ಹೈದರಾಬಾದ್: ಅಕ್ಕಿನೇನಿ ನಾಗಾರ್ಜುನ, ನಾಗಚೈತನ್ಯ, ರಮ್ಯಾಕೃಷ್ಣ ಮತ್ತು ಕೃತಿಶೆಟ್ಟಿ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ “ಬಂಗಾರರಾಜು” ಚಿತ್ರದ ಜನವರಿ 14ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಇಡೀ ಚಿತ್ರತಂಡ ಪ್ರಚಾರದ ಕೆಲಸದಲ್ಲಿ ಬಿಜಿಯಾಗಿದ್ದು, ಇದರ ನಡುವೆ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ ಮಾಡಿದ ಮಾಧ್ಯಮಗಳ ವಿರುದ್ಧ ನಟ ನಾಗಚೈತನ್ಯ ಹರಿಹಾಯ್ದಿದ್ದಾರೆ.
ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಆಗಿ ಸಾಕಷ್ಟು ದಿನಗಳೇ ಕಳೆದಿದ್ದರೂ ಮಾಧ್ಯಮಗಳು ಮಾತ್ರ ಆ ಬಗ್ಗೆ ಈಗಲೂ ಪ್ರಶ್ನಿಸುವುದನ್ನು ಕೇಳಿ ನಾಗಚೈತನ್ಯ ಕುಪಿತಗೊಂಡರು. ಬಂಗಾರರಾಜು ಚಿತ್ರದ ಪ್ರಚಾರದ ವೇಳೆ ಮಾಧ್ಯಮದವರು ಡಿವೋರ್ಸ್ ವಿಚಾರ ಪ್ರಸ್ತಾಪಿಸಿದ್ದಕ್ಕೆ ಗರಂ ಆದ ನಾಗಚೈತನ್ಯ, ಇಬ್ಬರ ಒಳಿತಿಗಾಗಿ ಇಬ್ಬರು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಅವರು ಕೂಡ ಸಂತೋಷವಾಗಿದ್ದಾರೆ ಮತ್ತು ನಾನು ಕೂಡ ಸಂತೋಷವಾಗಿದ್ದೇನೆ ಎಂದು ಹೇಳಿದರು.
ಇದಾದ ಬಳಿಕ ಆಂಧ್ರದ ಸಿನಿಮಾ ಟಿಕೆಟ್ ದರ ಕಡಿತದ ಬಗ್ಗೆ ಮಾತನಾಡಿದ ನಾಗಚೈತನ್ಯ, ದರ ಇಳಿಕೆಯಿಂದ ನಮಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಿದ್ದ ತಂದೆ ನಾಗಾರ್ಜುನರ ಹೇಳಿಕೆಯನ್ನು ಮಗ ಕೂಡ ಬೆಂಬಲಿಸಿದರು. ದರ ಏರಿಕೆ ಬಗ್ಗೆ ಚರ್ಚೆಯಾದಾಗ ಬಜೆಟ್ ಒಳಗೆ ಸಿನಿಮಾ ಮುಗಿಸಲು ಮೊದಲೇ ಪ್ಲಾನ್ ಮಾಡಿದ್ದೆವು ಎಂದಿದ್ದಾರೆ.
ಒಂದು ವೇಳೆ ಸಿನಿಮಾ ಟಿಕೆಟ್ ದರ ಮತ್ತೆ ಏರಿಕೆಯಾದರೆ, ನಮಗದು ಬೋನಸ್ ಇದ್ದಂಗೆ. ಏನೇ ಇರಲಿ ಬಂಗಾರರಾಜು ಸಿನಿಮಾ ಜನವರಿ 14ರಂದು ಬಿಡುಗಡೆಯಾಗಲಿದೆ ಎಂದು ನಾಗಚೈತನ್ಯ ಹೇಳಿದರು. ಆದರೆ, ಚಿತ್ರರಂಗದಲ್ಲಿ ಬಹುತೇಕರು ದರ ಇಳಿಕೆಯನ್ನು ಖಂಡಿಸಿದ್ದಾರೆ. ಬಿಗ್ ಬಜೆಟ್ ಸಿನಿಮಾಗಳಿಗೆ ಇದರಿಂದ ಹೊಡೆತ ಬೀಳಲಿದೆ ಎಂದು ಅನೇಕ ನಟರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಆಂಧ್ರ ಸರ್ಕಾರ ಮಾತ್ರ ದರ ಇಳಿಕೆ ನಿಲುವಿನಿಂದ ಬದಲಾಗಿಲ್ಲ. ಇದೀಗ ಚಿತ್ರರಂಗದಲ್ಲಿ ಭಿನ್ನ ನಿಲುವು ಇರುವುದನ್ನು ನೋಡಿದರೆ ಟಾಲಿವುಡ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತೆ ಕಾಣುತ್ತದೆ. (ಏಜೆನ್ಸೀಸ್)
ಸೈನಾ ನೆಹ್ವಾಲ್ ಬಳಿ ಕ್ಷಮೆಯಾಚಿಸಿದ್ರೂ ಮುಗಿಯದ ವಿವಾದ: ತೀವ್ರ ಟೀಕೆಯ ಬಳಿಕ ಸಿದ್ಧಾರ್ಥ್ಗೆ ಮತ್ತೊಂದು ಶಾಕ್!
ಶೂನ್ಯ ಕೋವಿಡ್ ನಿಯಮ: ಚೀನಾ ಜನರ ಸದ್ಯದ ಪರಿಸ್ಥಿತಿ ನೋಡಿದ್ರೆ ಬೆಚ್ಚಿಬೀಳೋದು ಗ್ಯಾರೆಂಟಿ..!
ಐಪಿಎಲ್ ಹೊಸ ತಂಡಗಳಿಗೆ ಹರಾಜಿಗೆ ಮುನ್ನವೇ 3 ಆಟಗಾರರು; ರಾಹುಲ್, ಹಾರ್ದಿಕ್ಗೆ ಸಾರಥ್ಯ?