ಹೈದರಾಬಾದ್: ಕೆಲವೊಂದು ಘಟನೆಗಳು ವ್ಯಕ್ತಿಯ ಜೀವನದಲ್ಲಿ ಹೊಸ ತಿರುವು ನೀಡುತ್ತದೆ ಎಂಬುದರಲ್ಲಿ ಯಾವುದೇ ಸಂಶಯವೇ ಇಲ್ಲ. ಅದು ನೆಗೆಟಿವ್ ಆಗಿರಲಿ ಅಥವಾ ಪಾಸಿಟಿವ್ ಆಗಿರಲಿ ಭಾರೀ ಪ್ರಚಾರ ಕೆಲ ಜನರನ್ನು ಮುನ್ನೆಲೆಗೆ ತಂದು ಬಿಡುತ್ತವೆ. ಅದರಲ್ಲೂ ಸಿನಿಮಾ ಇಂಡಸ್ಟ್ರಿಗೆ ಸಂಬಂಧಿಸಿದ ಜನರಿಗೆ ಭಾರೀ ಪ್ರಚಾರ ಅಂತೂ ಒಂದು ಮೈಲೇಜ್ ನೀಡುತ್ತದೆ. ಅವರು ಅದನ್ನು ಸರಿಯಾದ ರೀತಿಯಲ್ಲಿ ಬಳಸಿದರೆ, ಖಂಡಿತವಾಗಿಯೂ ಅವರ ವೃತ್ತಿಜೀವನದಲ್ಲಿ ಸುಮಾರು 10 ರಿಂದ 20 ಹೆಜ್ಜೆ ಮುಂದೆ ಹೋಗಲು ಸಹಾಯ ಮಾಡುತ್ತದೆ.
ಇತ್ತೀಚೆಗೆ ಹೈದರಾಬಾದ್ನಲ್ಲಿರುವ ಪಡ್ಡಿಂಗ್ ಮತ್ತು ಮಿಂಕ್ ಪಬ್ ಮೇಲೆ ಹೈದರಾಬಾದ್ ಪೊಲೀಸರು ದಾಳಿ ಮಾಡಿದ್ದರು. ಡ್ರಗ್ಸ್ ಕೇಸ್ಗೆ ಸಂಬಂಧಿಸಿದ ದಾಳಿ ಇದಾಗಿತ್ತು. ಈ ವೇಳೆ ಮೆಗಾಸ್ಟಾರ್ ಕುಟುಂಬದ ಕುಡಿ ನಿಹಾರಿಕ ಕೊನಿದೆಲಾ ಮತ್ತು ರಾಹುಲ್ ಸಿಪ್ಲಿಗುಂಜ್ ಸೇರಿದಂತೆ ಕೆಲ ಕಲಾವಿದರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇವರು ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಕೆಲ ಸಮಯ ಕಳೆಯಬೇಕಾಯಿತು.
ಪೊಲೀಸ್ ದಾಳಿಯ ಬಗ್ಗೆ ಯಾವೊಬ್ಬ ಕಲಾವಿದರು ಕೂಡ ಮಾಧ್ಯಮಗಳ ಮುಂದೆ ತುಟಿ ಬಿಚ್ಚದೇ ಮೌನಕ್ಕೆ ಜಾರಿದ್ದರು. ಆದರೆ, ಖ್ಯಾತ ಯೂಟ್ಯೂಬರ್ ಆಗಿರುವ ಕುಶಿತಾ ಕಲ್ಲಪ್ಪು ಮಾತ್ರ ಘಟನೆಯ ಬಗ್ಗೆ ಮುಕ್ತವಾಗಿ ಮಾತನಾಡುವ ಮೂಲಕ ಮಾಧ್ಯಮದಲ್ಲಿ ಭಾರೀ ಪ್ರಚಾರ ಪಡೆದುಕೊಂಡಿದ್ದರು. ತಾನೂ ಕೂಡ ಪೊಲೀಸ್ ದಾಳಿಯಲ್ಲಿ ಸೆರೆಸಿಕ್ಕರು ಮತ್ತು ಕೆಟ್ಟ ಪ್ರಚಾರ ಆಗುತ್ತಿದ್ದರೂ ಯಾವುದಕ್ಕೂ ಹೆದರದೆ ಮುಕ್ತವಾಗಿ ಮಾತನಾಡಿದ್ದರು.
ನಾನು ಯಾವುದೇ ಡ್ರಗ್ಸ್ ಅಥವಾ ಮದ್ಯಪಾನವನ್ನು ಮಾಡಿಲ್ಲ. ನಾನು ಚೀಸ್ ಮಿರ್ಚಿ ತಿನ್ನಲು ಪಬ್ಗೆ ಹೋಗಿದ್ದೆ ಎಂದು ಸ್ಪಷ್ಟನೆ ನೀಡಿದ್ದರು. ಯಾವಾಗ ಕುಶಿತಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವ ಮೂಲಕ ಪ್ರಚಾರ ಪಡೆದುಕೊಂಡರೋ ಆಕೆಯ ಇನ್ಸ್ಟಾಗ್ರಾಂ ರೀಲ್ಸ್ ಕೂಡ ಹೆಚ್ಚು ಗಮನ ಸೆಳೆಯಿತು. ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್ ಸಂಖ್ಯೆಯು ಕೂಡ ಹೆಚ್ಚಾಯಿತು.
ಇನ್ಸ್ಟಾಗ್ರಾಂ ರೀಲ್ಸ್ಗಳಲ್ಲಿ ತುಂಬಾ ಹಾಟ್ ಆಗಿ ಕುಶಿತಾ ಕಾಣಿಸಿಕೊಂಡಿದ್ದು, ಇದು ಸಿನಿಮಾ ಮಂದಿಯ ಕಣ್ಣಿಗೆ ಬಿದ್ದಿದ್ದು, ಇದೀಗ ಕುಶಿತಾಗೆ ಆಫರ್ಗಳು ಬರುತ್ತಿವೆ. ದೊಡ್ಡ ದೊಡ್ಡ ಸಿನಿ ಪ್ರಾಜೆಕ್ಟ್ನಲ್ಲಿ ನಟಿಸುವಂತೆ ಟಾಲಿವುಡ್ನಿಂದ ಕುಶಿತಾಗೆ ಬುಲಾವ್ ಬರುತ್ತಿದೆ. ಜನಪ್ರಿಯ ಯುವ ನಾಯಕನ ಚಿತ್ರಕ್ಕೆ ಕುಶಿತಾ, ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತದೆ, ಅಲ್ಲಿ ಅವರು ಮುಖ್ಯ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಒಟ್ಟಾರೆ, ಪಬ್ ಮೇಲಿನ ಹೈದರಾಬಾದ್ ಪೊಲೀಸರ ದಾಳಿ ಕೆಲವರಿಗೆ ನೆಗಿಟಿವ್ ಪರಿಣಾಮ ಬೀರಿದ್ದರೆ, ಕುಶಿತಾಗೆ ಪ್ರಚಾರ ಸಿಗುವ ಮೂಲಕ ಪಾಸಿಟಿವ್ ಪರಿಣಾಮ ಬೀರಿದೆ. (ಏಜೆನ್ಸೀಸ್)
ಅವಮಾನ ಆಯ್ತೆಂದು ಕೋರ್ಟ್ ತುಂಬ ಜಿರಳೆ ಬಿಟ್ಟ- ಅಲ್ಲೋಲ ಕಲ್ಲೋಲ: ಮುಚ್ಚಿದ ನ್ಯಾಯಾಲಯದ ಬಾಗಿಲು!
ವಿಮಾನ ಸಿಬ್ಬಂದಿಯೊಬ್ಬರಿಂದ ಅಸಭ್ಯ ವರ್ತನೆ: ಟ್ವೀಟ್ ಮೂಲಕ ನೋವು ಬಿಚ್ಚಿಟ್ಟ ನಟಿ ಪೂಜಾ ಹೆಗ್ಡೆ
ಸ್ವಿಮ್ಮಿಂಗ್ ಪೂಲ್ ಒಳಗೆ ನೂಕಿದ ಮ್ಯಾನೇಜರ್ಗೆ ಚಪ್ಪಲಿ ಏಟು ಕೊಟ್ಟ ನಟಿ ಸನ್ನಿ ಲಿಯೋನ್! ವಿಡಿಯೋ ವೈರಲ್