ಬೆಂಗಳೂರು: ಬಿಗ್ಬಾಸ್ ಕನ್ನಡದ ಒಟಿಟಿ ಎರಡು ವಾರ ಪೂರ್ಣಗೊಳಿಸಿ ಮೂರನೇ ವಾರಕ್ಕೆ ಲಗ್ಗೆ ಇಟ್ಟಿದೆ. ಮೊದಲ ವಾರದಲ್ಲಿ ಕಿರಣ್ ಯೋಗೇಶ್ವರ್ ಅವರು ಮನೆಯಿಂದ ಹೊರಬಂದರೆ, ಎರಡನೇ ವಾರದಲ್ಲಿ ಸ್ಫೂರ್ತಿಗೌಡ ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.
ಎಲಿಮಿನೇಷನ್ ಸುತ್ತಿನಲ್ಲಿ ಸ್ಫೂರ್ತಿ ಮತ್ತು ಅಕ್ಷತಾ ಕುಕ್ಕಿ ಕೊನೆಯಲ್ಲಿದ್ದರು. ಅಂತಿಮವಾಗಿ ಸ್ಫೂರ್ತಿ ಹೊರಬಂದಿದ್ದಾರೆ. ರಾಕೇಶ್ ಅಡಿಗ ಮತ್ತು ಸ್ಫೂರ್ತಿ ನಡುವಿನ ಲವ್ ಟ್ರ್ಯಾಕ್ಗಾಗಿ ಸ್ಫೂರ್ತಿ ಅವರನ್ನು ಎಲಿಮಿನೇಟ್ ಮಾಡದೆ ಉಳಿಸಿಕೊಳ್ಳುತ್ತಾರೆ ಎಂದು ವೀಕ್ಷಕರು ಭಾವಿಸಿದ್ದರು. ಆದರೆ, ಸ್ಫೂರ್ತಿಗೌಡ ಮನೆಯಿಂದ ಆಚೆ ಬಂದಿರುವುದು ನಿಜಕ್ಕೂ ವೀಕ್ಷಕರಿಗೆ ಅಚ್ಚರಿಯಾಗಿದ್ದರೆ, ರಾಕೇಶ್ ಅಡಿಗ ಅಭಿಮಾನಿಗಳಿಗೆ ಸಖತ್ ಖುಷಿಯಾಗಿದ್ದಾರೆ. ಅಯ್ಯೋ ಸ್ಫೂರ್ತಿ ಮನೆಯಿಂದ ಹೊರಬಂದ್ರೆ ರಾಕೇಶ್ ಅಭಿಮಾನಿಗಳಿಗೆ ಯಾಕೆ ಸಂತೋಷ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಮುಂದಿದೆ.
ಎರಡು ವಾರಗಳ ಬಿಗ್ಬಾಸ್ ಎಪಿಸೋಡ್ನಲ್ಲಿ ಇಡೀ ದಿನ ಸ್ಫೂರ್ತಿ ಅವರು ರಾಕೇಶ್ ಹಿಂದೆ ಜೋತುಬಿದ್ದಿದ್ದರು. ಎಲಿಮಿನೇಶನ್ನಿಂದ ಎಸ್ಕೇಪ್ ಆಗಲು ರಾಕೇಶ್ ಅಡಿಗ ಜೊತೆ ಜಾಸ್ತಿ ಪರದೆ ಹಂಚಿಕೊಳ್ಳುತ್ತಿದ್ದಾರೆ ಎಂದು ಒಂದು ವರ್ಗದ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದರು. ಇದರ ನಡುವೆ ಅಭಿಮಾನಿಗಳು ರಾಕೇಶ್ ಅವರ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದರು. ಸ್ಪೂರ್ತಿಯೊಂದಿಗೆ ದಿನವಿಡೀ ಹರಟೆ ಹೊಡೆಯುವುದನ್ನು ಮಾತ್ರ ಅವರು ನೋಡುತ್ತಿದ್ದರು. ಹೀಗಾಗಿ ರಾಕೇಶ್ ಅಭಿಮಾನಿಗಳು ಸ್ಫೂರ್ತಿ ಎಲಿಮಿನೇಶನ್ ಅನ್ನು ಬಯಸುತ್ತಿದ್ದರು. ಸ್ಫೂರ್ತಿ ಎಲಿಮಿನೇಟ್ ಆದರೆ, ರಾಕೇಶ್ ಮರಳಿ ತನ್ನ ಟ್ರ್ಯಾಕ್ ಮರಳಲಿದ್ದಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿತ್ತು. ಇದೀಗ ಅವರ ಬಯಕೆಯಂತೆಯೇ ಸ್ಫೂರ್ತಿ ಮನೆಯಿಂದ ಹೊರಬಂದಿರುವುದು ಖುಷಿಯಾಗಿದೆ. ತಮ್ಮ ಖುಷಿಯನ್ನು ಸಾಮಾಜಿಕ ಜಾಲತಾಣ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
ಸ್ಫೂರ್ತಿ ಎಲಿಮಿನೇಶನ್ಗೆ ಕಾರಣ ಏನು?
ಲವ್ ಗಾಸಿಪ್ ಬಿಟ್ಟರೆ, ಟಾಸ್ಕ್ ವಿಚಾರದಲ್ಲಿ ಸ್ಫೂರ್ತಿ ಕಳಪೆಯಾಗಿದ್ದರು. ಯಾವುದೇ ಟಾಸ್ಕ್ ಕೊಟ್ಟರೂ ಸರಿಯಾಗಿ ನಿಭಾಯಿಸುತ್ತಿರಲಿಲ್ಲ ಮತ್ತು ವೀಕ್ಷಕರ ಗಮನ ಸೆಳೆಯುವಂತಹ ಯಾವುದೇ ಪ್ರದರ್ಶನ ನೀಡುತ್ತಿರಲಿಲ್ಲ. ಕಳೆದ ವೀಕೆಂಡ್ ಎಪಿಸೋಡ್ ನಿರೂಪಕ ಕಿಚ್ಚ ಸುದೀಪ್ ಕೂಡ ಸ್ಫೂರ್ತಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಕೊನೆಗೆ ಮತಗಳು ಕಡಿಮೆ ಆಗಿದ್ದರಿಂದ ಸ್ಫೂರ್ತಿಯೇ ಎಲಿಮಿನೇಟ್ ಆಗಿದ್ದಾರೆ.
ಮೂರನೇ ವಾರದ ಎಲಿಮಿನೇಷನ್ನಲ್ಲಿ ಜ್ಯೋತಿಷಿ ಆರ್ಯವರ್ಧನ್, ರೂಪೇಶ್ ಶೆಟ್ಟಿ, ಅಕ್ಷತಾ ಕುಕಿ, ಚೈತ್ರಾ, ಸೋಮಣ್ಣ ಮಾಚಿಮಾಡ, ಜಯಶ್ರೀ ಆರಾಧ್ಯ ಮತ್ತು ಉದಯ್ ಸೂರ್ಯ ನಾಮಿನೇಟ್ ಆಗಿದ್ದಾರೆ. (ಏಜೆನ್ಸೀಸ್)
ಬಿಗ್ಬಾಸ್ ಮನೆಯಿಂದ ಹೊರಬಂದ ಸ್ಫೂರ್ತಿ ಗೌಡ ಎರಡೇ ವಾರದಲ್ಲಿ ಗಳಿಸಿದ ಹಣ ಇಷ್ಟೊಂದಾ?
ಸೋಲಿನ ಸುಳಿಯಲ್ಲಿ ಬಾಲಿವುಡ್: ಸುಶಾಂತ್ ಸಿಂಗ್ ಸಾವಿನ ಕಡೆ ಬೊಟ್ಟು ಮಾಡಿದ ಸ್ವರಾ ಭಾಸ್ಕರ್!
ಮಾಜಿ ಸಿಎಂ ಬಿಎಸ್ವೈ ಕಾರಿನ ಹಿಂದೆ ಹೋಗಲು ಪೈಪೋಟಿ: ಅಪಘಾತದ ಬೆನ್ನಲ್ಲೇ ವಾಗ್ವಾದಕ್ಕಿಳಿದ ನಾಯಕರು