ರೋಹ್ಟಕ್: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ 40 ದಿನಗಳವರೆಗೆ ಪೆರೋಲ್ ಮೇಲೆ ಜೈಲಿಂದ ಹೊರ ಬಂದಿದ್ದಾರೆ.
ಆಶ್ರಮದ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ಆರೋಪ ಹಾಗೂ 2002ರಲ್ಲಿ ಡೇರಾ ಸಚ್ಚಾ ಸೌದಾದ ಮ್ಯಾನೇಜನರ್ ರಣಜೀತ್ ಸಿಂಗ್ನ ಕೊಲೆ ಕೇಸ್ನಲ್ಲಿ ಗುರ್ಮೀತ್ ರಾಮ್ ರಹೀಮ್ಗೆ ಜೈಲು ಶಿಕ್ಷೆಯಾಗಿದೆ. ಇವರನ್ನು ಪೆರೋಲ್ ಮೇಲೆ ಬಿಡುವಂತೆ ಕುಟುಂಬಸ್ಥರು ಸುನೈರಾ ಜೈಲಿನ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಇದೀಗ ಪೆರೋಲ್ ಮೇಲೆ ಹೊರ ಬಂದಿದ್ದಾರೆ. ಜೈಲಿಂದ ಹೊರ ಬರುತ್ತಿದ್ದಂತೆ ರಾಮ್ ರಹೀಮ್ ಮೊದಲಿಗೆ ಹೋಗಿದ್ದು ಬರ್ನವಾದ ಬಾಗ್ಪತ್ ಆಶ್ರಮಕ್ಕೆ!
ಡೇರಾ ಮುಖ್ಯಸ್ಥರು ಶಿಬಿರದೊಳಗೆ ಮಹಿಳಾ ಶಿಷ್ಯರನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣ ಹಾಗೂ ಈ ಬಗ್ಗೆ ಮಾಹಿತಿ ನೀಡಿದ್ದ ಡೇರಾದ ಮ್ಯಾನೇಜರ್ ರಂಜಿತ್ ಸಿಂಗ್ ಅವರ ಹತ್ಯೆ ಮಾಡಿದ ಕೇಸ್ನಲ್ಲಿ ಈತನಿಗೆ ಜೀವಾವಧಿ ಶಿಕ್ಷೆಯಾಗಿದೆ. ಈ ಬಗ್ಗೆ ಬರೆದಿದ್ದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಕೂಡ ಈತ ಮಾಡಿದ್ದು ಸಾಬೀತಾಗಿದೆ. 2021ರ ಅಕ್ಟೋಬರ್ನಲ್ಲಿ ರಾಮ್ ರಹೀಂಗೆ ಜೀವಾವಧಿ ಶಿಕ್ಷೆಯಾಗಿದೆ. ಇದಕ್ಕೂ ಮೊದಲು ಅಂದರೆ 2017ರ ಆಗಸ್ಟ್ 28 ರಂದು ಸಿಬಿಐ ನ್ಯಾಯಾಲಯವು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.