ಹೈದರಾಬಾದ್: ಡಿ-ಗ್ಲಾಮರಸ್ ರೋಲ್, ಸರಳತೆ, ನೋ-ಮೇಕಪ್ ಲುಕ್, ಒಳ್ಳೆಯ ಚಿತ್ರಗಳ ಆಯ್ಕೆಗೆ ಹೆಸರುವಾಸಿಯಾಗಿರುವ ನಟಿ ಸಾಯಿ ಪಲ್ಲವಿ, ಸದಾ ವಿವಾದಗಳಿಂದ ದೂರ ಇರಲು ಇಚ್ಛಿಸುತ್ತಾರೆ. ಆದರೆ, ಈ ಬಾರಿ ಸಾಯಿ ಪಲ್ಲವಿ ಅವರು ಭಾರತೀಯ ಸೇನೆಯ ಬಗ್ಗೆ ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದಾರೆ.
ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ನಟಿ ಸಾಯಿ ಪಲ್ಲವಿ, ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದರು. ಈ ವೇಳೆ ಭಾರತೀಯ ಸೇನೆಯ ಬಗ್ಗೆ ಮಾತನಾಡುತ್ತಾ, ಪಾಕಿಸ್ತಾನದ ಜನರು ಭಾರತೀಯ ಭದ್ರತಾ ಪಡೆಗಳನ್ನು ಭಯೋತ್ಪಾದಕರು ಎಂದು ಭಾವಿಸುತ್ತಾರೆ. ಅದೇ ರೀತಿ ನಾವು ಕೂಡ ಪಾಕಿಸ್ತಾನದ ಬಗ್ಗೆ ಯೋಚಿಸುತ್ತೇವೆ ಎಂದರು. ಏಕೆಂದರೆ ಎರಡು ಕಡೆ ಒಬ್ಬರಿಗೊಬ್ಬರು ಸಾವು-ನೋವುಗಳನ್ನು ಉಂಟು ಮಾಡಿದ್ದಾರೆ ಎಂದು ಹೇಳಿದರು.
ಸಾಯಿ ಪಲ್ಲವಿ ಹೇಳಿಕೆಗೆ ಕೆಂಡಾಮಂಡಲರಾಗಿರುವ ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುವ ಮೂಲಕ ಬುದ್ಧಿ ಹೇಳುತ್ತಿದ್ದಾರೆ. ರಕ್ಷಣಾತ್ಮಕ ತಂಡಕ್ಕೂ ಆಕ್ರಮಣಕಾರಿ ತಂಡಕ್ಕೂ ವ್ಯತ್ಯಾಸವಿದೆ. ಪಾಕಿಸ್ತಾನಿಗಳು ಭಾರತೀಯ ಸೇನೆಯನ್ನು ಭಯೋತ್ಪಾದಕರು ಎಂದು ಭಾವಿಸಬಹುದು ಆದರೆ, ಅವರು ಇತಿಹಾಸದ ಕರಾಳ ಕಾಲಘಟ್ಟದಲ್ಲಿ ನಮ್ಮ ಯೋಧರನ್ನು ಕೊಂದಿದ್ದಾರೆ ಮತ್ತು ನಮ್ಮ ನಗರಗಳನ್ನು ಸ್ಫೋಟಿಸಿದ್ದಾರೆ. ಕಾಲು ಕೆರೆದುಕೊಂಡು ಕ್ಯಾತೆ ತೆಗೆದಿದ್ದಾರೆ. ಭಯೋತ್ಪಾದಕರನ್ನು ಹುಟ್ಟುಹಾಕುತ್ತಿದೆ. ವಿನಾಕಾರಣ ನಮ್ಮ ಮೇಲೆ ದಾಳಿ ಮಾಡುತ್ತಿದೆ. ನಿಮ್ಮ ಹೇಳಿಕೆ ತಪ್ಪು ಎಂದು ನೆಟ್ಟಿಗನೊಬ್ಬ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.
ಇದೇ ಸಂದರ್ಶನದಲ್ಲಿ 1990ರ ದಶಕದ ಆರಂಭದಲ್ಲಿ ಭಯೋತ್ಪಾದಕರು, ಕಾಶ್ಮೀರಿ ಹಿಂದುಗಳ ಜನಾಂಗೀಯ ಹತ್ಯೆ ಮಾಡಿದ್ದನ್ನು ಓರ್ವ ಮುಸಲ್ಮಾನನ ಹತ್ಯೆಗೆ ಸಮಾನವೆಂದು ಪರಿಗಣಿಸಿದ್ದಾರೆ. ಕಾಶ್ಮೀರಿ ಫೈಲ್ಸ್ ಸಿನಿಮಾದಲ್ಲಿ ಕಾಶ್ಮೀರಿಗಳ ಹತ್ಯೆಯನ್ನು ತೋರಿಸಲಾಗಿದೆ. ಕಾಶ್ಮೀರಿಗಳ ಹತ್ಯೆ ಹಾಗೂ ಗೋವು ಕಳ್ಳ ಸಾಗಾಣೆ ಮಾಡುವ ಮುಸ್ಲಿಮರನ್ನು ಹತ್ಯೆ ಮಾಡುವುದು ಎರಡು ಒಂದೇ. ಎರಡು ಪ್ರಕರಣದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಧಾರ್ಮಿಕ ಹೇಳಿಕೆ ನೀಡುವ ಮೂಲಕ ನಾವು ಯಾರೊಬ್ಬರ ಮನಸ್ಸಿಗೂ ಘಾಸಿ ಉಂಟುಮಾಡಬಾರದು ಎಂದಿದ್ದಾರೆ.
ಸಾಯಿ ಪಲ್ಲವಿ ಮಾತನಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಇದರ ಜತೆಗೆ ಕೆಲವರು ನಟಿಗೆ ಬೆಂಬಲವನ್ನು ನೀಡುತ್ತಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಸಾಯಿ ಪಲ್ಲವಿ ಅವರು ವಿರಾಟ ಪರ್ವಂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ವೇಣು ಉಡುಗುಲ ನಿರ್ದೇಶನದ ಈ ಚಿತ್ರದಲ್ಲಿ ರಾಣಾ ದಗ್ಗುಬಾಟಿ ನಾಯಕನಾಗಿ ನಟಿಸಿದ್ದಾರೆ. ಇದೇ ಜೂನ್ 17 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. (ಏಜೆನ್ಸೀಸ್)
మనకు తెలియని వాటి గురించి మనం మాట్లాడద్దు అమ్మడు.అనవసరంగా అల్లరి అవుతాము.ఆర్మీ వేరు, టెర్రరిసం వేరు బేబీ @Sai_Pallavi92 @SaipallaviFC pic.twitter.com/3lrkKkUx53
— Kalyani Sharma (@KalyaniMuktevi) June 15, 2022
There are actors with Huge fan base scared to speak out, it takes lot of courage for a star from South to speak against Hate Mongering Hinditva.. #SaiPallavi 👑 pic.twitter.com/pdIybjdrpD
— கோமாதா-TheHolyCow (@TheHolyCow_) June 15, 2022
ಸಾಯಿ ಪಲ್ಲವಿ ತುಂಡುಡುಗೆ ತೊಡದಿರಲು ಈ ಒಂದು ಕೆಟ್ಟ ಘಟನೆಯೇ ಕಾರಣ! ನೊಂದು ಕಣ್ಣೀರು ಹಾಕಿದ್ದರಂತೆ…
ಟಾಲಿವುಡ್ಗೆ ಹಾರಿದ ಮತ್ತೊಬ್ಬ ಕನ್ನಡತಿ!; ಕನ್ನಡದ ಅರ್ಧ ಡಜನ್ ಚಿತ್ರಗಳಲ್ಲಿ ಅನುಷಾ ನಟನೆ