ಹೈದರಾಬಾದ್: ಸಮಂತಾ ಮತ್ತು ನಾಗಚೈತನ್ಯ ಕಳೆದ ಅಕ್ಟೋಬರ್ 2ರಂದೇ ಡಿವೋರ್ಸ್ ಪಡೆದುಕೊಂಡಿರುವ ವಿಚಾರ ಎಲ್ಲರಿಗೂ ತಿಳಿದಿದೆ. ಇಬ್ಬರು ಬೇರೆಯಾಗಿ ಮೂರು ತಿಂಗಳು ಸಮೀಪಿಸುತ್ತಿದ್ದರೂ, ಮಾಜಿ ತಾರಾದಂಪತಿ ಬಗೆಗಿನ ಚರ್ಚೆ ಮಾತ್ರ ಇನ್ನು ಕಡಿಮೆಯಾಗಿಲ್ಲ. ಚಾಯ್ಸ್ಯಾಮ್ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ತಾಜಾ ಬೆಳವಣಿಗೆಯಂದರೆ ಡಿವೋರ್ಸ್ ಪಡೆದಾಗಿನಿಂದ ಇದೇ ಮೊದಲ ಬಾರಿಗೆ ಒಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಹೈದರಾಬಾದ್ನ ರಾಮನಾಯ್ಡು ಸ್ಟುಡಿಯೋದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಒಟ್ಟಿಗೆ ಅಂದರೆ ಇಬ್ಬರು ಜತೆಯಾಗಿ ಅಲ್ಲ. ಒಂದೇ ಸ್ಟುಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ನಾಗಚೈತನ್ಯ ಬಂಗಾರರಾಜು ಸಿನಿಮಾದ ಶೂಟಿಂಗ್ನಲ್ಲಿ ಬಿಜಿಯಾಗಿದ್ದರೆ, ಸಮಂತಾ ತಮ್ಮ ಯಶೋಧ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಎರಡು ಚಿತ್ರದ ಚಿತ್ರೀಕರಣ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆಯಿತು.
ಇಬ್ಬರು ಒಂದೇ ಶೂಟಿಂಗ್ ಸ್ಥಳದಲ್ಲಿರುವುದು ಇಬ್ಬರಿಗೂ ತಿಳಿದಿತ್ತು. ಆದರೂ ಪರಸ್ಪರ ಇಬ್ಬರು ಮಾತನಾಡದೇ ತಮ್ಮ ತಮ್ಮ ಕೆಲಸ ಮುಗಿಸಿಕೊಂಡು ಕಾರನ್ನೇರಿ ಹೊರಟು ಹೋದರು ಎಂದು ತಿಳಿದುಬಂದಿದೆ.
ಡಿವೋರ್ಸ್ ಆದಾಗಿನಿಂದ ಇಬ್ಬರು ಸುದ್ದಿಯಲ್ಲಿದ್ದಾರೆ. ಇಬ್ಬರ ಡಿವೋರ್ಸ್ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇಬ್ಬರು ಬೇರೆಯಾಗದಂತೆ ಅಭಿಮಾನಿಗಳು ಸಾಕಷ್ಟು ಮನವಿಗಳನ್ನು ಮಾಡಿಕೊಂಡರೂ ಕೂಡ ಇಬ್ಬರು ತಮ್ಮ ನಿಲುವುವನ್ನು ಬದಲಿಸಿದೇ ಅಕ್ಟೋಬರ್ 2ರಂದು ಡಿವೋರ್ಸ್ ಘೋಷಿಸಿದರು.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸಮಂತಾ ಶಾಕುಂತಲ ಚಿತ್ರವನ್ನು ಮುಗಿಸಿದ್ದು, ಯಶೋಧ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಲ್ಲದೆ, ಪುಷ್ಪ ಚಿತ್ರದಲ್ಲಿ ಐಟಂ ಸಾಂಗ್ಗೆ ಹೆಜ್ಜೆ ಹಾಕುವ ಮೂಲಕ ಭಾರಿ ಸುದ್ದಿಯಾಗಿದ್ದು, ಸಾಲು ಸಾಲು ಚಿತ್ರಗಳಲ್ಲಿ ಸಮಂತಾ ಬಿಜಿಯಾಗಿದ್ದಾರೆ. ಇನ್ನು ನಾಗಚೈತನ್ಯ ಬಂಗಾರರಾಜು ಸಿನಿಮಾದ ಶೂಟಿಂಗ್ ಮುಗಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅಲ್ಲದೆ, ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡ ಸಿನಿಮಾದಲ್ಲೂ ನಾಗಚೈತನ್ಯ ನಟಿಸಿದ್ದು, ಮೊದಲ ಬಾರಿಗೆ ಬಾಲಿವುಡ್ ಪದಾರ್ಪಣೆ ಮಾಡಿದ್ದಾರೆ. ಈ ಚಿತ್ರ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ. (ಏಜೆನ್ಸೀಸ್)
ಪುಷ್ಪ ಚಿತ್ರದ ಬಗ್ಗೆ ಕೇಳಿ ಭಯವಾಗ್ತಿದೆ: ಮುಂದಾಗುವ ಅನಾಹುತಗಳ ಬಗ್ಗೆ ಅರಣ್ಯಾಧಿಕಾರಿಗಳ ಕಳವಳ
ನಿನ್ನೆ ರಾತ್ರಿ ಎಂಜಿ ರೋಡಿನಲ್ಲಿ ಬಾಯ್ಫ್ರೆಂಡ್ ಜತೆಗೂಡಿ ನಟಿ ದಿವ್ಯಾ ಸುರೇಶ್ ಹೈಡ್ರಾಮ: ಪೊಲೀಸರಿಗೆ ಅವಾಜ್
ಸೇಲ್ಸ್ಮನ್ ಆಗಿದ್ದ ಪಿಯೂಷ್ ಜೈನ್ 300 ಕೋಟಿ ಒಡೆಯನಾಗಿದ್ಹೇಗೆ? ಇಲ್ಲಿದೆ ಯಾರಿಗೆ ಗೊತ್ತಿರದ ಸಂಗತಿ