More

    ಬಿಬಿಕೆ 2ನೇ ಇನ್ನಿಂಗ್ಸ್​ನಲ್ಲಿ ಈ ಸ್ಪರ್ಧಿಯದ್ದೇ ಹವಾ ಎಂದ ನೆಟ್ಟಿಗರು: ಟ್ರೋಫಿ ಗೆಲುವುದು ಖಚಿತವಂತೆ!

    ಬೆಂಗಳೂರು: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ತನ್ನ 8ನೇ ಆವೃತ್ತಿಯನ್ನು ಕರೊನಾ ಲಾಕ್​ಡೌನ್​ನಿಂದಾಗಿ 75 ದಿನಗಳಿಗೆ ಮೊಟಕುಗೊಳಿಸಿ ವೀಕ್ಷಕರಿಗೆ ಶಾಕ್​ ನೀಡಿತ್ತು. ಮತ್ತೆ ಶುರುವಾಗುತ್ತೆ ಎಂಬ ಯಾವ ಸುಳಿವು ಇರಲಿಲ್ಲ. ಇದೀಗ ಕರೊನಾ ಲಾಕ್​ಡೌನ್​ ಸಡಿಲವಾಗುತ್ತಿದ್ದಂತೆ ಬಿಗ್​ಬಾಸ್​ ಆರಂಭಕ್ಕೆ ಕ್ಷಣಗಣನೇ ಆರಂಭವಾಗಿದೆ. ಹೌದು. ಮುಂದಿನ ವಾರದಿಂದ ಬಿಗ್​ಬಾಸ್ ತನ್ನ ಎರಡನೇ ಇನ್ನಿಂಗ್ಸ್​ ಆರಂಭಿಸಲಿದೆ.

    ಶೋನಲ್ಲಿ ಮಹಿಳಾ ಸ್ಪರ್ಧಿಗಳ ಬಗ್ಗೆ ಮಾತನಾಡಿದಾಗ ದಿವ್ಯಾ ಉರುಡುಗ ಮತ್ತು ವೈಷ್ಣವಿ ಮೊದಲ ಇನ್ನಿಂಗ್ಸ್​ನಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದರು. ಮನೆಯಿಂದ ಹೊರಬಂದ ನಂತರವೂ ಇಬ್ಬರು ಅಪಾರ ಗಮನವನ್ನು ಮತ್ತು ಖ್ಯಾತಿಯನ್ನು ಪಡೆದಿದ್ದು, ಅವರು ಕೂಡ ನಿರೀಕ್ಷಿಸಿರಲಿಲ್ಲ.

    ಬಿಬಿಕೆ 2ನೇ ಇನ್ನಿಂಗ್ಸ್​ನಲ್ಲಿ ಈ ಸ್ಪರ್ಧಿಯದ್ದೇ ಹವಾ ಎಂದ ನೆಟ್ಟಿಗರು: ಟ್ರೋಫಿ ಗೆಲುವುದು ಖಚಿತವಂತೆ!ಅಂದಹಾಗೆ ವೈಷ್ಣವಿ ಅವರು ಶೋ ಆರಂಭವಾದಾಗಿನಿಂದ ತಮ್ಮ ಆಟದಿಂದ ಮತ್ತು ನೇರ ನುಡಿಯ ವ್ಯಕ್ತಿತ್ವದಿಂದ ವೀಕ್ಷಕರನ್ನು ಪ್ರಭಾವಿತಗೊಳಿಸಿದ್ದಾರೆ. ಈಗಾಗಲೇ ಧಾರಾವಾಹಿ ಮೂಲಕ ಹೆಚ್ಚು ಖ್ಯಾತಿ ಗಳಿಸಿರುವ ವೈಷ್ಣವಿ, ಬಿಗ್​ಬಾಸ್​ ಮೂಲಕ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

    ಇದೀಗ ಬಿಗ್​ಬಾಸ್​ ಎರಡನೇ ಇನ್ನಿಂಗ್ಸ್​ ಘೋಷಣೆ ಮಾಡಿರುವುದರಿಂದ ವೈಷ್ಣವಿ ಅವರನ್ನು ಬಿಗ್​ಬಾಸ್​ ಮನೆಯಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಎರಡನೇ ಇನ್ನಿಂಗ್ಸ್​ನಲ್ಲಿ ವೈಷ್ಣವಿ ಪ್ರಬಲ ಸ್ಪರ್ಧಿಯಾಗಲಿದ್ದಾರೆ ಎಂದು ನೆಟ್ಟಿಗರು ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಟ್ರೋಫಿ ಗೆಲ್ಲವುದು ಕೂಡ ಅವರೇ ಎಂದು ಭವಿಷ್ಯ ನುಡಿದಿದ್ದಾರೆ.

    ಟಾಸ್ಕ್​ ವಿಚಾರದಲ್ಲೂ ಉತ್ತಮವಾದುದ್ದನ್ನೇ ಮಾಡುವ ವೈಷ್ಣವಿ ತನ್ನ ಒಳ್ಳೆಯ ನಿರ್ಧಾರಗಳಿಂದಲೇ ಮನಗೆದ್ದಿದ್ದಾರೆ. ಯಾವುದೇ ವಿವಾದವಿಲ್ಲದೆ, ನಾಟಕ ಮಾಡದೇ ಶೋ ಆರಂಭವಾದಾಗಿನಿಂದ ಯಾರಾದರೂ ಗೌರವ ಕಾಪಾಡಿಕೊಂಡು ಬಂದಿದ್ದರೆ, ಅದು ವೈಷ್ಣವಿ ಎಂಬುದು ವೀಕ್ಷಕರ ಅಭಿಪ್ರಾಯವಾಗಿದೆ. ತನ್ನ ಎಲ್ಲ ಪಾಸಿಟಿವ್​ ವ್ಯಕ್ತಿತ್ವದಿಂದ ವೈಷ್ಣವಿ ಅವರು ಈ ಬಾರಿ ಟ್ರೋಫಿ ಗೆಲ್ಲುವ ಫೇವರಿಟ್​ ಆಗಿದ್ದಾರೆಂದು ನೆಟ್ಟಿಗರು ಭವಿಷ್ಯ ನುಡಿದಿದ್ದಾರೆ.

    ಎರಡನೇ ಇನ್ನಿಂಗ್ಸ್​ನಲ್ಲೂ ವೈಷ್ಣವಿ ತಮ್ಮ ಸಜತೆಯಿಂದಲೇ ಆಟ ಶುರು ಮಾಡಲಿದ್ದಾರೆ ಎಂದಿರುವ ಅಭಿಮಾನಿಗಳು ದಿವ್ಯಾ ಉರುಡುಗರನ್ನು ಬದಿಗೆ ಸರಿಸಿ ಹೆಚ್ಚಿನ ಖ್ಯಾತಿಯನ್ನು ಪಡೆದು ಟ್ರೋಫಿ ಜಯಿಸಿದರು ಅಚ್ಚರಿಪಡಬೇಕಿಲ್ಲ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಇದು ಎಷ್ಟು ನಿಜವಾಗುತ್ತಾ ಎಂಬುದನ್ನು ನೋಡಲು ಶೋ ಮುಗಿಯುವವರೆಗೂ ಕಾದು ನೋಡಬೇಕಿದೆ. (ಏಜೆನ್ಸೀಸ್​)

    5 ಮದುವೆ, 31 ಯುವತಿಯರೊಂದಿಗೆ ಚಾಟ್​, ಅತ್ತಿಗೆಯ ಮೇಲೇ ರೇಪ್.. ಬಯಲಾಗುತ್ತಲೇ ಇದೆ ಬಾಬಾ ರಹಸ್ಯ!

    ಪ್ರಿಯಾಂಕಾ, ಲ್ಯಾಂಗ್​ ಮಂಜುಗಾಗಿ ಕಲರ್ಸ್​ ಕನ್ನಡದ ವಿರುದ್ಧ ತಿರುಗಿಬಿದ್ದ ಬಿಗ್​ಬಾಸ್​ ವೀಕ್ಷಕರು!

    ಡಾ.ರಾಜ್​​-ಅಂಬರೀಷ್ ಹೆಸರಿದೆ, ವಿಷ್ಣುಅಪ್ಪಾಜಿ ಹೆಸರಿಲ್ಲವೇಕೆ? ಮನದ ನೋವನ್ನು ಬಿಚ್ಚಿಟ್ಟ ಅನಿರುಧ್​

    Vaishnavi

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts