More

    ಯುವತಿಯರು ವಾಸವಿದ್ದ ಬಾಡಿಗೆ ಮನೆಯ ಗುಟ್ಟು ದಿಢೀರ್​ ಪೊಲೀಸ್​ ದಾಳಿಯಿಂದ ರಟ್ಟು!

    ಕರ್ನೂಲ್​: ಸ್ಥಳೀಯರ ಮಾಹಿತಿ ಮೇರೆಗೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯ​ ಮಾಧವಿನಗರದ ಬಾಡಿಗೆ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರಿಂದ ವೇಶ್ಯಾವಾಟಿಕೆ ದಂಧೆ ಬಯಲಾಗಿದೆ.

    ಕರ್ನೂಲ್​ನ ಹೊರವಲಯದ ಮಾಧವಿನಗರದ ಸ್ಟೇಟ್​ ಬ್ಯಾಂಕ್​ ಕಾಲನಿಯಲ್ಲಿ ವೆಂಕಟೇಶ್ವರ್​ ಮತ್ತು ಕೀರ್ತಿ ಎಂಬುವರು ಬಾಡಿಗೆ ಮನೆ ಪಡೆದು, ಆಂಧ್ರದ ವಿವಿಧ ಭಾಗಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಇದು ಸ್ಥಳೀಯರ ಗಮನಕ್ಕೆ ಬಂದು, ಭಾನುವಾರ ಥರ್ಡ್​ ಟೌನ್​ ಪೊಲೀಸರಿಗೆ ದೂರು ನೀಡಿದ್ದರು. ದಾಳಿ ನಡೆಸಿದಾಗ ಕಿಂಗ್​ಪಿನ್​ ವೆಂಕಟೇಶ್ವರ್​ ಸಿಕ್ಕಿಬಿದ್ದಿದ್ದಾನೆ.

    ದಾಳಿ ವೇಳೆ ಸ್ಥಳದಲ್ಲಿದ್ದ ಜಾಕೀರ್​ ಹುಸೇನ್​ನನ್ನು ಸಹ ವಶಕ್ಕೆ ಪಡೆಯಲಾಗಿದೆ. ಆಂಧ್ರದ ಗುಂಟೂರು ಮತ್ತು ಅಲ್ಲಗಡ್ಡ ಏರಿಯಾದಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಯುವತಿಯರನ್ನು ವಶಕ್ಕೆ ಪಡೆಯಲಾಗಿದ್ದು, ಅವರಿಗೆ ಆಪ್ತ ಸಮಾಲೋಚನೆ ಕೊಡಿಸಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

    ಕೀರ್ತಿ ಮತ್ತು ವೆಂಕಟೇಶ್ವರ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಕೀರ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಮತ್ತು ವಿಚಾರಣೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್​)

    ಚಿನ್ನ ಕಳ್ಳತನದ ಕಿಂಗ್​ಪಿನ್ ಅರೆಸ್ಟ್; ಖಾಕಿ ಮಧ್ಯಸ್ಥಿಕೆಯಲ್ಲೇ ಡೀಲಿಂಗ್ ನಡೆಸುತ್ತಿದ್ದ ಆರೋಪಿ

    ದುಬಾರಿ ಸೀತೆ; 12 ಕೋಟಿ ರೂ. ಸಂಭಾವನೆ ಕೇಳಿದರಂತೆ ಕರೀನಾ

    ಚಿರು ಸರ್ಜಾ ನೆನಪಲ್ಲಿ ಒಂದು ವರ್ಷ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts