ಬೆಂಗಳೂರು: ಸ್ಯಾಂಡಲ್ವುಡ್ಗಿಂತ ಟಾಲಿವುಡ್ನಲ್ಲೇ ಹೆಚ್ಚು ಸದ್ದು ಮಾಡುತ್ತಿರುವ ಕಿರಿಕ್ ಬ್ಯೂಟಿ ರಶ್ಮಿಕಾ ಮಂದಣ್ಣ ಕೆಲವೊಮ್ಮೆ ಸಿನಿಮಾಗಿಂತ ವಿವಾದಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಇದೀಗ ಮತ್ತೊಂದು ವಿವಾದದ ಮೂಲಕ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನಿನ್ನೆಯಷ್ಟೇ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ, ತಮ್ಮ ತುಂಡುಡುಗೆಯಿಂದಲೇ ಟ್ರೋಲ್ ಆಗಿದ್ದರು. ಇದೀಗ ಮತ್ತೊಂದು ವಿಚಾರಕ್ಕೆ ಜನರ ಕೋಪಕ್ಕೆ ಕಾರಣವಾಗಿದ್ದಾರೆ.
ರಶ್ಮಿಕಾ ಅವರ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ರಶ್ಮಿಕಾ ಕಪ್ಪು ಬಣ್ಣದ ಉಡುಪು ಧರಿಸಿದ್ದು, ಗೇಟ್ ತೆಗೆದ ಕೂಡಲೇ ಹೊರಗೆ ಬರುವ ರಶ್ಮಿಕಾ, ತಮ್ಮ ಕಾರಿನತ್ತ ನಡೆದುಕೊಂಡು ಹೋಗುವಾಗ ಬಡ ಹೆಣ್ಣು ಹುಡುಗಿಯೊಂದು ಅಡ್ಡಬಂದು ಊಟಕ್ಕಾಗಿ ಹಣವನ್ನು ಕೇಳುತ್ತಾಳೆ. ಬಡ ಹುಡುಗಿಯನ್ನು ನೋಡಿ ನನ್ನ ಬಳಿ ಹಣವಿಲ್ಲ ಎನ್ನುತ್ತಾರೆ. ಅದನ್ನು ಕೇಳಿಯೂ ಅಲ್ಲಿಂದ ಹುಡುಗಿ ಕದಲದಿದ್ದಾಗ ಆಕೆಯನ್ನು ನಿರ್ಲಕ್ಷಿಸುವ ರಶ್ಮಿಕಾ ಕಾರನ್ನೇರಿ ಅಲ್ಲಿಂದ ಹೊರಡುತ್ತಾರೆ. ಇದಿಷ್ಟು ವೈರಲ್ ಆಗಿರುವ ವಿಡಿಯೋದಲ್ಲಿದೆ.
ರಶ್ಮಿಕಾರ ಈ ನಡೆ ಅನೇಕ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕೊನೆಯ ಪಕ್ಷ 100 ರೂಪಾಯಿ ಆದರೂ ಕೊಡಬೇಕಿತ್ತು. ಹಣದಲ್ಲಿ ಶ್ರೀಮಂತಿಕೆ ಇದ್ದರೂ ಮನಸ್ಸಿನಲ್ಲಿ ಬಡತನವಿದೆ ಎಂದು ರಶ್ಮಿಕಾರನ್ನು ಟೀಕಿಸಿದ್ದಾರೆ. ಸದ್ಯ ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದು, ಪರ-ವಿರೋಧದ ಚರ್ಚೆಯು ನಡೆಯುತ್ತಿದೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ‘ಪುಷ್ಪಾ’ ಚಿತ್ರದ ಯಶಸ್ಸಿನ ನಂತರ ರಶ್ಮಿಕಾ ಅನೇಕ ಬಾಲಿವುಡ್ ಪ್ರಾಜೆಕ್ಟ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ‘ಮಿಷನ್ ಮಜ್ನು’ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಸುದ್ದಿ ಬಂದಿದೆ. ಇತ್ತ ಟಾಲಿವುಡ್ನಲ್ಲಿ ಪುಷ್ಪ ಎರಡನೇ ಭಾಗಕ್ಕೂ ತಯಾರಿ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್)
ಕಾರು ಖರೀದಿಗೆ ಹೋಗಿದ್ದ ತುಮಕೂರು ರೈತನಿಗೆ ಅವಮಾನ: ಆನಂದ್ ಮಹೀಂದ್ರಾ ಹೇಳಿದ್ದು ಹೀಗೆ…
ಉನ್ನತ ಸಾಧಕರಿಗೆ ದೇಶದ ಸಲಾಂ: ಜ.ರಾವತ್, ಕಲ್ಯಾಣ ಸಿಂಗ್ ಪದ್ಮವಿಭೂಷಣ, ಗುಲಾಂ ನಬಿ ಆಜಾದ್ ಪದ್ಮಭೂಷಣ
ಉಚಿತ ಕೊಡುಗೆ, ಸುಪ್ರೀಂ ಗರಂ: ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೆ ನೋಟಿಸ್ ನೀಡಿದ ಕೋರ್ಟ್