ತಿರುಪತಿ ತಿಮ್ಮಪ್ಪನಿಗೆ ವರುಣನ ದಿಗ್ಬಂಧನ: ದೇವರ ದರ್ಶನ ಸ್ಥಗಿತ, ಕೊಚ್ಚಿಹೋದ ವಾಹನಗಳು, ನದಿಯಂತಾದ ರಸ್ತೆಗಳು
ತಿರುಮಲ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಸಾವಿರಾರು ವಾಹನಗಳು ಕೊಚ್ಚಿಹೋಗಿವೆ. ತಿರುಪತಿಯ ರಸ್ತೆಗಳು ಅಕ್ಷರಶಃ ನದಿಯಂತಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ತಿರುಪತಿ ತಿಮ್ಮಪ್ಪನ ದೇವರ ದರ್ಶನ ಸ್ಥಗಿತಗೊಂಡಿದ್ದು, ಬೆಟ್ಟದಲ್ಲಿ ಬಾಕಿ ಆಗಿರುವ ಭಕ್ತರಿಗೆ ಊಟೋಪಹಾರದ ವ್ಯವಸ್ಥೆಯನ್ನು ಟಿಟಿಡಿ ಮಾಡಿದೆ. ತಿರುಪತಿ ಪ್ರವಾಹಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಬೆಟ್ಟಗಳ ನಡುವೆ ನೀರು ಹರಿಯುತ್ತಿರುವ ಕಾರಣ ಬೆಟ್ಟ ಕರಗಿ, ಜಾರುತ್ತಿರುವ ದೃಶ್ಯವೂ ಕಂಡುಬಂದಿದೆ. ವ್ಯಕ್ತಿಯೊಬ್ಬ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿರುವ ದೃಶ್ಯ ಕೂಡ ವಿಡಿಯೋದಲ್ಲಿದೆ. … Continue reading ತಿರುಪತಿ ತಿಮ್ಮಪ್ಪನಿಗೆ ವರುಣನ ದಿಗ್ಬಂಧನ: ದೇವರ ದರ್ಶನ ಸ್ಥಗಿತ, ಕೊಚ್ಚಿಹೋದ ವಾಹನಗಳು, ನದಿಯಂತಾದ ರಸ್ತೆಗಳು
Copy and paste this URL into your WordPress site to embed
Copy and paste this code into your site to embed