More

    ಸುರಕ್ಷಿತ ಲೈಂಗಿಕ ಕ್ರಿಯೆ ಬಗ್ಗೆ ರಾಖಿ ಹೇಳಿದ್ದನ್ನು ಕೇಳಿ ಬೆಕ್ಕಸ ಬೆರಗಾದ ಮೈಸೂರಿನ ಬಾಯ್​ಫ್ರೆಂಡ್ ಆದಿಲ್​!​

    ಮುಂಬೈ: ಮುಕ್ತ, ವಿಚಿತ್ರ ಅಥವಾ ಮುಖಕ್ಕೆ ಹೊಡೆದಂತೆ ನೇರವಾಗಿ ಹೇಳಿಕೆ ನೀಡುವುದರಲ್ಲಿ ಬಾಲಿವುಡ್​​ ನಟಿ ರಾಖಿ ಸಾವಂತ್ ಹೆಸರುವಾಸಿ. ತಮ್ಮ ಬೋಲ್ಡ್​ ಮಾತುಗಳಿಂದಲೇ ರಾಖಿ ಸಾವಂತ್ ಅನೇಕ ಕಾರ್ಯಕ್ರಮಗಳಲ್ಲಿ ಹೆಡ್​ಲೈನ್​ ಆಗಿ ಬಿಡುತ್ತಾರೆ. ಕೆಲ ದಿನಗಳ ಹಿಂದಷ್ಟೇ ಮೈಸೂರು ಮೂಲದ ತಮ್ಮ ಹೊಸ ಬಾಯ್​ಫ್ರೆಂಡ್​ ಪರಿಚಯಿಸುವ ಮೂಲಕ ರಾಖಿ ಸುದ್ದಿಯಾಗಿದ್ದರು. ಇದೀಗ ಮತ್ತೊಮ್ಮೆ ತಮ್ಮ ಬೋಲ್ಡ್​ ಮಾತುಗಳಿಂದಲೇ ಎಲ್ಲರ ಹುಬ್ಬೇರಿಸಿದ್ದಾರೆ.

    ರಾಖಿ ಅವರು ಇತ್ತೀಚಗೆ ತಮ್ಮ ಬಾಯ್​ಫ್ರೆಂಡ್​ ಆದಿಲ್​ ದುರ್ರಾನಿ ಜತೆ ನುಶ್ರತ್ ಭರುಚ್ಚ ಅಭಿನಯದ “ಜನಹಿತ್​ ಮೇನ್​ ಜಾರಿ” ಚಿತ್ರದ ಸ್ಕ್ರೀನಿಂಗ್​ನಲ್ಲಿ ಭಾಗವಹಿಸಿದ್ದರು. ಸಿನಿಮಾ ಕುರಿತು ಮಾತನಾಡುವಾಗ ರಾಖಿ ಅವರ ಬುಲೆಟ್​ನಂತಹ ಮಾತುಗಳಿಂದ ಬಾಯ್​ಫ್ರೆಂಡ್​ ಆದಿಲ್​ ಒಂದು ಕ್ಷಣ ಮುಜುಗರಕ್ಕೀಡಾದ ಪ್ರಸಂಗ ಜರುಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಕಾಂಡೋಮ್ ಮತ್ತು ಸುರಕ್ಷಿತ ಲೈಂಗಿಕತೆಯ ಬಗ್ಗೆ ಜಾಗೃತಿ ಮೂಡಿಸುವ ಚಿತ್ರದ ಎಳೆಯ ಬಗ್ಗೆ ಹೈಲೈಟ್ ಮಾಡುವಾಗ ರಾಖಿ, ಮಾಧ್ಯಮಗಳಿಗೆ ಒಂದಿಷ್ಟು ಘಟನೆಯನ್ನು ವಿವರಿಸಿದರು. ಎಚ್​ಐವಿ ಸೋಂಕಿನಿಂದ ಎಲ್ಲರಿಂದ ತಿರಸ್ಕರಿಸಲ್ಪಟ್ಟ ವ್ಯಕ್ತಿಯೊಬ್ಬನನ್ನು ನಾನು ಭೇಟಿ ಮಾಡಿದ್ದೆ. ನನ್ನ ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ನನ್ನನ್ನು ದೂರ ಇಡುತ್ತಿದ್ದಾರೆ ಎಂದು ಮನದ ನೋವು ಹೇಳಿಕೊಂಡ. ನೀನು ಏಕೆ ಕಾಂಡೋಮ್​ ಅಥವಾ ಸುರಕ್ಷತಾ ಸಾಧನಗಳನ್ನು ಬಳಸಲಿಲ್ಲ ಎಂದು ನಾನು ಪ್ರಶ್ನಿಸಿದೆ. ಅದಕ್ಕೆ ಆತ ಉತ್ತರ ನೀಡಲಾಗದೇ, ಮೌನಕ್ಕೆ ಜಾರಿ ಅಲ್ಲಿಂದ ಜಾಗ ಖಾಲಿ ಮಾಡಿದ ಎಂದರು.

    ಮುಂದುವರಿದು ಮಾತನಾಡಿದ ರಾಖಿ, ಈಗಲೂ ಜನರು ಮೆಡಿಕಲ್​ನಲ್ಲಿ ಕಾಂಡೋಮ್ ಕೇಳಲು ನಾಚಿಕೆಪಡುತ್ತಾರೆ. ನುಶ್ರತ್ ಭರುಚ್ಛಾ ಅಂತಹ ಓರ್ವ ಹುಡುಗಿ ಇಂಥ ಸಿನಿಮಾ ಮಾಡೋವಾಗ ನಾವೇಕೆ ಮಾತನಾಡಬಾರದು. ಮದ್ಯಕ್ಕಾಗಿ ಜನರು ಎಷ್ಟು ಹೊತ್ತು ಬೇಕಾದರೂ ಒಂದೇ ಕಾಲಿನ ಮೇಲೆ ನಿಲ್ಲುತ್ತಾರೆ, ಆದರೆ ಕಾಂಡೋಮ್ ಕೇಳಲು ನಾಚಿಕೆಪಡುತ್ತಾರೆ. ಈಗಲೂ ಸಮಯ ಮೀರಿಲ್ಲ. ಎಲ್ಲರೂ ಕಾಂಡೋಮ್ ಬಳಸಬೇಕು ಅಲ್ಲವೇ ಎನ್ನುತ್ತಾ ರಾಖಿ ತಮ್ಮ ಬಾಯ್​ಫ್ರೆಂಡ್​ ಆದಿಲ್​ ಕಡೆ ತಿರುಗಿ ಹೇಳಿದರು. ರಾಖಿ ಹೇಳಿಕೆಯಿಂದ ಆದಿಲ್​ ಒಂದು ಕ್ಷಣ ಅವಕ್ಕಾಗಿ ನಿಂತರು. ಆ ಕ್ಷಣದಲ್ಲಿ ಏನು ಹೇಳಬೇಕೆಂದು ಆತನಿಗೆ ಗೊತ್ತಾಗಲೇ ಇಲ್ಲ. ಸದ್ಯ ಇದಿಷ್ಟು ಮಾತುಗಳನ್ನು ಆಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

    ಅಂದಹಾಗೆ ರಾಖಿ ಸಾವಂತ್ ತನ್ನ ಪ್ರೀತಿಯಲ್ಲಿ ತುಂಬಾ ಗಂಭೀರವಾಗಿರುವಂತೆ ಕಾಣುತ್ತಿದೆ. ರಾಖಿ, ತನ್ನ ಗೆಳೆಯ ಆದಿಲ್​ ಜತೆ ಭವಿಷ್ಯದ ದಿನಗಳನ್ನು ಕಳೆಯಲು ಬಯಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ 3 ಮಿಲಿಯನ್​ ಫಾಲೋವರ್ಸ್​ ಪಡೆದುಕೊಂಡ ಹಿನ್ನೆಲೆಯಲ್ಲಿ ನಟಿ ಹಾಗೂ ಮಾಡೆಲ್​ ಉರ್ಫಿ ಜಾವೇದ್​ ಆಯೋಜಿಸಿದ್ದ ಸಂಭ್ರಮಾಚರಣೆಯಲ್ಲೂ ರಾಖಿ ಭಾಗವಹಿಸಿದ್ದರು. ಈ ವೇಳೆ ರಾಖಿ, ಆದಿಲ್​ ಜತೆ ಮದುವೆ ಆಗುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ರಾಖಿಗೆ ದುಬೈನಲ್ಲಿ ಮನೆ ಕೊಡಿಸಿದ ಮೈಸೂರಿನ ಬಾಯ್ ಫ್ರೆಂಡ್! ರಾಖಿ ಬಗ್ಗೆ ಆದಿಲ್​ ಹೇಳಿಕೆ ಕೇಳಿದ್ರೆ ದಂಗಾಗ್ತೀರಾ

    ನಾನು ಲೈಂಗಿಕ ವ್ಯಸನಿಯಂತೆ! ಧನುಷ್​, ಬೈಲ್ವಾನ್​ ರಂಗನಾಥನ್​ ವಿರುದ್ಧ ದೂರು ದಾಖಲಿಸಿದ ಗಾಯಕಿ ಸುಚಿತ್ರಾ

    ಮದ್ವೆಯಾದ ಮಾರನೇ ದಿನವೇ ಭಾರಿ ಎಡವಟ್ಟು ಮಾಡಿಕೊಂಡು ವಿವಾದಕ್ಕೆ ಗುರಿಯಾದ ನಯನತಾರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts