ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ಅಗಲಿದ ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಅವರ ಸಮಾಜಮುಖಿ ಕಾರ್ಯಗಳಿಗೆ ಸಂಬಂಧಿಸಿದ ಅನೇಕ ಪೋಸ್ಟ್ಗಳು ವೈರಲ್ ಆಗುತ್ತಿದೆ. ಪುನೀತ್ ಮಾಡಿರುವ ಮಾನವೀಯ ಕೆಲಸಗಳನ್ನು ನೋಡಿದ ಜನರು ಕನ್ನಡ ನಾಡು ಓರ್ವ ಚಿನ್ನದಂತ ವ್ಯಕ್ತಿಯನ್ನು ಕಳೆದುಕೊಂಡಿತಲ್ಲ ಅಂತಾ ಕಂಬನಿ ಮಿಡಿಯುತ್ತಿದ್ದಾರೆ. ಆದರೆ, ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳಲ್ಲಿ ಕೆಲವೊಂದಿಷ್ಟು ನಕಲಿಯು ಇವೆ.
ನಟ ಬುಲೆಟ್ ಪ್ರಕಾಶ್ ನಿಧನರಾದಾಗ ಅವರ ಮನೆಗೆ ತೆರಳಿ ಕುಟುಂಬಕ್ಕೆ ಧೈರ್ಯ ತುಂಬಿದ್ದರು ಮತ್ತು 5 ಲಕ್ಷ ರೂ. ಧನಸಹಾಯವನ್ನು ಮಾಡಿದ್ದರು ಅಂತಾ ಸ್ವತಃ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಹೇಳಿಕೊಂಡಿದ್ದಾರೆ ಎಂದು ಬರೆದಿರುವ ಎಡಿಟ್ ಮಾಡಲಾದ ಪೋಸ್ಟ್ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಅದು ಸುಳ್ಳೆಂದು ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ದಿಗ್ವಿಜಯ ನ್ಯೂಸ್ಗೆ ಸ್ಪಷ್ಟನೆ ನೀಡಿರುವ ರಕ್ಷಕ್, ಅಣ್ಣಾವ್ರ ಕುಟುಂಬದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ, ಪುನೀತ್ ಸರ್ ನಮ್ಮ ಕುಟುಂಬಕ್ಕೆ 5 ಲಕ್ಷ ರೂಪಾಯಿ ಕೊಟ್ಟಿಲ್ಲ. ಕೊಟ್ಟಿದ್ದಾರೆಂದು ಸೋಶಿಯಲ್ ಮೀಡಿಯಾಗಳಲ್ಲಿ ವದಂತಿಗಳನ್ನು ಹಬ್ಬಿಸುತ್ತಿದ್ದಾರೆಂದು ಅಸಮಾಧಾನ ಹೊರಹಾಕಿದ್ದಾರೆ. (ದಿಗ್ವಿಜಯ ನ್ಯೂಸ್)
ನನ್ನ ರಕ್ತದ ಗುಂಪು ಟೆಸ್ಟ್ ಮಾಡ್ಬೇಡಿ ಅದರಲ್ಲಿ ಸಂಪೂರ್ಣ__ತುಂಬಿದೆ! ಅಪ್ಪು ಕುರಿತ 2018ರ ಸ್ವಾರಸ್ಯಕರ ಘಟನೆ
ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್ ರಾಜಕುಮಾರ್-ಸಂಜಾರಿ ವಿಜಯ್ಗೆ ಶ್ರದ್ಧಾಂಜಲಿ
ತಿರುಪತಿ ತಿಮ್ಮಪ್ಪನಿಗೆ ವರುಣನ ದಿಗ್ಬಂಧನ: ದೇವರ ದರ್ಶನ ಸ್ಥಗಿತ, ಕೊಚ್ಚಿಹೋದ ವಾಹನಗಳು, ನದಿಯಂತಾದ ರಸ್ತೆಗಳು