ಹೈದರಾಬಾದ್: ಮಾರ್ಚ್ 11ರಂದು ತೆರೆಕಂಡ ‘ರಾಧೆ ಶ್ಯಾಮ್’ ಚಿತ್ರದಲ್ಲಿ ನಟ ಪ್ರಭಾಸ್ ಭವಿಷ್ಯವನ್ನು ನಿಖರವಾಗಿ ಊಹಿಸುವ ಸಾಮರ್ಥ್ಯವನ್ನು ಹೊಂದಿರುವ ಹಸ್ತಸಾಮುದ್ರಿಕ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಇದರ ನಡುವೆ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅವರು ಹಿಂದೊಮ್ಮೆ ಹೇಳಿದ್ದ ಮಾತೊಂದನ್ನು ಪ್ರಭಾಸ್ ಇದೀಗ ನೆನಪು ಮಾಡಿಕೊಂಡಿದ್ದಾರೆ.
ರಾಧೆ ಶ್ಯಾಮ್ ಚಿತ್ರದ ಪ್ರಚಾರದ ಭಾಗವಾಗಿ ನಡೆದ ಸಂದರ್ಶನದಲ್ಲಿ ರಾಜಮೌಳಿ ಜತೆ ಪ್ರಭಾಸ್ ಮಾತನಾಡುವಾಗ ಕುತೂಹಲಕಾರಿ ವಿಚಾರವನ್ನು ಮೆಲುಕು ಹಾಕಿದರು. 2009ರಲ್ಲಿ ತೆರೆಕಂಡ “ಏಕ್ ನಿರಂಜನ್” ತೆಲುಗು ಚಿತ್ರದಲ್ಲಿ ಕಂಗನಾ ಮತ್ತು ಪ್ರಭಾಸ್ ಒಟ್ಟಿಗೆ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ನಲ್ಲಿ ಕಂಗನಾ ಜ್ಯೋತಿಷಿ ಬಗ್ಗೆ ಹೇಳಿದ್ದರಂತೆ. ಜ್ಯೋತಿಷಿ ಹೇಳುವುದು ನಿಜವಾಗುತ್ತದೆ ಎಂದು ತಮ್ಮದೇ ಘಟನೆಯನ್ನು ಉದಾಹರಣೆಯಾಗಿ ತಿಳಿಸಿದರು ಎಂದು ಪ್ರಭಾಸ್ ಬಹಿರಂಗಪಡಿಸಿದ್ದಾರೆ.
ಕಂಗನಾ ಅವರು ಸಿನಿಮಾ ಕುರಿತು ಯಾವುದೇ ಸಂಪರ್ಕವಿಲ್ಲದ ಹಿಮಾಚಲ ಪ್ರದೇಶದ ಸಣ್ಣ ಪಟ್ಟಣದಲ್ಲಿ ಹುಟ್ಟಿ-ಬೆಳೆದವರು. ಒಮ್ಮೆ ಅವರು ಜ್ಯೋತಿಷಿಯನ್ನು ಭೇಟಿ ಮಾಡಿದ್ದಾಗ ಮುಂದೊಂದು ದಿನ ಹೀರೋಯಿನ್ ಆಗ್ತೀಯಾ ಅಂತಾ ಭವಿಷ್ಯ ನುಡಿದ್ದರಂತೆ. ಆದರೆ, ಆ ಸಮಯದಲ್ಲಿ ಅದನ್ನು ನಂಬಲು ಮತ್ತು ಒಪ್ಪಿಕೊಳ್ಳಲು ಕಂಗನಾಗೆ ಆಗಲಿಲ್ಲವಂತೆ. ನಾನೊಬ್ಬಳು ಸಣ್ಣ ಪಟ್ಟಣದಲ್ಲಿ ಹುಟ್ಟಿ ಬೆಳೆದ ಹುಡುಗಿಯಾಗಿದ್ದು, ಅದು ಹೇಗೆ ಹೀರೋಯಿನ್ ಆಗುವುದು ಸಾಧ್ಯ ಎಂದು ಭಾವಿಸಿದ್ದರಂತೆ. ಸುಮ್ಮನೇ ಹೀರೋಯಿನ್ ಆಗ್ತೀಯಾ ಹೇಳಿ ಮೂರ್ಖಳನ್ನಾಗಿ ಮಾಡುತ್ತಿದ್ದಾರೆ ಎಂದು ಜ್ಯೋತಿಷಿಯನ್ನು ಶಪಿಸಿದ್ದರಂತೆ.
ಆದರೆ, ಜ್ಯೋತಿಷಿ ಹೇಳಿದ ಮಾತು ನಿಜವಾಗಿದೆ ಎಂದು 2019ರಲ್ಲಿ ಕಂಗನಾ, ಪ್ರಭಾಸ್ಗೆ ಹೇಳಿದ್ದರಂತೆ. ಅಂದಹಾಗೆ ಕಂಗನಾ ಹಿಮಾಚಲ ಪ್ರದೇಶದ ಭಾಮ್ಲಾ ಎಂಬ ಪಟ್ಟಣದಲ್ಲಿ ಹುಟ್ಟಿ ಬೆಳೆದರು. 18ನೇ ವಯಸ್ಸಿನಲ್ಲಿ ಅನುರಾಗ್ ಬಸು ನಿರ್ದೇಶನದ ಗ್ಯಾಂಗ್ಸ್ಟರ್ ಚಿತ್ರದ ಮೂಲಕ ಬಾಲಿವುಡ್ ಪದಾರ್ಪಣೆ ಮಾಡಿದರು. ಅಂದಿನಿಂದ ಇಂದಿನವರೆಗೂ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಅಲ್ಲದೆ, ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. (ಏಜೆನ್ಸೀಸ್)
ಮೊದಲ ಬಾರಿ ಬಿಕಿನಿಯಲ್ಲಿ ಕಾಣಿಸಿಕೊಂಡ ಸೌತ್ ಬ್ಯೂಟಿ ವರು! ವಿಡಿಯೋ ನೋಡಿ ಹುಬ್ಬೇರಿಸಿದ ಅಭಿಮಾನಿಗಳು
4 ರಾಜ್ಯಗಳ ಚುನಾವಣಾ ಗೆಲುವೇ ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ: ಮಮತಾ ಬ್ಯಾನರ್ಜಿ ಕೊಟ್ಟ ವಿವರಣೆ ಹೀಗಿದೆ…
ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಸಿದ್ರೆ ಬಂಪರ್ ಆಫರ್: 137 ವರ್ಷ ಇತಿಹಾಸ ಇರೋ ಪಕ್ಷಕ್ಕೆ ಇದೆಂಥಾ ದುರ್ಗತಿ ಎಂದ ಬಿಜೆಪಿ