ಬೆಂಗಳೂರು: ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿರುವ ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ಸಿಡಿ ಕೇಸ್ನ ‘ಸಂತ್ರಸ್ತ’ ಯುವತಿ ವಸಂತನಗರ ಗುರುನಾನಕ್ ಭವನದಲ್ಲಿರುವ ಕೋರ್ಟ್ನ ನ್ಯಾಯಾಧೀಶರ ಮುಂದೆ ನಿನ್ನೆ (ಮಂಗಳವಾರ) ಮಧ್ಯಾಹ್ನ 2.30ಕ್ಕೆ ಹಾಜರ್ ಆಗಿ ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ನಿನ್ನೆ ಭಾರಿ ಪೊಲೀಸ್ ಭದ್ರತೆ ನಡುವೆ ಕೊರ್ಟ್ಗೆ ಹಾಜರಾದ ಯುವತಿ, 164 ಅಡಿಯಲ್ಲಿ ನ್ಯಾಯಾಧೀಶರಿಗೆ ಹೇಳಿಕೆ ದಾಖಲಿಸಿದ್ದಾಳೆ. ಇದಾದ ಬಳಿಕ ಎಸ್ಐಟಿ ಅಧಿಕಾರಿಗಳು ಸಿಡಿ ಲೇಡಿಯನ್ನು ವಶಕ್ಕೆ ಪಡೆದರು. ಎಸ್ಐಟಿ ವಿಚಾರಣೆ ವೇಳೆ ರಮೇಶ್ ಜಾರಕಿಹೊಳಿ ಪರಿಚಯವಾಗಿದ್ದು ಹೇಗೆ? ಯಾವಾಗ ಪರಿಚಯ? ನಂಬರ್ ಯಾರು ಕೊಟ್ಟರು? ಬೆಡ್ ರೂಂ ಮೂವ್ಮೆಂಟ್ ಹೇಗಾಯ್ತು? ಎಂಬ ಮುಂತಾದ ಪ್ರಶ್ನೆಗಳ ಜತೆಗೆ ವಿಡಿಯೋ ಹರಿಬಿಟ್ಟವರು ಮತ್ತು ಬಾಯ್ಫ್ರೆಂಡ್ ಬಗ್ಗೆ ಸಿಡಿ ಲೇಡಿ ಬಾಯ್ಬಿಟ್ಟಿರುವ ಎಕ್ಸ್ಕ್ಲೂಸಿವ್ ಮಾಹಿತಿ ದಿಗ್ವಿಜಯ ನ್ಯೂಸ್ಗೆ ಲಭ್ಯವಾಗಿದೆ.
ಎಸ್ಐಟಿ ಅಧಿಕಾರಿಗಳ ಪ್ರಶ್ನೆಗೆ ಯುವತಿ ಕೊಟ್ಟ ಉತ್ತರ ಹೀಗಿದೆ…
ಎಸ್ಐಟಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಿಮಗೆ ಹೇಗೆ ಪರಿಚಯ ….?
ಯುವತಿ: ಅಣೆಕಟ್ಟೆಗಳ ಶೂಟಿಂಗ್ ವಿಚಾರವಾಗಿ ಪರಿಚಯವಾಯ್ತು.
ಎಸ್ಐಟಿ: ಯಾವಾಗ ಈ ಪರಿಚಯವಾಗಿದ್ದು?
ಯುವತಿ: ಕಳೆದ ಜುಲೈನಲ್ಲಿ ಪರಿಚಯವಾಯಿತು.
ಎಸ್ಐಟಿ: ಫಸ್ಟ್ ಟೈಂ ಯಾವಾಗ ವಿಧಾನಸೌಧಕ್ಕೆ ಹೇಗೆ ಹೋದ್ರಿ?
ಯುವತಿ: 3:30 ಕ್ಕೆ ಪಾಸ್ ಕೊಡ್ತಿದ್ರು, ಅದನ್ನ ತೆಗೆದುಕೊಂಡು ಹೋದೆ.
ಎಸ್ಐಟಿ: ಅವ್ರೆ ನಂಬರ್ ಕೊಟ್ರಾ?
ಯುವತಿ: ಮೊಬೈಲ್ ನಂಬರ್ ಕೊಟ್ಟು ಯಾರಿಗೂ ಹೇಳಬಾರದು ಅಂತಾ ಮಲ್ಲೇಶ್ವರಂ ಪಿಜಿ ಅಂತಾ ಸೇವ್ ಮಾಡಿಸಿದ್ರು.
ಎಸ್ಐಟಿ: ಬೆಡ್ ರೂಂ ಮೂವ್ ಮೆಂಟ್ ಹೇಗೆ ಆಯ್ತು?
ಯುವತಿ: ಸಹಕಾರ ನೀಡ್ಬೇಕು ಅಂತಾ ನನ್ನ ಮೇಲೆ ಎರಡು ಮೂರು ಸಲ ದೈಹಿಕ ಸಂಪರ್ಕ ಬೆಳೆಸಿದ್ರು.
ಎಸ್ಐಟಿ: ನೀವು ಯಾಕೆ ವಿರೋಧ ಮಾಡ್ಲಿಲ್ಲ?
ಯುವತಿ: ನಮ್ಮ ಭಾಗದಲ್ಲಿ ಅವರು ಪ್ರಭಾವಿ ಸಚಿವರು. ಬಾಯಿಗೆ ಬಂದಂಗೆ ಬೈಯೋರು. ಏನಾದ್ರು ಮಾಡ್ತಾರೆ ಅಂತಾ ಭಯಗೊಂಡು ಸುಮ್ಮನಿದ್ದೆ. ಆ ವೇಳೆ ನನಗೆ ನನ್ನ ಮೇಲೆಯೇ ಜಿಗುಪ್ಸೆ, ಭಯ ಕಾಡಿತಿತ್ತು.
ಎಸ್ಐಟಿ: ಈ ವಿಚಾರವನ್ನ ನಿಮ್ಮ ತಾಯಿಯ ಬಳಿ ಯಾಕೆ ಹೇಳಲಿಲ್ಲ?
ಯುವತಿ: ಹೇಗೆ ಹೇಳೋಕೆ ಸಾಧ್ಯ ಸಾರ್.. ಯಾವ ಮಗಳು ತಾನೆ ತನ್ನ ಪೋಷಕರ ಬಳಿ ಇಂಥಾ ವಿಚಾರ ಹೇಳಿಕೊಳ್ಳೋಕೆ ಸಾಧ್ಯ. ಅದೂ ಅಲ್ಲದೆ ಸಂಭೋಗ ನಡೆಸುವುದನ್ನು ರಮೇಶ್ ಜಾರಕಿಹೊಳಿ ವೀಡಿಯೊ ಮಾಡಿ ಇಟ್ಕೊಂಡಿದ್ದರು.
ಎಸ್ಐಟಿ: ಎಲ್ಲೆಲ್ಲಿ ಕರೆಸಿಕೊಂಡಿದ್ರು?
ಯುವತಿ: ಆಗ್ಗಾಗ್ಗೆ ಕಾಲ್ ಮಾಡಿ ಬರೋಕೆ ಹೇಳ್ತಿದ್ರು. ಭಯಬಿದ್ದು ಹೋಗ್ತಿದ್ದೆ. ಅಲ್ಲದೆ ಅಶ್ಲೀಲವಾಗಿ ಬೈತಿದ್ರು. ನನಗೆ ಹಿಂಸೆಯಾಗಿ ಈ ವಿಚಾರವನ್ನ ಶ್ರವಣ್ ಬಳಿ ಹೇಳಿದೆ.
ಎಸ್ಐಟಿ: ಶ್ರವಣ್ ಹೇಗೆ ಪರಿಚಯ?
ಯುವತಿ: ಶ್ರವಣ್ ನನ್ನ ಕ್ಲಾಸ್ಮೆಟ್. ವಿಟಿಯು ಪ್ರೊಟೆಸ್ಟ್ ವೇಳೆ ಪರಿಚಯವಾಗಿದ್ದ. ಶ್ರವಣ್ ನರೇಶಣ್ಣನನ್ನ ಪರಿಚಯ ಮಾಡಿಸಿದ್ರು. ನನಗೆ ಆಗ್ತಿರೊ ಹಿಂಸೆ ಬಗ್ಗೆ ಹೇಳಿದ್ದೆ. ಡಾಕ್ಯುಮೆಂಟ್ಸ್ ಇಲ್ಲದೆ ಏನು ಆಗೊಲ್ಲಮ್ಮ ಅಂದ್ರು. ಸೊ ನಾನು ವೀಡಿಯೊ ಮಾಡ್ಕೊಂಡು ಆರ್ಟಿ ನಗರದ ಪಿಜಿಯಲ್ಲಿ ಇಟ್ಟಿದ್ದೆ. ಇನ್ನೊಂದು ಕಾಪಿ ನರೇಶಣ್ಣನ ಕೈಗೆ ಕೊಟ್ಟಿದ್ದೆ. ವೀಡಿಯೊ ಯಾರು ಹೊರಗೆ ಬಿಟ್ರು ಅಂತಾ ಗೊತ್ತಿಲ್ಲ.
ಎಸ್ಐಟಿ: ನಿಮ್ಮ ಬಾಯ್ ಫ್ರೆಂಡ್ ಆಕಾಶ್ ಬೇರೆಯದ್ದೇ ಹೇಳಿಕೆ ಕೊಟ್ಟಿದ್ದಾನಲ್ಲ
ಯುವತಿ: ಅವನಿಗೆ ಇದ್ರ ಬಗ್ಗೆ ಏನೂ ಗೊತ್ತಿರಲಿಲ್ಲ.
ಎಸ್ಐಟಿ: ನಿಮ್ಮ ಪೋಷಕರು ನೀವು ಒತ್ತಡದಲ್ಲಿದ್ದೀರಿ ಅಂತಾ ಹೇಳಿದ್ದಾರಲ್ಲ
ಯುವತಿ: ನನ್ನ ತಂದೆ ಫಸ್ಟ್ ಟೈಂ ನಮ್ಮ ಜಾತಿ ಎಸ್ ಟಿ ಬಗ್ಗೆ ಮಾತಾಡಿದ್ದಾರೆ. ಹೇಳಿಕೆ ಕೊಡಬಾರದು ಅಂತಾ ಒತ್ತಡ ಹಾಕಿ ಹೀಗೆ ಮಾಡಿಸಿದ್ದಾರೆ.
ಎಸ್ಐಟಿ: ಕಂಪ್ಲೆಂಟ್ ನೀವೇ ಬರೆದಿದ್ದಾ? ವಕೀಲರನ್ನ ಹೇಗೆ ಸಂಪರ್ಕ ಮಾಡಿದ್ರಿ? ಬೆಂಗಳೂರಲ್ಲೇ ಭೇಟಿ ಮಾಡಿ ಕೊಟ್ರಾ? ಬೆಂಗಳೂರಲ್ಲೇ ಇದ್ರಾ?
ಯುವತಿ: ಕಂಪ್ಲೆಂಟ್ ನಾನೇ ಬರೆದಿದ್ದು ಬಟ್ ಎಲ್ಲಿ ಕೊಟ್ಟೆ ಅಂತಾ ಹೇಳೋಕೆ ಆಗಲ್ಲ…
28 ದಿನದ ಬಳಿಕ ಕೋರ್ಟ್ನಲ್ಲಿ ಸಿಡಿ ಲೇಡಿ ಪ್ರತ್ಯಕ್ಷ! ರಮೇಶ್ ಜಾರಕಿಹೊಳಿ ಎದೆಯಲ್ಲಿ ಢವಢವ
ನಾನು ನಂದಿ ಅಲ್ಲ, ಜಗದೀಶ! ನಾನು ಮೂರನೇ ಕಣ್ಣು ಬಿಟ್ರೆ ಭಸ್ಮ ಆಗ್ತೀರಿ: ಸಿಡಿ ಲೇಡಿ ವಕೀಲನ ಎಚ್ಚರಿಕೆ ಯಾರಿಗೆ?
ಸುಳ್ಳು ದೂರಿಗೆ ನನ್ನಿಂದ ಹೆಂಡತಿ-ಮಕ್ಕಳು ದೂರವಾದರು: ಆರ್. ಅಶೋಕ್ ವಿರುದ್ಧ ಸಿಡಿ ಲೇಡಿ ವಕೀಲ ಜಗದೀಶ್ ವಾಗ್ದಾಳಿ