ಬೆಂಗಳೂರು: ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ ನಾಲ್ಕು ದಿನ ಮುಂದುವರಿಯಲಿದೆ. ಸೋಮವಾರವೂ ವಿವಿಧ ಭಾಗಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಉತ್ತಮ ವರ್ಷಧಾರೆಯಾಗಿದೆ.
ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನದಲ್ಲಿ ಜು.19ರಿಂದ ಜು.22ರವರೆ ಭಾರಿ ಮಳೆ ಮೂನ್ಸೂಚನೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲಿ ಅಗಾಗ್ಗೆ ಸಾಧಾರಣ ಮಳೆ ಬೀಳಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಜು.1ರಿಂದ ಮಳೆ ಶುರುವಾಗಿ 18 ದಿನಗಳು ಕಳೆದರೂ ಬಿಡುವು ನೀಡದ ಮುಂಗಾರು ಮಳೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಸುರಿಯಲಿದೆ. ಈಗಾಗಲೇ ಸುರಿದ ಭಾರಿ ಮಳೆಯಿಂದ ಪ್ರವಾಹ ಆತಂಕ ಜತೆಗೆ ಜಮೀನಿನಲ್ಲಿ ಬೆಳೆದಿರುವ ಬೆಳೆಗಳು ಹಾಳಾಗುವ ಸ್ಥಿತಿ ಬಂದಿದೆ.
ಅಪ್ಪುಗೆ ಮತ್ತೆ “ಬ್ಲ್ಯೂ” ಟಿಕ್: ಅಭಿಮಾನಿಗಳ ಮನವಿಗೆ ಮಣಿಯಿತು ಟ್ವಿಟ್ಟರ್
ಮ್ಯಾಟ್ರಿಮೋನಿಯಲ್ ವಂಚನೆ: ದುಬೈಯಲ್ಲಿ ವೈದ್ಯನೆಂದು ನಾಟಕ, 3 ಲಕ್ಷ ರೂ.ಕೊಟ್ಟು ಮೋಸ ಹೋದ ಮಹಿಳೆ!