ಕರ್ನೂಲ್: ಸ್ಥಳೀಯರ ಮಾಹಿತಿ ಮೇರೆಗೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಮಾಧವಿನಗರದ ಬಾಡಿಗೆ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರಿಂದ ವೇಶ್ಯಾವಾಟಿಕೆ ದಂಧೆ ಬಯಲಾಗಿದೆ.
ಕರ್ನೂಲ್ನ ಹೊರವಲಯದ ಮಾಧವಿನಗರದ ಸ್ಟೇಟ್ ಬ್ಯಾಂಕ್ ಕಾಲನಿಯಲ್ಲಿ ವೆಂಕಟೇಶ್ವರ್ ಮತ್ತು ಕೀರ್ತಿ ಎಂಬುವರು ಬಾಡಿಗೆ ಮನೆ ಪಡೆದು, ಆಂಧ್ರದ ವಿವಿಧ ಭಾಗಗಳಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಇದು ಸ್ಥಳೀಯರ ಗಮನಕ್ಕೆ ಬಂದು, ಭಾನುವಾರ ಥರ್ಡ್ ಟೌನ್ ಪೊಲೀಸರಿಗೆ ದೂರು ನೀಡಿದ್ದರು. ದಾಳಿ ನಡೆಸಿದಾಗ ಕಿಂಗ್ಪಿನ್ ವೆಂಕಟೇಶ್ವರ್ ಸಿಕ್ಕಿಬಿದ್ದಿದ್ದಾನೆ.
ದಾಳಿ ವೇಳೆ ಸ್ಥಳದಲ್ಲಿದ್ದ ಜಾಕೀರ್ ಹುಸೇನ್ನನ್ನು ಸಹ ವಶಕ್ಕೆ ಪಡೆಯಲಾಗಿದೆ. ಆಂಧ್ರದ ಗುಂಟೂರು ಮತ್ತು ಅಲ್ಲಗಡ್ಡ ಏರಿಯಾದಿಂದ ಯುವತಿಯರನ್ನು ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿದ್ದರು. ಯುವತಿಯರನ್ನು ವಶಕ್ಕೆ ಪಡೆಯಲಾಗಿದ್ದು, ಅವರಿಗೆ ಆಪ್ತ ಸಮಾಲೋಚನೆ ಕೊಡಿಸಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಕೀರ್ತಿ ಮತ್ತು ವೆಂಕಟೇಶ್ವರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಕೀರ್ತಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಮತ್ತು ವಿಚಾರಣೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್)
ಚಿನ್ನ ಕಳ್ಳತನದ ಕಿಂಗ್ಪಿನ್ ಅರೆಸ್ಟ್; ಖಾಕಿ ಮಧ್ಯಸ್ಥಿಕೆಯಲ್ಲೇ ಡೀಲಿಂಗ್ ನಡೆಸುತ್ತಿದ್ದ ಆರೋಪಿ