More

    ನಾನು ಆದಷ್ಟು ಬೇಗ ಸಾಯಬೇಕೆಂಬ ನಿಮ್ಮ ಬಯಕೆಯನ್ನು ದೇವರು ಈಡೇರಿಸಲಿ! ಸಂಕ್ರಾಂತಿ ಶುಭಕೋರಿದ ಆರ್​ಜಿವಿ

    ಮುಂಬೈ: ನಿರ್ದೇಶಕ ರಾಮ್​ ಗೋಪಾಲ್​ ವರ್ಮಾ ಅವರು ವಿವಾದಗಳ ಕೇಂದ್ರ ಬಿಂದು ಎಂಬುದು ಗೊತ್ತಿರುವ ವಿಚಾರ. ಸದಾ ವಿವಾದಗಳನ್ನೇ ಹುಟ್ಟುಹಾಕವ ಮೂಲಕ ಸುದ್ದಿಯಾಗುವುದೇ ಇವರ ಖಯಾಲಿ ಮತ್ತು ಏನೇ ಮಾಡಿದರೂ ವಿಭಿನ್ನವಾಗಿ ಮಾಡಬೇಕೆನ್ನುವುದು ಅವರ ಹಂಬಲ. ಇದೀಗ ಮಕರ ಸಂಕ್ರಾಂತಿಯಂದು ದೇಶದ ಜನತೆಗೆ ಶುಭಕೋರುವ ವಿಚಾರದಲ್ಲೂ ವಿಭಿನ್ನತೆಯನ್ನು ಆರ್​ಜಿವಿ ಮೆರೆದಿದ್ದಾರೆ.

    ಹಬ್ಬದ ಶುಭಕೋರಲು ಆರ್​ಜಿವಿ ಸರಣಿ ಟ್ವೀಟ್​ ಮಾಡಿದ್ದು, ಅದನ್ನು ನೋಡಿ ಅನೇಕ ನೆಟ್ಟಿಗರು ಹೌಹಾರಿದ್ದಾರೆ. ಮೊದಲ ಟ್ವೀಟ್​ನಲ್ಲಿ ಎಲ್ಲರಿಗೂ ಮಕರ ಸಂಕ್ರಾಂತಿಯ ಶುಭಕೋರಿದ್ದಾರೆ. ಮುಕೇಶ್​ ಅಂಬಾನಿಗಿಂತ ಹೆಚ್ಚಿನ ಹಣ ಮತ್ತು ದೊಡ್ಡ ಮನೆಯನ್ನು ದೇವರು ಕರುಣಿಸಲಿ ಮತ್ತು ಪ್ರಸ್ತುತ ಹಾಗೂ ಭವಿಷ್ಯದಲ್ಲಿ ನಿಮಗೆ ಯಾವುದೇ ವೈರಸ್​ ತಗುಲದಿರಲಿ ಮತ್ತು ಎಲ್ಲ ಗಂಡು ಮಕ್ಕಳಿಗೆ ವಿಶ್ವದಲ್ಲೇ ಅತ್ಯಂತ ಸುಂದರಿಯರು ಸಿಗಲಿ ಹಾಗೂ ಎಲ್ಲ ಹೆಣ್ಣು ಮಕ್ಕಳಿಗೆ ವಿಶ್ವದಲ್ಲೇ ಅತ್ಯಂತ ಹ್ಯಾಂಡ್ಸಮ್​ ಬಾಯ್​ ಸಿಗಲಿ ಎಂದು ಆರ್​ಜಿವಿ ಶುಭಕೋರಿದ್ದಾರೆ.

    ಎರಡನೇ ಟ್ವೀಟ್​ನಲ್ಲಿ ಸಮಸ್ತ ಗಂಡಂದಿರ ಸಮುದಾಯಕ್ಕೆ ಆರ್​ಜಿವಿ ಶುಭಕೋರಿದ್ದು, ನಿಮ್ಮ ನಿಮ್ಮ ಹೆಂಡತಿಯರು ನೀವು ಹೇಳಿದಂತೆಯೇ ಕೇಳಲಿ ಮತ್ತು ನೀವು ಏನೇ ಮಾಡಿದರೂ, ಮಾಡದಿದ್ದರೂ ಓಕೆ ಎನ್ನಬೇಕು ಅನ್ನುವ ನಿಮ್ಮ ಬಯಕೆಯನ್ನು ದೇವರು ಈಡೇರಿಸಲಿ ಎಂದಿದ್ದಾರೆ.

    ಮೂರನೇ ಟ್ವೀಟ್​ನಲ್ಲಿ ಸಣ್ಣ ಸಿನಿಮಾ ತಯಾರಿಕರಿಗೆ ಶುಭಕೋರಿದ್ದು, ನಿಮ್ಮ ಎಲ್ಲ ಸಣ್ಣ ಸಿನಿಮಾಗಳು ಬಾಹುಬಲಿಗಿಂತ ಹೆಚ್ಚಿನ ಯಶಸ್ಸು ದೊರೆಯಲಿ ಎಂದಿದ್ದಾರೆ. ಕೊನೆಯ ಟ್ವೀಟ್​ನಲ್ಲಿ ತಮ್ಮ ಶತ್ರುಗಳಿಗೆ ಶುಭಕೋರುವ ಮೂಲಕ ಆರ್​ಜಿವಿ ತಿರುಗೇಟು ನೀಡಿದ್ದಾರೆ. ಎಲ್ಲ ನನ್ನ ಶತ್ರುಗಳಿಗೆ ನಾನು ಆದಷ್ಟು ಬೇಗ ಸಾಯಬೇಕು ಎಂಬ ನಿಮ್ಮ ಬಯಕೆಯನ್ನು ದೇವರು ಈಡೇರಿಸಲಿ ಎಂದಿದ್ದಾರೆ. ಈ ರೀತಿಯ ಸರಣಿ ಟ್ವೀಟ್​ ಮೂಲಕ ಆರ್​ಜಿವಿ ಮತ್ತೆ ಸುದ್ದಿಯಲ್ಲಿದ್ದಾರೆ.

    ಇತ್ತೀಚೆಗಷ್ಟೇ ಸಿನಿಮಾ ಟಿಕೆಟ್‌ಗಳ ಬೆಲೆಯನ್ನು ಇಳಿಸಲು ಎಪಿ ಸರ್ಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಆರ್​ಜಿವಿ ಸರಣಿ ಟ್ವೀಟ್‌ಗಳು ಮತ್ತು ವೀಡಿಯೊಗಳ ಮೂಲಕ ಪ್ರಶ್ನೆ ಮಾಡಿದ್ದರು. (ಏಜೆನ್ಸೀಸ್​)

    ಈತ ಸಾಮಾನ್ಯನಲ್ಲ… 5 ನಿಮಿಷದಲ್ಲಿ 102 ಕೆಜಿ ಗಾತ್ರದ ಗುಂಡುಕಲ್ಲನ್ನು 30 ಬಾರಿ ಎತ್ತಿದ ಬಲಭೀಮ!

    ಪೈಲಟ್​ ದಿಗ್ಭ್ರಮೆ… ಸೇನಾ ಹೆಲಿಕಾಪ್ಟರ್​ ಪತನಕ್ಕೆ ನಿಖರ ಕಾರಣ ತಿಳಿಸಿದ ತನಿಖಾಧಿಕಾರಿಗಳು!

    ನಟಿ ಸಮಂತಾ, ನಾಗಚೈತನ್ಯ ಮತ್ತು ನಾಗಾರ್ಜುನರನ್ನು ನೋಡಿ ಈ ವಿಚಾರವನ್ನು ಕಲಿಯಬೇಕಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts