ಪಣಜಿ: ಬೆಳಗಾವಿ ಜಿಲ್ಲೆ ಸೇರಿದಂತೆ ಗಡಿ ಭಾಗದಲ್ಲೂ ವರುಣ ಆರ್ಭಟ ಜೋರಾಗಿದ್ದು, ನದಿತೀರದ ಗ್ರಾಮಸ್ಥರಲ್ಲಿ ನೆರೆಭೀತಿ ಆವರಿಸಿದೆ. ಈ ನಡುವೆ ಗೋವಾದ ದೂಧಸಾಗರ ಜಲಪಾತದ ಬಳಿ ಬಾರಿ ಮಳೆಗೆ ರೈಲ್ವೆ ಹಳಿಯ ಮೇಲೆ ಗುಡ್ಡ ಕುಸಿದು ರೈಲ್ವೆ ಸಂಚಾರ ಸ್ಥಗಿತಗೊಂಡಿತ್ತು.
ಬುಧವಾರ ಬೆಳಗ್ಗೆ ಗೋವಾ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಲೊಂಡಾ ಜಂಕ್ಷನ್ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ನಂತರ ಅವರನ್ನು ವಿಶೇಷ ಬಸ್ ಮೂಲಕ ವಾಸ್ಕೊಗೆ ತಲುಪಿಸಲು ವ್ಯವಸ್ಥೆ ಕಲ್ಪಿಸಲಾಯಿತು.
ಇದನ್ನೂ ಓದಿರಿ ರಾಜ್ಯದಲ್ಲಿ ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ, ನದಿತೀರದಲ್ಲಿ ನೆರೆಭೀತಿ
‘ಗೋವಾ-ಬೆಳಗಾವಿಗೆ ಸಂಪರ್ಕ ಕಲ್ಪಿಸುವ ಚೋರ್ಲಾ ಘಾಟ್ನಲ್ಲೂ ಭಾರಿ ಮಳೆಯಾಗಿದ್ದು, ಭೂ ಕುಸಿತ ಸಂಭವಿಸಿ ಸಂಪರ್ಕ ಸ್ಥಗಿತಗೊಂಡಿದೆ. ಗೋವಾ ಮುಖ್ಯಮಂತ್ರಿಗಳ ಕಚೇರಿಯಿಂದ ಬಿಡುಗಡೆಗೊಳಿಸಿರುವ ಸಂದೇಶದಲ್ಲಿ- ಚೋರ್ಲಾ ಘಾಟ್ನಲ್ಲಿ ಮಣ್ಣು ತೆರವುಗೊಳ್ಳುವವರೆಗೂ ಈ ಮಾರ್ಗವಾಗಿ ಯಾರೂ ತೆರಳಬಾರದು ಎಂದು ಮನವಿ ಮಾಡಲಾಗಿದೆ.
ಹಳೇ ಲವ್ ವಿಷ್ಯ ಮುಚ್ಚಿಹಾಕಲು ಉದ್ಯಮಿ ಜತೆ ಅಕ್ರಮ ಸಂಬಂಧ ಬೆಳೆಸಿ ಮತ್ತೆ ಪೇಚಿಗೆ ಸಿಲುಕಿದ್ಳು!