More

    2009ರಲ್ಲಿ ಕಂಗನಾ ಹೇಳಿದ್ದ ಗುಟ್ಟನ್ನು ರಟ್ಟು ಮಾಡಿದ ಪ್ರಭಾಸ್​: ರಾಧೆಶ್ಯಾಮ್​ ಚಿತ್ರಕ್ಕೂ ಆ ಗುಟ್ಟಿಗೂ ಇದೆ ಲಿಂಕ್!​

    ಹೈದರಾಬಾದ್​: ಮಾರ್ಚ್​​ 11ರಂದು ತೆರೆಕಂಡ ‘ರಾಧೆ ಶ್ಯಾಮ್’ ಚಿತ್ರದಲ್ಲಿ ನಟ ಪ್ರಭಾಸ್ ಭವಿಷ್ಯವನ್ನು ನಿಖರವಾಗಿ ಊಹಿಸುವ ಸಾಮರ್ಥ್ಯವನ್ನು ಹೊಂದಿರುವ ಹಸ್ತಸಾಮುದ್ರಿಕ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಇದರ ನಡುವೆ ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್​ ಅವರು ಹಿಂದೊಮ್ಮೆ ಹೇಳಿದ್ದ ಮಾತೊಂದನ್ನು ಪ್ರಭಾಸ್​ ಇದೀಗ ನೆನಪು ಮಾಡಿಕೊಂಡಿದ್ದಾರೆ.

    ರಾಧೆ ಶ್ಯಾಮ್​ ಚಿತ್ರದ ಪ್ರಚಾರದ ಭಾಗವಾಗಿ ನಡೆದ ಸಂದರ್ಶನದಲ್ಲಿ ರಾಜಮೌಳಿ ಜತೆ ಪ್ರಭಾಸ್​ ಮಾತನಾಡುವಾಗ ಕುತೂಹಲಕಾರಿ ವಿಚಾರವನ್ನು ಮೆಲುಕು ಹಾಕಿದರು. 2009ರಲ್ಲಿ ತೆರೆಕಂಡ “ಏಕ್​ ನಿರಂಜನ್​” ತೆಲುಗು ಚಿತ್ರದಲ್ಲಿ ಕಂಗನಾ ಮತ್ತು ಪ್ರಭಾಸ್​ ಒಟ್ಟಿಗೆ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್​ನಲ್ಲಿ ಕಂಗನಾ ಜ್ಯೋತಿಷಿ ಬಗ್ಗೆ ಹೇಳಿದ್ದರಂತೆ. ಜ್ಯೋತಿಷಿ ಹೇಳುವುದು ನಿಜವಾಗುತ್ತದೆ ಎಂದು ತಮ್ಮದೇ ಘಟನೆಯನ್ನು ಉದಾಹರಣೆಯಾಗಿ ತಿಳಿಸಿದರು ಎಂದು ಪ್ರಭಾಸ್​ ಬಹಿರಂಗಪಡಿಸಿದ್ದಾರೆ.

    ಕಂಗನಾ ಅವರು ಸಿನಿಮಾ ಕುರಿತು ಯಾವುದೇ ಸಂಪರ್ಕವಿಲ್ಲದ ಹಿಮಾಚಲ ಪ್ರದೇಶದ ಸಣ್ಣ ಪಟ್ಟಣದಲ್ಲಿ ಹುಟ್ಟಿ-ಬೆಳೆದವರು. ಒಮ್ಮೆ ಅವರು ಜ್ಯೋತಿಷಿಯನ್ನು ಭೇಟಿ ಮಾಡಿದ್ದಾಗ ಮುಂದೊಂದು ದಿನ ಹೀರೋಯಿನ್​ ಆಗ್ತೀಯಾ ಅಂತಾ ಭವಿಷ್ಯ ನುಡಿದ್ದರಂತೆ. ಆದರೆ, ಆ ಸಮಯದಲ್ಲಿ ಅದನ್ನು ನಂಬಲು ಮತ್ತು ಒಪ್ಪಿಕೊಳ್ಳಲು ಕಂಗನಾಗೆ ಆಗಲಿಲ್ಲವಂತೆ. ನಾನೊಬ್ಬಳು ಸಣ್ಣ ಪಟ್ಟಣದಲ್ಲಿ ಹುಟ್ಟಿ ಬೆಳೆದ ಹುಡುಗಿಯಾಗಿದ್ದು, ಅದು ಹೇಗೆ ಹೀರೋಯಿನ್ ಆಗುವುದು ಸಾಧ್ಯ ಎಂದು ಭಾವಿಸಿದ್ದರಂತೆ. ಸುಮ್ಮನೇ ಹೀರೋಯಿನ್​ ಆಗ್ತೀಯಾ ಹೇಳಿ ಮೂರ್ಖಳನ್ನಾಗಿ ಮಾಡುತ್ತಿದ್ದಾರೆ ಎಂದು ಜ್ಯೋತಿಷಿಯನ್ನು ಶಪಿಸಿದ್ದರಂತೆ.

    ಆದರೆ, ಜ್ಯೋತಿಷಿ ಹೇಳಿದ ಮಾತು ನಿಜವಾಗಿದೆ ಎಂದು 2019ರಲ್ಲಿ ಕಂಗನಾ, ಪ್ರಭಾಸ್​ಗೆ ಹೇಳಿದ್ದರಂತೆ. ಅಂದಹಾಗೆ ಕಂಗನಾ ಹಿಮಾಚಲ ಪ್ರದೇಶದ ಭಾಮ್ಲಾ ಎಂಬ ಪಟ್ಟಣದಲ್ಲಿ ಹುಟ್ಟಿ ಬೆಳೆದರು. 18ನೇ ವಯಸ್ಸಿನಲ್ಲಿ ಅನುರಾಗ್​ ಬಸು ನಿರ್ದೇಶನದ ಗ್ಯಾಂಗ್​ಸ್ಟರ್​ ಚಿತ್ರದ ಮೂಲಕ ಬಾಲಿವುಡ್​ ಪದಾರ್ಪಣೆ ಮಾಡಿದರು. ಅಂದಿನಿಂದ ಇಂದಿನವರೆಗೂ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಅಲ್ಲದೆ, ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. (ಏಜೆನ್ಸೀಸ್​)

    ಮೊದಲ ಬಾರಿ ಬಿಕಿನಿಯಲ್ಲಿ ಕಾಣಿಸಿಕೊಂಡ ಸೌತ್​ ಬ್ಯೂಟಿ ವರು! ವಿಡಿಯೋ ನೋಡಿ ಹುಬ್ಬೇರಿಸಿದ ಅಭಿಮಾನಿಗಳು

    4 ರಾಜ್ಯಗಳ ಚುನಾವಣಾ ಗೆಲುವೇ ಬಿಜೆಪಿಗೆ ದೊಡ್ಡ ನಷ್ಟವಾಗಲಿದೆ: ಮಮತಾ ಬ್ಯಾನರ್ಜಿ ಕೊಟ್ಟ ವಿವರಣೆ ಹೀಗಿದೆ…

    ಕಾಂಗ್ರೆಸ್ ಸದಸ್ಯತ್ವ ಹೆಚ್ಚಿಸಿದ್ರೆ ಬಂಪರ್ ಆಫರ್​: 137 ವರ್ಷ ಇತಿಹಾಸ ಇರೋ ಪಕ್ಷಕ್ಕೆ ಇದೆಂಥಾ ದುರ್ಗತಿ ಎಂದ ಬಿಜೆಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts