More

    ಮದುವೆ ಆಗ್ತಿದ್ದಾರೆ ‘ರಾಧಾ ರಮಣ’ ಸೀರಿಯಲ್ ನಟಿ ಕಾವ್ಯಾ ಗೌಡ; ಆ ನಂತರವೂ ನಟನೆ ಮುಂದುವರಿಸುತ್ತಾರಾ?

    ಬೆಂಗಳೂರು: ಕಿರುತೆರೆಯಾಗಲಿ, ಹಿರಿತೆರೆಯಾಗಲಿ ಎರಡರಲ್ಲೂ ಮಿಂಚಿರುವ ನಟ ಮತ್ತು ನಟಿಯರಲ್ಲಿ ಕಾವ್ಯಾ ಗೌಡ ಸಹ ಒಬ್ಬರು. ತನ್ನ ಗ್ಲಾಮರ್, ವಿಭಿನ್ನ ಪಾತ್ರ ಮತ್ತು ವಿಭಿನ್ನ ಉಡುಪುಗಳ ಮೂಲಕವೇ ಸಿಕ್ಕಾಪಟ್ಟೆ ಫೇಮಸ್ ಆಗಿರುವ ನಟಿ ಕಾವ್ಯಾ ಗೌಡ ಈಗ ಮದುವೆಗೆ ಸಜ್ಜಾಗಿದ್ದಾರೆ. ಹೌದು, ಡಿಸೆಂಬರ್ 2ಕ್ಕೆ ಕಾವ್ಯಾ ಗೌಡ ದಾಂಪತ್ಯ ಜೀವನಕ್ಕೆ ಪ್ರವೇಶಿಸಲಿದ್ದಾರೆ. ಅಂದಹಾಗೆ, ಇವರು ಉದ್ಯಮಿ ಸೋಮಶೇಖರ್ ಎಂಬವರನ್ನು ಮದುವೆಯಾಗಲಿದ್ದಾರೆ. ಸೋಮಶೇಖರ್ ಮತ್ತು ಕಾವ್ಯಾ ಅವರದ್ದು ಅರೇಂಜ್ಡ್ ಮ್ಯಾರೇಜ್.

    ಇದನ್ನೂ ಓದಿ: ಈತನ ಹುಟ್ಟೇ ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​; ತಾಯಿ ಗರ್ಭದಿಂದ ಇವನಿಗಿಂತಲೂ ಬೇಗ ಬಂದು ಇನ್ನೂ ಬದುಕಿರುವವರೇ ಇಲ್ಲ! 

    ಕಾವ್ಯಾ ‘ಮೀರಾ ಮಾಧವ’, ‘ಗಾಂಧಾರಿ’, ‘ರಾಧಾ ರಮಣ’ ಧಾರಾವಾಹಿಗಳಲ್ಲಿ ಮಿಂಚಿದ್ದು, ‘ಬಕಾಸುರ’ ಎಂಬ ಸಿನಿಮಾದಲ್ಲಿ ಅಭಿಮನಯಿಸಿ ಬಹಳಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಕಾವ್ಯಾ ಮದುವೆ ಹೇಗೆ ನಡೆಯಲಿದೆ ಎಂಬುದರ ಬಗ್ಗೆ ತಿಳಿಯಲು ಅಭಿಮಾನಿಗಳು ಕಾತುರರಾಗಿದ್ದಾರೆ. ಮದುವೆ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿರುವ ಕಾವ್ಯಾ, ಈಗಾಗಲೆ, ದುಬೈಗೆ ಹೋಗಿ ಪ್ರೀ-ವೆಡ್ಡಿಂಗ್ ಶೂಟ್ ಮಾಡಿಸಿಕೊಂಡು ಬಂದಿದ್ದಾರೆ.

    ಇದನ್ನೂ ಓದಿ: ನಟ ಪುನೀತ್ ರಾಜಕುಮಾರ್ ಫೌಂಡೇಷನ್​ ಸಹಾಯಾರ್ಥ ನಡೆಯಬೇಕಿದ್ದ ಶೋಗೆ ಪೊಲೀಸರ ತಡೆ, ಇಂದಿನ ಕಾರ್ಯಕ್ರಮ ರದ್ದು..

    ತನ್ನ ಪ್ರೀ-ವೆಡ್ಡಿಂಗ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅವು ಸಿಕ್ಕಾಪಟ್ಟೆ ವೈರಲ್ ಆಗಿವೆ. ಅದರಲ್ಲೂ ಕೆಂಪು ಬಣ್ಣದ ಗೌನ್ ಧರಿಸಿದ ನಟಿ ಕಾವ್ಯಾ,ತುಂಬಾನೆ ಚೆನ್ನಾಗಿ ಕಾಣಿಸಿದ್ದರು. ಅಲ್ಲದೆ ಪಿಂಕ್ ಗೌನ್ ತೊಟ್ಟು ಇತ್ತೀಚೆಗೆ ತಮ್ಮ ಸೋದರಿ ಸಂಬಂಧಿಗಳ ಜೊತೆ ಬ್ಯಾಚುಲರ್ ಪಾರ್ಟಿ ಆಚರಿಸಿಕೊಂಡಿದ್ದಾರೆ.

    ಮದುವೆ ಆಗ್ತಿದ್ದಾರೆ 'ರಾಧಾ ರಮಣ' ಸೀರಿಯಲ್ ನಟಿ ಕಾವ್ಯಾ ಗೌಡ; ಆ ನಂತರವೂ ನಟನೆ ಮುಂದುವರಿಸುತ್ತಾರಾ?

    ಸಂಗೀತ್, ಮೆಹೆಂದಿ, ಆರತಕ್ಷತೆ, ಮುಹೂರ್ತ ಮತ್ತು ಕಾಕ್‌ಟೇಲ್ ಪಾರ್ಟಿ ಎಲ್ಲವೂ ಪ್ಲ್ಯಾನ್​ ಆಗಿದ್ದು, ಕಾವ್ಯಾ ಮನೆಯಲ್ಲಿ ಒಂದರ ನಂತರ ಮತ್ತೊಂದು ಸಂಭ್ರಮಗಳದ್ದೇ ಸದ್ದಾಗಿದೆ. ಸಂಭ್ರಮದ ಕ್ಷಣಗಳ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇವರ ಮದುವೆ ಕಳೆದ ವರ್ಷವೇ ನಡೆಯಬೇಕಿತ್ತು, ಆದರೆ ಕರೊನಾದಿಂದ ಮುಂದೂಡಲಾಗಿತ್ತು. ಕೊನೆಗೂ ಈ ವರ್ಷ ಮದುವೆಯಾಗುತ್ತಿದ್ದಾರೆ.

    ಇದನ್ನೂ ಓದಿ: ಮದ್ವೆ ಆದ್ಮೇಲೆ ಫಸ್ಟ್​ನೈಟಲ್ಲಿ ಏನ್ಮಾಡ್ತಾರೆ, ಅದ್ನೇ ಮಾಡಿದ್ದೀವಿ..: ನಟಿ ರಚಿತಾ ರಾಮ್​

    ಡಿಸೆಂಬರ್ 1ರ ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಇದರ ನಂತರ ಕಾಕ್‌ಟೇಲ್ ಪಾರ್ಟಿ ಆಯೋಜಿಸಲಾಗಿದೆ. ಇನ್ನು ಕಾವ್ಯಾ ಮದುವೆಯ ದೃಶ್ಯಾವಳಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಮದುವೆ ಬಳಿಕ ಕಾವ್ಯಾ ನಟನೆಗೆ ಬ್ರೇಕ್ ಹಾಕಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಹೀಗಾಗಿ ಮದುವೆಯ ನಂತರವೂ ಅವರು ತಮ್ಮ ನಟನೆಯನ್ನು ಮುಂದುವರಿಸಲಿದ್ದಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.

    ಸಾರ್ವಜನಿಕರಲ್ಲಿ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿದೆ ಬಿಎಸ್​ಎನ್​ಎಲ್​ ಪ್ರೇಮ; ಕಾರಣ ಆ ಮೂವರು…

    ಪುನೀತ್ ಸಾವಿಗೆ ನಿಜವಾದ ಕಾರಣ ಏನು ಎಂಬುದನ್ನು ಬಿಚ್ಚಿಟ್ಟ ರಾಘವೇಂದ್ರ ರಾಜಕುಮಾರ್

    ‘ಲಸಿಕೆ ಹಾಕಿಸಿಕೊಂಡು ನನಗೇನಾದ್ರೂ ಆದ್ರೆ ಏನ್​ ಗತಿ?’ ಎಂದವನಿಗೆ ಗ್ಯಾರಂಟಿ ಪತ್ರಕ್ಕೆ ಸಹಿ ಮಾಡಿ ಲಸಿಕೆ ಹಾಕಿಸಿದ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts