ಶ್ರೀನಗರ: ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಗೆಲುವು ದಾಖಲಿಸಿದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿರುವ ವೈದ್ಯಕೀಯ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿರುವ ಬಗ್ಗೆ ಈಗಾಗಲೇ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆತಂಕಕಾರಿ ವಿಚಾರವೇನೆಂದರೆ, ಪಾಕ್ ಘೋಷಣೆಗೆ ವಿರೋಧಿಸಿದ ವಿದ್ಯಾರ್ಥಿನಿಗೆ ಇದೀಗ ಬೆದರಿಕೆ ಕರೆಗಳು ಬರುತ್ತಿರುವುದಾಗಿ ತಿಳಿದುಬಂದಿದೆ.
ಶ್ರೀನಗರದ ಸೌರದಲ್ಲಿರುವ ಸ್ಕಿಮ್ಸ್ (SKIMS) ಕಾಲೇಜಿನ ಮೆಡಿಕಲ್ ವಿದ್ಯಾರ್ಥಿನಿ ಅನನ್ಯ ಜಮ್ವಾಲ್ಗೆ ಬೆದರಿಕೆ ಕರೆಗಳು ಬರುತ್ತಿವೆ. ಅಬ್ದುಲ್ ಘಾಜಿ ಎಂಬಾತ ತನ್ನ ಟ್ವಿಟರ್ನಲ್ಲಿ ಅನನ್ಯರನ್ನು “ಅಪರಾಧಿ” ಹಾಗೂ “ಪೊಲೀಸ್ ಮಾಹಿತಿದಾರ” ಎಂದು ಜರಿದಿದ್ದಾನೆ. ಪಾಕ್ ಪರ ಘೋಷಣೆ ಕೂಗಿದ ಮೆಡಿಕಲ್ ವಿದ್ಯಾರ್ಥಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಅಡಿ ಎಫ್ಐಆರ್ ದಾಖಲಾಗಲು ಅನನ್ಯಳೇ ಕಾರಣ ಎಂದು ಟ್ವಿಟರ್ನಲ್ಲಿ ಅಬ್ದುಲ್ ಘಾಜಿ ಆರೋಪಿಸಿದ್ದಾನೆ.
ಪಾಕ್ ಗೆಲುವು ದಾಖಲಿಸಿದ ಬೆನ್ನಲ್ಲೇ ಕೆಲವು ವಿದ್ಯಾರ್ಥಿಗಳು ಪಾಕ್ ಪರ ಘೋಷಣೆ ಕೂಗಿರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿರುವ ಎಫ್ಐಆರ್ ಹಿಂದೆ ಅನನ್ಯ ಕೈವಾಡ ಇದೆ. ಆಕೆ ಆರ್ಎಸ್ಎಸ್ ಸದಸ್ಯೆ ಮತ್ತು ಕಾರ್ಯಕರ್ತೆ ಎಂದು ಘಾಜಿ ಸರಣಿ ಟ್ವೀಟ್ ಮೂಲಕ ಆರೋಪಿಸಿದ್ದಾರೆ.
ತಮ್ಮ ಮೇಲಿನ ಆರೋಪವನ್ನು ಅನನ್ಯ ತಿರಸ್ಕರಿಸಿದ್ದಾರೆ. ದೇಶದ್ರೋಹಿಗಳಿಗೆ ಬೆಂಬಲ ನೀಡುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಅದಾದ ಬಳಿಕ ನನಗೆ ಕಿರುಕುಳ ನೀಡಲು ಆರಂಭಿಸಿದರು. ನನಗೆ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಹೇಳಿದ್ದಾರೆ.
ಈಗಾಗಲೇ ಎಫ್ಐಆರ್ ದಾಖಲಾಗಿದ್ದು, ಅದರಡಿಯಲ್ಲಿ ಸಾಂಬಾ ಜಿಲ್ಲೆಯಲ್ಲಿ 6 ಮಂದಿಯನ್ನು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ಮುಂದುವರಿಸಿದ್ದಾರೆ. ಇನ್ನು ಪಾಕ್ ಘೋಷಣೆ ಕೂಗಿದ ವಿದ್ಯಾರ್ಥಿಗಳ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸರಿಯಾದ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ. (ಏಜೆನ್ಸೀಸ್)
ಹೆಣ್ಣು ಮಕ್ಕಳನ್ನು ಹೆತ್ತು ಮದುವೆಯ ಬಗ್ಗೆ ಚಿಂತಿಸುವ ಪಾಲಕರಿಗೆ ಸಮಂತಾ ಕೊಟ್ಟ ಸಲಹೆ ಹೀಗಿದೆ…
ಎಂದಿಗೂ ಈ ಒಂದು ಕೆಲಸ ಮಾಡದಂತೆ ಮಕ್ಕಳಿಗೆ ಯಾವಾಗಲೂ ಹೇಳ್ತಾರಂತೆ ನಾಗಾರ್ಜುನ..!