ಬೆಂಗಳೂರು: ಸ್ಟಾರ್ ಡೈರೆಕ್ಟರ್ ರಾಜಮೌಳಿ ನಿರ್ದೇಶನದ ಹಾಗೂ ಜೂ. ಎನ್ಟಿಆರ್ ಮತ್ತು ರಾಮ್ಚರಣ್ ನಟನೆಯ ಬಹುನಿರೀಕ್ಷಿತ “ಆರ್ಆರ್ಆರ್” ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಜನವರಿ 7ರಂದು ಚಿತ್ರ ಬಿಡುಗಡೆಯಾಗಲಿದ್ದು, ಜೂ. ಎನ್ಟಿಆರ್ ಹಾಗೂ ರಾಮ್ಚರಣ್ ಅಭಿಮಾನಿಗಳು ಬಹಳ ಕಾತರದಿಂದ ಎದುರು ನೋಡುತ್ತಿದ್ದಾರೆ. ಆರ್ಆರ್ಆರ್ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಚಿತ್ರತಂಡ ಭರ್ಜರಿ ಪ್ರಚಾರದಲ್ಲಿ ತೊಡಗಿಕೊಂಡಿದೆ.
ಈಗಾಗಲೇ ಮುಂಬೈನಲ್ಲಿ ಪ್ರಿ ರಿಲೀಸ್ ಈವೆಂಟ್ ನಡೆಸಿರುವ ಆರ್ಆರ್ಆರ್ ಚಿತ್ರತಂಡ ಇದೀಗ ಬೆಂಗಳೂರಿನಲ್ಲಿ ಈವೆಂಟ್ ನಡೆಸಲು ಮುಂದಾಗಿದೆ. ಇದೇ ಭಾನುವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈವೆಂಟ್ ನಡೆಯಲಿದ್ದು, ಶಿವಣ್ಣ, ಉಪೇಂದ್ರ ಹಾಗೂ ಧ್ರುವ ಸರ್ಜಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ಇದೆ.
ಆದರೆ, ಈ ಕಾರ್ಯಕ್ರಮಕ್ಕೆ ಸರ್ಕಾರದಿಂದ ಅನುಮತಿ ಸಿಗುತ್ತಾ ಎಂಬುದೇ ಇದೀಗ ಪ್ರಶ್ನೆಯಾಗಿದೆ. ಏಕೆಂದರೆ, ಕರೊನಾ ರೂಪಾಂತರಿ ಒಮಿಕ್ರಾನ್ ಹಿನ್ನಲೆಯಲ್ಲಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿದೆ. ಇತ್ತ ಚಿತ್ರತಂಡ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ತಯಾರಿ ನಡೆಸಿದ್ದು, ಇದಕ್ಕೆ ಸರ್ಕಾರ ಅನುಮತಿ ಕೊಡುತ್ತಾ ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್)
ರಿಲೀಸ್ಗೂ ಮುನ್ನ ಜೂ. ಎನ್ಟಿಆರ್-ರಾಮ್ಚರಣ್ ಫ್ಯಾನ್ಸ್ ಮಧ್ಯೆ ಕಿಡಿಹೊತ್ತಿಸಿದ RRR ಚಿತ್ರದ ಮೊದಲ ವಿಮರ್ಶೆ
ಬೆಂಗ್ಳೂರಲ್ಲಿ ನಿಗೂಢ ಪ್ರಕರಣ: ಆತ್ಮಗಳ ಜತೆ ಮಾತನಾಡ್ತೇನೆಂದು ಬಾಲಕಿಯ ವಿಚಿತ್ರ ವರ್ತನೆ, ದಿಢೀರ್ ನಾಪತ್ತೆ!
ಮಹಿಳೆಗೆ ಹುಟ್ಟಿತು ಪ್ಲಾಸ್ಟಿಕ್ ಮಗು: ಓ ಮೈ ಗಾಡ್ ಎಂದ ವೈದ್ಯರು- ಈ ಶಿಶು ಜನಿಸಿದ್ದು ಹೇಗೆ?