More

    ಬಂದೂಕಿನಿಂದ ಪತ್ನಿ, ಆಕೆಯ ಸೋದರ ಸಂಬಂಧಿ ಮೇಲೆ ಗುಂಡು ಹಾರಿಸಿ ಕೆರೆಗೆ ಹಾರಿದ ವ್ಯಕ್ತಿ

    ಮಡಿಕೇರಿ: ನಾಡಿನೆಲ್ಲೆಡೆ ಜನ ಆಯುಧ ಪೂಜೆ ಕಳೆದು ದಸರಾ ಹಬ್ಬದ ಸಂಭ್ರಮದಲ್ಲಿದ್ರೆ ಕೊಡಗು ಜಿಲ್ಲೆಯಲ್ಲೊಬ್ಬ ಬಂದೂಕು ಹಿಡಿದು ಆರ್ಭಟಿಸಿ, ದುರಂತ ಸಾವಿಗೀಡಾಗಿದ್ದಾನೆ. ಆಸ್ತಿ ವಿಚಾರದಲ್ಲಿ ನಡೆದ ಕಲಹದಿಂದ ರೋಸಿ ಹೋಗಿದ್ದ ವ್ಯಕ್ತಿ, ತನ್ನ ಪತ್ನಿ ಹಾಗೂ ಆಕೆಯ ಸೋದರ ಸಂಬಂಧಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಬಳಿಕ ತಾನೂ ಕೆರೆಗೆ ಹಾರಿ ಜೀವನ ಕಳೆದುಕೊಂಡಿದ್ದಾನೆ.

    ಈ ಘಟನೆ ಕೊಡಗು ಜಿಲ್ಲೆಯ ಕಿರುಗೂರು ಗ್ರಾಮದಲ್ಲಿ ನಡೆದಿದೆ. ಮಧ್ಯಾಹ್ನವರೆಗೆ ಊರಲ್ಲಿ ಓಡಾಡಿಕೊಂಡಿದ್ದ ಮಧು(39) ಶವವಾಗಿ ಬಿದ್ದಿದ್ರೆ, ಮನೆಯೊಳಗೆ ಆತನ ಸಂಬಂಧಿ ಯಶೋಧ(43) ಗುಂಡೇಟು ತಗಲಿ ರಕ್ತದ ಮಡುವಿನಲ್ಲಿ ಬಿದ್ದದ್ದರು. ಕೃತ್ಯವೆಸಗಿದ್ದು ಯಾರು ಅಂತ ಗೊತ್ತಾಗೋಕೆ ಹೆಚ್ಚು ಸಮಯ ಬೇಕಿರಲಿಲ್ಲ. ಇಂಥ ಪೈಶಾಚಿಕ ಕೃತ್ಯವೆಸಗಿದ್ದು, ಬೇರಾರು ಅಲ್ಲ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಯಶೋಧಾಳ ಪತಿ ಸಾಗರ್​.

    ಘಟನೆಗೆ ಕಾರಣ ಏನು ಅಂತ ನೋಡುತ್ತಾ ಹೋದ್ರೆ ಬಯಲಾಗೋದೇ ಆಸ್ತಿ ವೈಷಮ್ಯ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದಲ್ಲಿ ಸಾಗರ್ ಮನೆ ಬಳಿಯಲ್ಲಿ ಮಧು ಕುಟುಂಬದ ಒಂದಷ್ಟು ಜಮೀನಿದೆ. ಇಲ್ಲಿ ಇವತ್ತು ಅಡಿಕೆ ಕೊಯ್ಲು ಮಾಡೋಕೆ ಕಾರ್ಮಿಕರು ಬಂದಿದ್ರು. ಜಾಗದ ವಿಚಾರದಲ್ಲಿ ಮೊದಲಿನಿಂದಲೂ ಎರಡು ಕುಟುಂಬದ ಮಧ್ಯೆ ವೈಷಮ್ಯ ಇತ್ತು. ಅದರಲ್ಲೂ ಸಾಗರ್ ಹೆಚ್ಚು ತಲೆಕೆಡಿಸಿಕೊಂಡಿದ್ದ, ಪದೇಪದೇ ಕ್ಯಾತೆ ತೆಗೆದು ಜಗಳಕ್ಕೂ ಹೋಗ್ತಿದ್ದ. ಶುಕ್ರವಾರ ಮಧ್ಯಾಹ್ನ, ಕೆಲಸಗಾರರನ್ನ ನೋಡೋಕೆ ಅಂತ ಮಧು ಟ್ರ್ಯಾಕ್ಟರ್ ತಗೊಂಡು ತೋಟದತ್ತ ಬಂದಿದ್ದಾನೆ. ಮಧು ಮನೆ ಮುಂಭಾಗದಲ್ಲಿ ತಿರುಗಿಸುತ್ತಿದ್ದ ವೇಳೆ ಮತ್ತೆ ಜಗಳ ತೆಗೆದಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು, ಪರಿಸ್ಥಿತಿ ಕೈಮೀರಿದ್ದು, ಮೊದಲೇ ಪ್ಲಾನ್ ಮಾಡಿದ್ದ ಸಾಗರ್, ತನ್ನ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿಸಿಯೇ ಬಿಟ್ಟಿದ್ದಾನೆ.

    ಪತಿ ಬಂದೂಕು ಹಿಡಿದುಕೊಂಡು ಮಧುವಿಗೆ ಗುಂಡು ಹಾರಿಸಲು ಮುಂದಾದಾಗ ಪತ್ನಿ ಯಶೋಧ ಮಧ್ಯಪ್ರವೇಶಿಸಿ ತಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ವೇಳೆ ಮನೆಯೊಳಗೆಯೇ ಆಕೆಗೆ ಗುಂಡು ಹಾರಿಸಿ, ಬಳಿಕ ಅಂಗಳದಲ್ಲಿ ಟ್ರ್ಯಾಕ್ಟರ್ ಟರ್ನ್ ಮಾಡುತ್ತಿದ್ದ ಮಧುವಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ತೀವ್ರ ಗುಂಡೇಟಿನಿಂದ ಮಧು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ. ಅಷ್ಟೊತ್ತಿಗಾಗಲೆ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮನೆಯತ್ತ ಧಾವಿಸಿದ್ದಾರೆ. ಅತ್ತ ಮನೆಯೊಳಗೆ ರಕ್ತದ ಮಡುವಿನಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ಯಶೋಧಾಳನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮೈಸೂರಿಗೆ ಸಾಗಿಸುವ ಮಾರ್ಗದಲ್ಲಿ ಯಶೋಧ ಕೂಡಾ ಕೊನೆಯುಸಿರೆಳೆದಿದ್ದಾರೆ. ಇಷ್ಟೆಲ್ಲ ಆದ್ಮೇಲೆ ಕೋವಿ ಹಿಡಿದು ಅಬ್ಬರಿಸಿದ್ದ ಸಾಗರ್ ಮನೆ ಪಕ್ಕದಲ್ಲಿದ್ದ ಕೆರೆಗೆ ಹಾರಿ ತಾನೂ ಪ್ರಾಣ ಬಿಟ್ಟಿದ್ದಾನೆ.

    ಕ್ಷುಲ್ಲಕ ವಿಚಾರದ ಮೇಲಿನ ಕ್ಷಣಿಕ ಸಿಟ್ಟು ಇಬ್ಬರನ್ನು ಬಲಿ ಪಡೆದಿದ್ದಂತೂ ದುರಂತ. ಹಬ್ಬದ ಸಂಭ್ರಮವಿರಬೇಕಿದ್ದಲ್ಲಿ ಸೂತಕದ ಕರಿಛಾಯೆ ಆವರಿಸಿದೆ.

    ರೈತಪ್ರತಿಭಟನೆ ಸ್ಥಳದಲ್ಲಿ ಯುವಕನ ಶವ; ಕೈಕಾಲು ತುಂಡರಿಸಿ ದೇಹವನ್ನು ನೇತುಹಾಕಿದ್ದರು!

    ಮೈಸೂರು ದಸರಾ: ಇದೇ ಮೊದಲ ಬಾರಿಗೆ ಚಾಮುಂಡಿ ಬೆಟ್ಟದಿಂದ ಮೆರವಣಿಗೆಯಲ್ಲಿ ಅರಮನೆಗೆ ಬಂದ ಉತ್ಸವ ಮೂರ್ತಿ

    ಬೇಯಿಸಿದ ಮೊಟ್ಟೆ ತಿಂದು ಪ್ರಾಣಬಿಟ್ಟ ಮಹಿಳೆ! ಮೊಟ್ಟೆ ಪ್ರಿಯರನ್ನ ಬೆಚ್ಚಿಬೀಳಿಸುತ್ತೆ ಈ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts