುಕುಲ ಪದ್ಧತಿಯಂತೆ ಶಿಕ್ಷಣ ಅಭ್ಯಾಸ ಹಾಗೂ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಹಂತದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿಯನ್ನು ಕಲ್ಪಿಸಲಾಗುವುದು. ಆಸಕ್ತರು ಮಾಹಿತಿಗಾಗಿ ಸೇವಾಶ್ರಮದ ಪೀಠಾಧ್ಯಕ್ಷ ಡಾ.ಅಭಿನವ ರಾಮಾನುಜ ಅವರನ್ನು (ಮ. 9481319111 ಅಥವಾ 8861573934) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.