ಚೆನ್ನೈ: ಇಂದಿಗೂ ಸಾವಿರಾರು ಅಭಿಮಾನಿಗಳ ಮನದಲ್ಲಿ ತಮ್ಮದೇ ಆದ ಸ್ಥಾನ ಪಡೆದಿರುವ ಎವರ್ಗ್ರೀನ್ ನಟಿಯರಲ್ಲಿ ಒಬ್ಬರೆಂದರೆ ಅದು ಖುಷ್ಬೂ ಮಾತ್ರ. ಅವರ ಮೇಲಿನ ಅಭಿಮಾನ ಎಷ್ಟರಮಟ್ಟಿಗೆ ಇದೆ ಅಂದ್ರೆ ಅವರ ಹೆಸರಲ್ಲಿ ಅಭಿಮಾನಿಗಳು ದೇವಸ್ಥಾನವನ್ನೇ ನಿರ್ಮಿಸಿದ್ದಾರೆ. ಇದೀಗ ಖುಷ್ಬೂ ಅವರ ನಯಾ ಅವತಾರವನ್ನು ನೋಡಿ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ಹೌದು, ಬರೋಬ್ಬರಿ 12 ಕೆಜಿ ತೂಕ ಇಳಿಸಿಕೊಂಡಿರುವ ಖುಷ್ಬೂ ಚಿರಯುವತಿಯಂತೆ ಕಂಗೊಳಿಸುತ್ತಿದ್ದಾರೆ. ಇನ್ನು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಖುಷ್ಬೂ ಅಭಿಮಾನಿಗಳೊಂದಿಗೆ ಚಾಟ್ ಕೂಡ ಮಾಡುತ್ತಿರುತ್ತಾರೆ. ಇದೀಗ ಅವರ ಹೊಸ ಲುಕ್ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲೂ ಓರ್ವ ಅಭಿಮಾನಿ ಖುಷ್ಬೂ ಸೌಂದರ್ಯಕ್ಕೆ ಮಾರು ಹೋಗಿ ಮದುವೆ ಪ್ರಸ್ತಾಪವನ್ನೇ ಮುಂದಿಟ್ಟಿದ್ದಾನೆ. ನಾನು ನಿಮ್ಮನ್ನು ಮದುವೆ ಆಗಲು ಬಯಸಿದ್ದೇನೆ ಮೇಡಂ ಎಂದು ಕೇಳಿದ್ದಾನೆ.
Oh oh.. sorry you are late. A little over 21 yrs late to be precise. But let me check with my husband anyways. 😂😂😂😂😂🥰 https://t.co/Naf3ixoaF8
— KhushbuSundar (@khushsundar) August 22, 2021
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಖುಷ್ಬೂ, ಓ..ಓ ಕ್ಷಮಿಸಿ ನೀವು ತುಂಬಾ ತಡವಾಗಿದ್ದೀರಿ. ನಿಖರವಾಗಿ ಹೇಳುವುದಾದರೆ 21 ವರ್ಷಕ್ಕಿಂತ ಸ್ವಲ್ಪ ತಡವಾಗಿದೆ. ಆದರೂ ನನ್ನ ಗಂಡನೊಂದಿಗೆ ಪರಿಶೀಲಿಸೋಣ ಎಂದಿದ್ದಾರೆ. ಖುಷ್ಬೂ ಅವರು ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
36 yrs ago..😇😇❤ https://t.co/2W32p9mGTX
— KhushbuSundar (@khushsundar) August 23, 2021
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಅಣ್ಣಾತೆ ಚಿತ್ರದಲ್ಲಿ ಖುಷ್ಬೂ ನಟಿಸಲಿದ್ದಾರೆ. ಈ ಚಿತ್ರವನ್ನು ಶಿವ ಅವರು ನಿರ್ದೇಶನ ಮಾಡಿದ್ದು, ಮೀನಾ, ನಯನತಾರ, ಕೀರ್ತಿ ಸುರೇಶ್, ಪ್ರಕಾಶ್ ಸೇರಿದಂತೆ ಬಹುದೊಡ್ಡ ತಾರಾ ಬಳಗವೇ ಇದೆ.
When hard work yields results, the happiness cannot be explained. ❤❤ pic.twitter.com/x68fEjFBTg
— KhushbuSundar (@khushsundar) August 21, 2021
ಗೋಕುಲತಿಲ್ ಸೀತಾಯಿ ಎಂಬ ಶೋ ಮೂಲಕ ಖುಷ್ಬೂ ಅವರು ಕಿರುತೆರೆಗೂ ಮರಳಿದ್ದಾರೆ. ಕೆಲವು ದಿನಗಳ ಹಿಂದೆ ನಡೆದ ತಮಿಳುನಾಡು ಚುನಾವಣೆಗಳ ಸಂದರ್ಭದಲ್ಲಿ ದುಂಡಗಿದ್ದ ಖುಷ್ಬೂ, ಇತ್ತೀಚಿಗೆ ಸಖತ್ ವರ್ಕೌಟ್ ಮಾಡಿ ತೂಕ ಇಳಿಸಿಕೊಂಡು ಮತ್ತೆ ಬಣ್ಣದ ಲೋಕಕ್ಕೆ ಮರಳಿರುವುದು ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿಯಾಗಿದೆ. (ಏಜೆನ್ಸೀಸ್)
ಸಿಇಟಿ ಸಕ್ಸಸ್ಗೆ ಕೆಇಎ ಸೂತ್ರ; ವಿಜಯವಾಣಿ ಕ್ಲಬ್ನಲ್ಲಿ ಕೆಇಎ ಇಡಿ ಎಸ್.ರಮ್ಯಾ ಭರವಸೆ