ಮೈಸೂರು: ನವೀಕರಿಸಿದ ಮೈಸೂರು ರೈಲು ವಸ್ತುಸಂಗ್ರಹಾಲಯದಲ್ಲಿ ಸೆಲ್ಫಿ ತೆಗೆಯುವ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಪ್ರಥಮ ಬಹುಮಾನವನ್ನು ಹಿರಿಯ ರೈಲ್ವೆ ಅಧಿಕಾರಿ ಗೋಪಿನಾಥ್ ಮಲ್ಯ ಪಡೆದಿದ್ದಾರೆ ಮತ್ತು ದ್ವಿತೀಯ ಬಹುಮಾನವನ್ನು ಖಾಸಗಿ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಮಿಸ್ ಪ್ರತ್ಯುಗ್ಕ್ಷ ವಿಜಯ್ ಅವರು ಪಡೆದಿದ್ದಾರೆ. ಬಹುಮಾನವನ್ನು ಸಂಗ್ರಹಾಲಯದಲ್ಲಿ ನಡೆದ ಸಣ್ಣ ಸಮಾರಂಭದಲ್ಲಿ ಹುಬ್ಬಳ್ಳಿಯ ಎಸ್.ಡಬ್ಲ್ಯು.ಆರ್.ಡಬ್ಲ್ಯು.ಡಬ್ಲ್ಯೂ.ಒ. ಅಧ್ಯಕ್ಷೆ ಸುಜಾತಾ ಸಿಂಗ್ ವಿತರಿಸಿದರು. 2ನೆಯ ಬಹುಮಾನ ಗೆದ್ದದಕ್ಕೆ ಸಂತೋಷ ವ್ಯಕ್ತಪಡಿಸಿದ ಪ್ರತ್ಯುಗ್ಕ್ಷ ಅವರು, ‘ಮ್ಯೂಸಿಯಂ ನನ್ನ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ ಮತ್ತು ನಾನು ಇಲ್ಲಿಗೆ ನಿಯಮಿತವಾಗಿ ಭೇಟಿ ನೀಡುತ್ತೇನೆ’ ಎಂದರು.
ರೈಲ್ವೆ ಸಂಗ್ರಹಾಲಯದ ಕುರಿತು ಜನರಿಗೆ ಹೆಚ್ಚಿನ ಮಾಹಿತಿ ದೊರೆಯಲಿ ಎಂಬ ಕಾರಣಕ್ಕೆ ಸೆ.1 ರಿಂದ ಸೆ.30 ರವರೆಗೆ ಒಂದು ತಿಂಗಳ ಕಾಲ ಸೆಲ್ಫಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದ್ದರು. ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ನಂತಹ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ 50 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.