ಬೆಳಗಾವಿ: ಮಹಾಮಾರಿ ಕರೊನಾ ವೈರಸ್ ಸೋಂಕಿಗೆ ಅಣ್ಣ ಮೃತಪಟ್ಟ ಬಳಿಕ ವಿಧವೆಯಾಗಿದ್ದ ಆತನ ಹೆಂಡತಿಯನ್ನು ಮದುವೆಯಾಗುವ ಮೂಲಕ ಆಕೆಯ ಬದುಕಿಗೆ ತಮ್ಮ ಆಸರೆಯಾಗಿದ್ದಾನೆ.
ಈ ವಿನೂತನ ಮದುವೆಗೆ ಮಹಾರಾಷ್ಟ್ರದ ಅಕೋಲೆ ತಾಲೂಕಿನ ಧೋಕ್ರಿಯ ಸಾಕ್ಷಿಯಾಗಿದೆ. ಕಳೆದ ವರ್ಷ ಆಗಸ್ಟ್ನಲ್ಲಿ 31 ವರ್ಷದ ನೀಲೇಶ್ ಸೇಠ್ ಬಲಿಯಾಗಿದ್ದ. ಗಂಡನನ್ನು ಕಳೆದುಕೊಂಡು 23 ವರ್ಷದ ಪೂನಂ ಹಾಗೂ ಆಕೆಯ 19 ತಿಂಗಳ ಮಗು ಆಸರೆಯಿಲ್ಲದಂತಾಗಿದ್ದರು.
ಇದೀಗ ಗ್ರಾಮಸ್ಥರ ಸಮ್ಮುಖದಲ್ಲಿ ನೀಲೇಶ್ ಸಹೋದರ ಸಮಾಧಾನ್ ಪೂನಂ ಕೈ ಹಿಡಿಯುವ ಮೂಲಕ ಅವರ ಬದುಕಿಗೆ ಆಸೆಯಾಗಿದ್ದಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ಪರಸ್ಪರ ಒಪ್ಪಿಗೆಯಿಂದಲೇ ಇಬ್ಬರು ಸಪ್ತಪದಿ ತುಳಿದಿದ್ದಾರೆ.
ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟ ಪೂನಂ ಹಾಗೂ ಸಮಾಧಾನ್ಗೆ ಗ್ರಾಮಸ್ಥರು ಶುಭ ಹಾರೈಸಿದ್ದಾರೆ. ಅಲ್ಲದೆ, ಸಮಾಧಾನ್ ನಡೆಗೆ ಸಾಕಷ್ಟು ಮೆಚ್ಚುಗೆಗಳು ಕೂಡ ವ್ಯಕ್ತವಾಗುತ್ತಿದೆ. (ದಿಗ್ವಿಜಯ ನ್ಯೂಸ್)
The Truth ಸಿನಿಮಾ ಮಾದರಿಯಲ್ಲೇ ತನಿಖಾಧಿಕಾರಿ ಹತ್ಯೆಗೆ ಯತ್ನ: ನಟ ದಿಲೀಪ್ ಭಯಾನಕ ಸಂಚು ಬಯಲು
ಬೆಂಗ್ಳೂರಿಗರೇ ಎಚ್ಚರ ಮಾಜಿ ಸಿಎಂ ಪತ್ನಿಯ ಟ್ರಾಫಿಕ್ ಜಾಮ್ ಹೇಳಿಕೆ ನಿಮ್ಮ ಮದ್ವೆಗೆ ಮಾರಕ: ಹರಿದಾಡ್ತಿದೆ ಮೀಮ್ಸ್!
ಮೈ ಕಾಣಿಸುವಂತೆ ಅರ್ಧಂಬರ್ಧ ಬಟ್ಟೆ ಯಾಕೆ ಹಾಕ್ತೀಯಾ?: ನೆಟ್ಟಿಗನ ಕಾಮೆಂಟ್ಗೆ ನಿವೇದಿತಾ ಗರಂ