ಹೈದರಾಬಾದ್: ಬಾಯ್ಫ್ರೆಂಡ್ ಮೋಸ ಮಾಡಿದ್ದಕ್ಕೆ ಮನನೊಂದು ಟಾಲಿವುಡ್ ಕಿರಿಯ ಕಲಾವಿದೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನ ಬಂಜಾರ ಹಿಲ್ಸ್ನಲ್ಲಿ ನಡೆದಿದೆ.
ಅನುರಾಧ (22) ಮೃತ ಕಲಾವಿದೆ. ಈಕೆ ಫಿಲ್ಮ್ ನಗರದಲ್ಲಿ ಸಹ ಕಿರಿಯ ಕಲಾವಿದ ಕಿರಣ್ ಎಂಬಾತನ ಜತೆ ಕಳೆದ ಮೂರು ತಿಂಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಕೆಳಗಿನ ಕೊಠಡಿಯಲ್ಲಿದ್ದ ಕೆಲ ಯುವಕರು ಅನುರಾಧ ಕೊಠಡಿಯಿಂದ ಗಬ್ಬು ವಾಸನೆ ಬರುತ್ತಿರುವುದನ್ನು ಗಮನಿಸಿ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದರು.
ಅನುಮಾನಗೊಂಡ ಮಾಲೀಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಧಾವಿಸಿದ ಪೊಲೀಸರು ಮನೆಯ ಬಾಗಿಲನ್ನು ಮರಿದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಅನುರಾಧ ಮೃತದೇಹ ಪತ್ತೆಯಾಗಿದೆ. ಆಕೆಯ ಮೃತದೇಹವನ್ನು ವಶಕ್ಕೆ ಪಡೆದಿರುವ ಪೊಲೀಸರು ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ.
ಅನುರಾಧ ಪಾಲಕರು ಕಿರಣ್ ವಿರುದ್ಧ ದೂರು ದಾಖಲಿಸಿದ್ದಾರೆ. ಆರು ವರ್ಷಗಳಿಂದ ನಮ್ಮ ಮಗಳು ಕಿರಣ್ ಎಂಬಾತನ್ನು ಪ್ರೀತಿಸುತ್ತಿದ್ದಳು. ಆಕೆಗೆ ಗೊತ್ತಿಲ್ಲದಂತೆ ಕಿರಣ್ ಇನ್ನೊರ್ವ ಯುವತಿಯ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದನ್ನು. ಇದು ಅನುರಾಧಳಿಗೆ ತಿಳಿದು ಬಾಯ್ಫ್ರೆಂಡ್ನಿಂದ ಮೋಸ ಹೋಗಿದ್ದನ್ನು ಸಹಿಸದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಅನುರಾಧ ಸಹೋದರಿ ಪೊಲೀಸರಿಗೆ ತಿಳಿಸಿದ್ದಾರೆ.
ಅನುಮಾನಸ್ಪದ ಸಾವು ಪ್ರಕರಣವನ್ನು ದಾಖಲಿಸಿರುವ ಬಂಜಾರ ಹಿಲ್ಸ್ ಪೊಲೀಸರು ತನಿಖೆ ಕೈಗೊಂಡಿದ್ದು, ತಲೆಮರೆಸಿಕೊಂಡಿರುವ ಕಿರಣ್ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. (ಏಜೆನ್ಸೀಸ್)
ಡೆತ್ನೋಟ್ ಬರೆದಿಟ್ಟು ಬೆಂಗಳೂರಲ್ಲಿ ಕಿರುತೆರೆ ನಟಿ ಸೌಜನ್ಯ ಆತ್ಮಹತ್ಯೆ
ನಾನು ಕನ್ಯತ್ವ ಕಳೆದುಕೊಂಡಿದ್ದೇನೆ: 7 ವರ್ಷದ ಸಂಬಂಧದ ಬಗ್ಗೆ ಬೋಲ್ಡ್ ಮಾತುಗಳನ್ನಾಡಿದ ಟಾಲಿವುಡ್ ಬ್ಯೂಟಿ
ಸಮಂತಾರ ಈ ನಡೆಯಿಂದ ಅಭಿಮಾನಿಗಳು ಫುಲ್ ಖುಷ್! ಮನಸ್ಸು ಬದಲಿಸಿದ್ರಾ ಸೌತ್ ಬ್ಯೂಟಿ?
ಡಿವೋರ್ಸ್ ವಿಚಾರವಾಗಿ ಕೊನೆಗೂ ಮೌನ ಮುರಿದ ಸಮಂತಾ: ಆದ್ರೆ ಸೌತ್ ಬ್ಯೂಟಿ ಹೇಳಿಕೆಯಿಂದ ಫ್ಯಾನ್ಸ್ ಕನ್ಫ್ಯೂಸ್!