More

    ಭೀಕರ ಅಪಘಾತದಿಂದ ನಟ ಸಾಯಿ ಧರಮ್​ ತೇಜ್ ಬಚಾವ್​ ಆಗಿದ್ಹೇಗೆ? ಅದೊಂದಿಲ್ಲದಿದ್ದರೆ ಬದುಕುತ್ತಿರಲಿಲ್ಲವಂತೆ!

    ಹೈದರಾಬಾದ್​: ಖ್ಯಾತ ತೆಲಗು ನಟ ಸಾಯಿ ಧರಮ್ ತೇಜ್ ಅವರು ಹೈದರಾಬಾದ್​ನ ಮಾದಾಪುರದ ಬಳಿ ಅಪಘಾತಕ್ಕಿಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ (ಸೆ.10) ಸಂಜೆ ಈ ಘಟನೆ ನಡೆದಿದೆ. ಭೀಕರ ಅಪಘಾತವಾದರೂ ಪ್ರಾಣಕ್ಕೆ ಯಾವುದೇ ಕುತ್ತಾಗಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಪೊಲೀಸ್​ ಮೂಲಗಳ ಪ್ರಕಾರ ಧರಮ್​ ತೇಜ್​ ಹೆಲ್ಮೆಟ್​ ಧರಿಸಿದ್ದರಿಂದ ಬದುಕುಳಿದಿದ್ದಾರೆಂದು ತಿಳಿಸಿದ್ದಾರೆ.

    ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹೈದರಾಬಾದ್​ ಪೊಲೀಸರು, ಹೆಲ್ಮೆಟ್​ ಧರಿಸಿದ್ದರಿಂದ ಧರಮ್​ ತೇಜ್​ಗೆ ಹೆಚ್ಚಿನ ಅನಾಹುತ ಆಗಿಲ್ಲ. ಒಂದು ವೇಳೆ ಹಲ್ಮೆಟ್​ ಇರದೇ ಹೋಗಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆ ಇತ್ತು. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದ್ದು, ತಕ್ಷಣ ವಾಹನವನ್ನು ನಿಯಂತ್ರಿಸಲಾಗದೇ ಅಪಘಾತ ಸಂಭವಿಸಿದೆ ಎಂದು ತಿಳಿಸಿದ್ದಾರೆ.

    ಅಪಘಾತದಲ್ಲಿ ತೀವ್ರ ಗಾಯಗಳು ಆಗಿರುವುದರಿಂದ ಧರಮ್​ ತೇಜ್​ ಅವರನ್ನು ಮೊದಲು ಮೆಡಿ ಕವರ್ ಆಸ್ಪತ್ರೆಗೆ ತೆರಳಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ರವಾನಿಸಲಾಗಿದೆ. ಅಂದಹಾಗೆ ಧರಮ್​ ತೇಜ್​, ಮೆಗಾಸ್ಟಾರ್ ಚಿರಂಜೀವಿ ಅವರ ತಂಗಿಯ ಮಗ.

    ಶುಕ್ರವಾರ ಸಂಜೆ ಧರಮ್​ ತೇಜ್​ ಅವರು ತನ್ನ Triumph Sports ಬೈಕ್​​​ನಲ್ಲಿ ಜುಬ್ಲಿ ಹಿಲ್ಸ್​ನಿಂದ ಗಾಚಿಬೌಲಿ ಕಡೆ ಹೋಗುತ್ತಿದ್ದರು. ರಸ್ತೆಯ ಮೇಲೆ ಮರಳು ಇದ್ದಿದ್ದರಿಂದ ಬೈಕ್ ಕಂಟ್ರೋಲ್ ತಪ್ಪಿ ಸ್ಕಿಡ್ ಆಗಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಅಪಘಾತದಿಂದಾಗಿ ಧರಮ್​ ತೇಜ್​ ಅವರಿಗೆ ಕ್ಲಾವಿಕಲ್ ಮೂಳೆ ಮುರಿತ ಮತ್ತು ತಲೆ ಹಾಗೂ ಎದೆಗೆ ತೀವ್ರ ಗಾಯಗಳು ಆಗಿದ್ದರೂ, ಪ್ರಾಣಕ್ಕೆ ಯಾವುದೇ ಕುತ್ತು ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ.

    ನಟ ಸಾಯಿ ಅವರನ್ನು ನೋಡಲು ನಟ ಚಿರಂಜೀವಿ, ನಟ ಪವನ್ ಕಲ್ಯಾಣ್, ನಟ ವೈಷ್ಣವ ತೇಜ್, ಅಲ್ಲು ಅರವಿಂದ್ ಮತ್ತು ಇತರ ಕುಟುಂಬಸ್ಥರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಸಂಬಂಧ ಸೈಬರಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಮಗ್ರ ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಗಣೇಶ ಹಬ್ಬದಂದೇ ಮೆಗಾಸ್ಟಾರ್​ ಕುಟುಂಬಕ್ಕೆ ಶಾಕ್​: ಭೀಕರ ಅಪಘಾತದಿಂದ ನಟ ಸಾಯಿ ಧರಮ್​ ತೇಜ್ ಸ್ಥಿತಿ ಗಂಭೀರ​

    VIDEO| ಕಂಠಪೂರ್ತಿ ಕುಡಿದ ಯುವತಿಯಿಂದ ರಸ್ತೆಯಲ್ಲೇ ಹೈಡ್ರಾಮ: ಆಕೆಯ ಆಟಾಟೋಪಕ್ಕೆ ಯೋಧನೆ ಕಂಗಾಲು!

    ಮೊಬೈಲ್ ಜಪ್ತಿಯಾದ್ರೆ ಅವನ ಪತ್ನಿಯು ಮುಖ ನೋಡೋದಿಲ್ಲ: ಸಂಬರಗಿ ರಹಸ್ಯ ಬಿಚ್ಚಿಟ್ಟ ಚಂದ್ರಚೂಡ್​!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts