More

    ಇಷ್ಟಲಿಂಗದ ಮಹತ್ವ ಅರಿತೇ ರಾಹುಲ್​ ಗಾಂಧಿ ಲಿಂಗಧಾರಣೆ ಪಡೆದರು: ಮುರುಘಾ ಶರಣರ ಹೇಳಿಕೆ

    ಚಿತ್ರದುರ್ಗ: ಇಷ್ಟಲಿಂಗದ ಮಹತ್ವ ಅರಿತೇ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಲಿಂಗಧಾರಣೆಯನ್ನು ಪಡೆದರು. ಈ ವೇಳೆ ಅವರಿಗೆ ಬಸವಣ್ಣನವರ ಭಾವಚಿತ್ರವನ್ನು ನೀಡಲಾಯಿತು ಎಂದು ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿದರು.

    ಇಷ್ಟಲಿಂಗದ ಮಹತ್ವ ಅರಿತೇ ರಾಹುಲ್​ ಗಾಂಧಿ ಲಿಂಗಧಾರಣೆ ಪಡೆದರು: ಮುರುಘಾ ಶರಣರ ಹೇಳಿಕೆ

    ಕರ್ನಾಟಕ ಪ್ರವಾಸ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ ಇಂದು ಮುರುಘಾ ಮಠಕ್ಕೆ ಭೇಟಿ ನೀಡಿದರು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮುರುಘಾ ಶರಣರು, ಇಂದು ರಾಹುಲ್ ಸೌಜನ್ಯದ ಸಂದರ್ಶನವಾಗಿತ್ತು. ಸಂವಾದದ ವೇಳೆ ಕೆಲಪ್ರಶ್ನೆಗಳನ್ನು ಮುಂದಿಟ್ಟು ಉತ್ತರವನ್ನ ಪಡೆಯೋಕೆ ಮುಂದಾಗಿದ್ದರು. ಬಸವ ತತ್ವ ಸಿದ್ಧಾಂತಗಳ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಿದೆವು ಎಂದರು.

    ಇಷ್ಟಲಿಂಗದ ಮಹತ್ವ ಅರಿತೇ ರಾಹುಲ್​ ಗಾಂಧಿ ಲಿಂಗಧಾರಣೆ ಪಡೆದರು: ಮುರುಘಾ ಶರಣರ ಹೇಳಿಕೆ

    ಕಾಯಕವೇ ಕೈಲಾಸವೆಂದು ಹೇಳಿದ್ದ ಬಸವಣ್ಣನ ತತ್ವಗಳ ಬಗ್ಗೆ ಹೇಳಲಾಯ್ತು. ಸಾಮಾಜಿಕ ಸಮಾನತೆ, ನಾವೆಲ್ಲರೂ ಒಂದೇ ಎಂಬ ತತ್ವ ಬಸವಣ್ಣನವರದ್ದು ಎಂದು ಹೇಳಿದೆವು. ಇದನ್ನು ಕೇಳಿದ ಬಳಿಕ ರಾಹುಲ್​ ಗಾಂಧಿ ಮೆಚ್ಚುಗೆ ವ್ಯಕ್ತ ಪಡಿಸಿದರು ಎಂದು ಮುರುಘಾ ಶರಣರು ತಿಳಿಸಿದರು.

    ಇಷ್ಟಲಿಂಗದ ಮಹತ್ವ ಅರಿತೇ ರಾಹುಲ್​ ಗಾಂಧಿ ಲಿಂಗಧಾರಣೆ ಪಡೆದರು: ಮುರುಘಾ ಶರಣರ ಹೇಳಿಕೆ

    ಯಾವ ರೀತಿಯಾಗಿ ಪ್ರಾರ್ಥನೆ ಮತ್ತು ಭಜನೆ ಹೇಗೆ ಮಾಡಬೇಕೆಂದು ರಾಹುಲ್​ ಗಾಂಧಿ ಪ್ರಶ್ನೆ ಮಾಡಿದರು. ಈ ವೇಳೆ ಇಷ್ಟಲಿಂಗವನ್ನು ಹೇಗೆ ಪೂಜೆ ಮಾಡುತ್ತೇವೆ ಎಂದು ಹೇಳಿದೆವು. ಒಮ್ಮೆ ಪೂಜೆ ಮಾಡಿ ತೋರಿಸಬಹುದಾ ಎಂದು ಕೇಳಿದರು. ಬಳಿಕ ಲಿಂಗ ಪೂಜೆಯನ್ನು ಮಾಡಿ ತೋರಿಸಲಾಯಿತು. ಕೂಡಲೇ ಇಷ್ಟಲಿಂಗ ಪಡೆಯಬಹುದಾ ಎಂದು ಮಠಾಧೀಶರೊಬ್ಬರು ಕೇಳಿದರು. ಕೂಡಲೇ ನನಗೆ ಆಸಕ್ತಿ ಇದೆ ಎಂದು ರಾಹುಲ್​ ಹೇಳಿದರು. ತಕ್ಷಣ ಹಣೆಗೆ ವಿಭೂತಿ ಧರಿಸಿ ಲಿಂಗಧಾರಣೆ ಮಾಡಿದೆವು ಎಂದು ಮುರುಘಾ ಶರಣರು ಹೇಳಿದರು. (ದಿಗ್ವಿಜಯ ನ್ಯೂಸ್​)

    ಇಷ್ಟಲಿಂಗದ ಮಹತ್ವ ಅರಿತೇ ರಾಹುಲ್​ ಗಾಂಧಿ ಲಿಂಗಧಾರಣೆ ಪಡೆದರು: ಮುರುಘಾ ಶರಣರ ಹೇಳಿಕೆ

    ಮುರುಘಾ ಮಠಕ್ಕೆ ಭೇಟಿ ನೀಡಿದ ರಾಹುಲ್​ ಗಾಂಧಿಗೆ ಲಿಂಗದೀಕ್ಷೆ ನೀಡಿದ ಡಾ. ಶಿವಮೂರ್ತಿ ಮುರುಘಾ ಶರಣರು

    ಬೆಳಗಾವಿಯಲ್ಲಿ ರೆಡಿ, ಸೂರತ್​ನಲ್ಲಿ ಪ್ರಿಂಟ್​: ದಾವಣಗೆರೆಯಲ್ಲಿ ಮಿಂಚುತ್ತಿದೆ 3 ಕಿ.ಮೀ ಉದ್ದದ ಫೋಟೋ ಬಯೋಗ್ರಫಿ

    ಸಿದ್ದರಾಮೋತ್ಸವದಲ್ಲಿ ಕೈ ಕಾರ್ಯಕರ್ತರಿಗೆ ಭರ್ಜರಿ ಭೋಜನ ವ್ಯವಸ್ಥೆ: ಹೀಗಿದೆ ನೋಡಿ ಊಟದ ಮೆನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts