More

    ಹುಟ್ಟುಹಬ್ಬದಂದೇ ಸಾವಿನ ಹಾದಿ ಹಿಡಿದ ಯುವತಿ! ಇದ್ದ ಒಬ್ಬ ಮಗಳೂ ದುರಂತ ಸಾವು, ಪಾಲಕರ ಆಕ್ರಂದನ

    ಹೈದರಾಬಾದ್​: ಹುಟ್ಟುಹಬ್ಬದ ದಿನ ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಸೇರಿ ಸಂಭ್ರಮಾಚರಣೆ ಮಾಡಬೇಕಿದ್ದ ಯುವತಿಯೊಬ್ಬಳು ಅದೇ ದಿನ ಸಾವಿನ ಹಾದಿ ಹಿಡಿದಿರುವ ಮನಕಲಕುವ ಘಟನೆ ಹೈದರಾಬಾದ್​ನ ಕುಕ್ಕಟಪಲ್ಲಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಮೃತಳನ್ನು ಹರ್ಷಿತಾ (20) ಅಲಿಯಾಸ್​ ಹನಿ ಎಂದು ಗುರುತಿಸಲಾಗಿದೆ. ಈಕೆ ಆಂಧ್ರ ಪ್ರದೇಶದ ಗುಂಟೂರು ಮೂಲದವಳು. ಸಾಯಿಕಿರಣ್​ ಮತ್ತು ನರ್ಮದಾ ದಂಪತಿ ಒಬ್ಬಳೇ ಪುತ್ರಿಯಾಗಿದ್ದ ಹರ್ಷಿತಾ, ಸಿಎ ಅಧ್ಯಯನ ಮಾಡುತ್ತಿದ್ದಳು. ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಬುಧವಾರ ಸಂಜೆ ಸಾಯಿಕಿರಣ್​ ಮತ್ತು ನರ್ಮದಾ ನೆಲ್ಲೂರಿಗೆ ತೆರಳಿದ್ದರು. ಶುಕ್ರವಾರ ಬೆಳಗ್ಗೆ ಮರಳಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

    ದಂಪತಿ ಮನೆಗೆ ಬಂದಾಗ ಬಾಗಿಲು ಮುಚ್ಚಿರುವುದನ್ನು ಗಮನಿಸಿದ್ದಾರೆ. ಎಷ್ಟೇ ಬಡಿದರು ಮಗಳು ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡ ಸಾಯಿಕುಮಾರ್​ ಮನೆಯ ಮಾಲೀಕನ ಸಹಾಯದಿಂದ ಬಾಗಿಲು ತೆಗೆದು, ಬೆಡ್​ರೂಮ್​ಗೆ ತೆರಳಿದಾಗ ಮಗಳು ಹರ್ಷಿತಾ ನೇಣು ಬಿಗಿದುಕೊಂಡಿರುವುದನ್ನು ನೋಡಿ ಆಘಾತಕ್ಕೆ ಒಳಗಾದರು.

    ಹುಟ್ಟು ಹಬ್ಬದ ದಿನವೇ ಮಗಳು ಮೃತಪಟ್ಟಿದ್ದಾಳೆ. ಹುಟ್ಟುಹಬ್ಬದ ದಿನ ತನ್ನ ಫ್ರೆಂಡ್ಸ್​ ಜೊತೆ ಸಿನಿಮಾಗೆ ಹೋಗಿ ಬಂದಿದ್ದಳು. ಅದೇ ದಿನ ಆತ್ಮಹತ್ಯೆ ಮಾಡಿಕೊಂಡಿದ್ದು, ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಕುಕ್ಕಟಪಲ್ಲಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಓದಿನ ಒತ್ತಡದಿಂದ ಈ ರೀತಿ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ತನಿಖೆ ಮುಂದುವರಿದಿದೆ. (ಏಜೆನ್ಸೀಸ್​)

    3 ನಿಮಿಷದಲ್ಲಿ ಮೂರೂವರೆ ಕೆಜಿ ಮೊಸರು ತಿಂದು ದಾಖಲೆ!

    ಮರಕ್ಕೆ ಕಾರು ಡಿಕ್ಕಿ: ಮೆಸ್ಕಾಂ ಜೆಇ ಸೇರಿ ಇಬ್ಬರ ದುರ್ಮರಣ, ಮದುವೆ ಮನೆಯಲ್ಲಿ ಸೂತಕ

    ಕರ್ನಾಟಕ ಕಾಂಗ್ರೆಸ್​ ಛಿದ್ರ ಮಾಡಲು 500 ಕೋಟಿ ಆಫರ್: ನಾನು ತೆಲಂಗಾಣ ಸಿಎಂನನ್ನು ಭೇಟಿ ಮಾಡಿದ್ದು ಸತ್ಯ… ಎನ್ನುತ್ತಲೇ ಜಮೀರ್​ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts