ಗುವಾಹಟಿ: ಫುಟ್ಬಾಲ್ ಪಂದ್ಯದ ಮೇಲೆ ಕಟ್ಟಿದ್ದ 500 ರೂಪಾಯಿ ಬೆಟ್ಟಿಂಗ್ ವಿಚಾರಕ್ಕೆ ನಡೆದ ಗಲಾಟೆ ವೇಳೆ ವ್ಯಕ್ತಿಯೊಬ್ಬ ತನ್ನ ಸಹ ಗ್ರಾಮಸ್ಥನ ತಲೆ ತುಂಡರಿಸಿ, ಅದನ್ನು ಹಿಡಿದುಕೊಂಡು 25 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುವ ಆಘಾತಕಾರಿ ಘಟನೆ ಅಸ್ಸಾಂನಲ್ಲಿ ನಡೆದಿದೆ.
ಈ ಘಟನೆ ಕಳೆದ ಸೋಮವಾರ ಉತ್ತರ ಅಸ್ಸಾಂ ಸೋನಿತ್ಪುರ ಜಿಲ್ಲೆಯ ರಂಗಪಾರ ಪೊಲೀಸ್ ಠಾಣೆ ವ್ಯಾಪ್ತಿಯ ದೋಯಲೂರು ಪ್ರದೇಶಲ್ಲಿ ನಡೆದಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೋಯಲೂರು ಪ್ರದೇಶಲ್ಲಿ ಫುಟ್ಬಾಲ್ ಪಂದ್ಯ ಆಯೋಜಿಸಲಾಗಿತ್ತು. ಈ ಪಂದ್ಯದ ಮುಗಿದ ಬಳಿಕ ಇಬ್ಬರ ನಡುವೆ ಜಗಳ ಆರಂಭವಾಗಿದೆ ಮತ್ತು ಜಗಳ ಭೀಬತ್ಸ ಘಟನೆಯೊಂದಿಗೆ ಅಂತ್ಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿವರಣೆಗೆ ಬರುವುದಾದರೆ, ತುನಿರಾಮ್ ಮ್ಯಾಡ್ರಿ ಫುಟ್ಬಾಲ್ ಪಂದ್ಯ ಆಡುತ್ತಿದ್ದ ಎರಡು ತಂಡಗಳಲ್ಲಿ ಒಂದು ತಂಡವನ್ನು ಬೆಂಬಲಿಸಿದ್ದ. ಹೇಮ್ ರಾಮ್ ಎಂಬಾತ ಇನ್ನೊಂದು ತಂಡದ ಅಭಿಮಾನಿಯಾಗಿದ್ದ. ಒಂದು ವೇಳೆ ಪಂದ್ಯದಲ್ಲಿ ತಮ್ಮ ನೆಚ್ಚಿನ ತಂಡ ಸೋತರೆ, 500 ರೂಪಾಯಿ ಕೊಡುವುದಾಗಿ ಇಬ್ಬರು ಬೆಟ್ಟಿಂಗ್ ಮಾಡಿದ್ದರು.
ಹೇಮ್ ರಾಮ್ ಎಂಬಾತ ಬೆಟ್ಟಿಂಗ್ನಲ್ಲಿ ಗೆದ್ದು, ಮ್ಯಾಡ್ರಿ ಬಳಿ ಹಣ ಕೇಳಿದ್ದ. ಆದರೆ, ತಾನು ಕೊಟ್ಟಿದ್ದ ಮಾತನ್ನು ಮ್ಯಾಡ್ರಿ ಉಳಿಸಿಕೊಳ್ಳಲಿಲ್ಲ. ಬದಲಾಗಿ ಊಟಕ್ಕೆ ಹೋಗೋಣ ಎಂದು ಕರೆದಿದ್ದ. ಆದರೆ, ರಾಮ್ ಮಾತ್ರ ಹಣಕ್ಕಾಗಿ ಮ್ಯಾಡ್ರಿ ಬಳಿ ಒತ್ತಾಯಿಸುತ್ತಲೇ ಇದ್ದ. ಇದರಿಂದ ಆಕ್ರೋಶಗೊಂಡು ಮ್ಯಾಡ್ರಿ, ತಾಳ್ಮೆ ಕಳೆದುಕೊಂಡು ತನ್ನ ಬ್ಯಾಗ್ನಲ್ಲಿದ್ದ ಹರಿತವಾದ ಆಯುಧವನ್ನು ತೆಗೆದುಕೊಂಡು ರಾಮ್ ತಲೆಯಲ್ಲು ತುಂಡರಿಸಿದ.
ಇದಾದ ಬಳಿಕ ಆರೋಪಿ ಮ್ಯಾಡ್ರಿ ತುಂಡರಿಸಿದ ರಾಮ್ ತಲೆಯನ್ನು ಹಿಡಿದು ರಂಗಪರಾ ಪೊಲೀಸ್ ಠಾಣೆಗೆ ತೆರಳಿ ಸೋಮವಾರ ತಡರಾತ್ರಿಯೇ ಶರಣಾಗಿದ್ದಾನೆ. ಆರೋಪಿಯನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಮತ್ತು ಪ್ರಕರಣದ ಎಲ್ಲಾ ಅಂಶಗಳನ್ನು ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್)
ಕಾರಿಗೆ ಆಂಬ್ಯುಲೆನ್ಸ್ ಸೈರೆನ್ ಹಾಕ್ಕೊಂಡು ಓಡಾಟ: ಮಾಜಿ ಸಂಸದ ಶಿವರಾಮೇಗೌಡ ಅಳಿಯನಿಗೆ ಬಿತ್ತು ಭಾರಿ ದಂಡ
ಮರ ಉಸಿರಾಡೋದನ್ನ ಎಲ್ಲಾದರೂ ನೋಡಿದ್ದೀರಾ?! ಇಲ್ಲಿದೆ ನೋಡಿ ಅಪರೂಪದ ವಿಡಿಯೋ…
ಥಾಯ್ಲೆಂಡ್ ವಿಮಾನದಲ್ಲಾದ ಅತ್ಯಂತ ಕೆಟ್ಟ ಅನುಭವವನ್ನು ಬಹಿರಂಗಪಡಿಸಿದ ಮಲಯಾಳಿ ಬ್ಯೂಟಿ ನಜ್ರಿಯಾ!