More

    ಬಿಗ್​ಬಾಸ್​ನಿಂದ ಸ್ಫೂರ್ತಿ ಗೌಡ ಎಲಿಮಿನೇಟ್​ ಆಗಿದ್ದೇ ರಾಕೇಶ್​ ಅಭಿಮಾನಿಗಳಿಗೆ ಖುಷಿಯೋ ಖುಷಿ! ಕಾರಣ ಹೀಗಿದೆ…

    ಬೆಂಗಳೂರು: ಬಿಗ್​ಬಾಸ್​ ಕನ್ನಡದ ಒಟಿಟಿ ಎರಡು ವಾರ ಪೂರ್ಣಗೊಳಿಸಿ ಮೂರನೇ ವಾರಕ್ಕೆ ಲಗ್ಗೆ ಇಟ್ಟಿದೆ. ಮೊದಲ ವಾರದಲ್ಲಿ ಕಿರಣ್​ ಯೋಗೇಶ್ವರ್​ ಅವರು ಮನೆಯಿಂದ ಹೊರಬಂದರೆ, ಎರಡನೇ ವಾರದಲ್ಲಿ ಸ್ಫೂರ್ತಿಗೌಡ ಬಿಗ್​ಬಾಸ್​ ಮನೆಯಿಂದ ಎಲಿಮಿನೇಟ್​ ಆಗಿದ್ದಾರೆ.

    ಎಲಿಮಿನೇಷನ್​ ಸುತ್ತಿನಲ್ಲಿ ಸ್ಫೂರ್ತಿ ಮತ್ತು ಅಕ್ಷತಾ ಕುಕ್ಕಿ ಕೊನೆಯಲ್ಲಿದ್ದರು. ಅಂತಿಮವಾಗಿ ಸ್ಫೂರ್ತಿ ಹೊರಬಂದಿದ್ದಾರೆ. ರಾಕೇಶ್​ ಅಡಿಗ ಮತ್ತು ಸ್ಫೂರ್ತಿ ನಡುವಿನ ಲವ್​ ಟ್ರ್ಯಾಕ್​ಗಾಗಿ ಸ್ಫೂರ್ತಿ ಅವರನ್ನು ಎಲಿಮಿನೇಟ್​ ಮಾಡದೆ ಉಳಿಸಿಕೊಳ್ಳುತ್ತಾರೆ ಎಂದು ವೀಕ್ಷಕರು ಭಾವಿಸಿದ್ದರು. ಆದರೆ, ಸ್ಫೂರ್ತಿಗೌಡ ಮನೆಯಿಂದ ಆಚೆ ಬಂದಿರುವುದು ನಿಜಕ್ಕೂ ವೀಕ್ಷಕರಿಗೆ ಅಚ್ಚರಿಯಾಗಿದ್ದರೆ, ರಾಕೇಶ್​ ಅಡಿಗ ಅಭಿಮಾನಿಗಳಿಗೆ ಸಖತ್​ ಖುಷಿಯಾಗಿದ್ದಾರೆ. ಅಯ್ಯೋ ಸ್ಫೂರ್ತಿ ಮನೆಯಿಂದ ಹೊರಬಂದ್ರೆ ರಾಕೇಶ್​​ ಅಭಿಮಾನಿಗಳಿಗೆ ಯಾಕೆ ಸಂತೋಷ ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಮುಂದಿದೆ.

    ಎರಡು ವಾರಗಳ ಬಿಗ್​ಬಾಸ್​ ಎಪಿಸೋಡ್​ನಲ್ಲಿ ಇಡೀ ದಿನ ಸ್ಫೂರ್ತಿ ಅವರು ರಾಕೇಶ್​ ಹಿಂದೆ ಜೋತುಬಿದ್ದಿದ್ದರು. ಎಲಿಮಿನೇಶನ್​ನಿಂದ ಎಸ್ಕೇಪ್​ ಆಗಲು ರಾಕೇಶ್​ ಅಡಿಗ ಜೊತೆ ಜಾಸ್ತಿ ಪರದೆ ಹಂಚಿಕೊಳ್ಳುತ್ತಿದ್ದಾರೆ ಎಂದು ಒಂದು ವರ್ಗದ ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದರು. ಇದರ ನಡುವೆ ಅಭಿಮಾನಿಗಳು ರಾಕೇಶ್ ಅವರ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದರು. ಸ್ಪೂರ್ತಿಯೊಂದಿಗೆ ದಿನವಿಡೀ ಹರಟೆ ಹೊಡೆಯುವುದನ್ನು ಮಾತ್ರ ಅವರು ನೋಡುತ್ತಿದ್ದರು. ಹೀಗಾಗಿ ರಾಕೇಶ್​ ಅಭಿಮಾನಿಗಳು ಸ್ಫೂರ್ತಿ ಎಲಿಮಿನೇಶನ್​ ಅನ್ನು ಬಯಸುತ್ತಿದ್ದರು. ಸ್ಫೂರ್ತಿ ಎಲಿಮಿನೇಟ್​ ಆದರೆ, ರಾಕೇಶ್​ ಮರಳಿ ತನ್ನ ಟ್ರ್ಯಾಕ್​ ಮರಳಲಿದ್ದಾರೆ ಎಂಬುದು ಅಭಿಮಾನಿಗಳ ಅಭಿಪ್ರಾಯವಾಗಿತ್ತು. ಇದೀಗ ಅವರ ಬಯಕೆಯಂತೆಯೇ ಸ್ಫೂರ್ತಿ ಮನೆಯಿಂದ ಹೊರಬಂದಿರುವುದು ಖುಷಿಯಾಗಿದೆ. ತಮ್ಮ ಖುಷಿಯನ್ನು ಸಾಮಾಜಿಕ ಜಾಲತಾಣ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

    ಸ್ಫೂರ್ತಿ ಎಲಿಮಿನೇಶನ್​ಗೆ ಕಾರಣ ಏನು?
    ಲವ್​ ಗಾಸಿಪ್​ ಬಿಟ್ಟರೆ, ಟಾಸ್ಕ್​ ವಿಚಾರದಲ್ಲಿ ಸ್ಫೂರ್ತಿ ಕಳಪೆಯಾಗಿದ್ದರು. ಯಾವುದೇ ಟಾಸ್ಕ್​ ಕೊಟ್ಟರೂ ಸರಿಯಾಗಿ ನಿಭಾಯಿಸುತ್ತಿರಲಿಲ್ಲ ಮತ್ತು ವೀಕ್ಷಕರ ಗಮನ ಸೆಳೆಯುವಂತಹ ಯಾವುದೇ ಪ್ರದರ್ಶನ ನೀಡುತ್ತಿರಲಿಲ್ಲ. ಕಳೆದ ವೀಕೆಂಡ್​ ಎಪಿಸೋಡ್​ ನಿರೂಪಕ ಕಿಚ್ಚ ಸುದೀಪ್​ ಕೂಡ ಸ್ಫೂರ್ತಿಗೆ ಕ್ಲಾಸ್​ ತೆಗೆದುಕೊಂಡಿದ್ದರು. ಕೊನೆಗೆ ಮತಗಳು ಕಡಿಮೆ ಆಗಿದ್ದರಿಂದ ಸ್ಫೂರ್ತಿಯೇ ಎಲಿಮಿನೇಟ್​ ಆಗಿದ್ದಾರೆ.

    ಮೂರನೇ ವಾರದ ಎಲಿಮಿನೇಷನ್​ನಲ್ಲಿ ಜ್ಯೋತಿಷಿ ಆರ್ಯವರ್ಧನ್​, ರೂಪೇಶ್​ ಶೆಟ್ಟಿ, ಅಕ್ಷತಾ ಕುಕಿ, ಚೈತ್ರಾ, ಸೋಮಣ್ಣ ಮಾಚಿಮಾಡ, ಜಯಶ್ರೀ ಆರಾಧ್ಯ ಮತ್ತು ಉದಯ್​ ಸೂರ್ಯ ನಾಮಿನೇಟ್​ ಆಗಿದ್ದಾರೆ. (ಏಜೆನ್ಸೀಸ್​)

    ಬಿಗ್​ಬಾಸ್​ ಮನೆಯಿಂದ ಹೊರಬಂದ ಸ್ಫೂರ್ತಿ ಗೌಡ ಎರಡೇ ವಾರದಲ್ಲಿ ಗಳಿಸಿದ ಹಣ ಇಷ್ಟೊಂದಾ?

    ಸೋಲಿನ ಸುಳಿಯಲ್ಲಿ ಬಾಲಿವುಡ್: ಸುಶಾಂತ್​ ಸಿಂಗ್ ಸಾವಿನ ಕಡೆ ಬೊಟ್ಟು ಮಾಡಿದ ಸ್ವರಾ ಭಾಸ್ಕರ್​!

    ಮಾಜಿ ಸಿಎಂ ಬಿಎಸ್​ವೈ ಕಾರಿನ ಹಿಂದೆ ಹೋಗಲು ಪೈಪೋಟಿ: ಅಪಘಾತದ ಬೆನ್ನಲ್ಲೇ ವಾಗ್ವಾದಕ್ಕಿಳಿದ ನಾಯಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts