More

    ಮೊಟ್ಟೆ ವಿರೋಧಿಸಿದ್ರೆ ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿಂದು ಹೋಗ್ತೀವಿ ಎಂದ ವಿದ್ಯಾರ್ಥಿನಿ

    ಕೊಪ್ಪಳ: ಶಾಲಾಮಕ್ಕಳಿಗೆ ಬಾಳೆಹಣ್ಣಿನ ಜತೆ ಮೊಟ್ಟೆ ಕೊಡುವ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಗಂಗಾವತಿಯ ವಿದ್ಯಾರ್ಥಿನಿಯೊಬ್ಬಳು ನಾವು ಮೊಟ್ಟೆ ತಿಂದು ಬದುಕುತ್ತೇವೆ, ಇಲ್ಲವಾದರೆ ಸಾಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾಳೆ.

    ಶಾಲೆಯಲ್ಲಿ ಮೊಟ್ಟೆ ನೀಡಲು ಕೆಲ‌ ಮಠಾಧೀಶರ ವಿರೋಧ ಹಿನ್ನೆಲೆಯಲ್ಲಿ ಎಸ್ಎಫ್ಐ ಸಂಘಟನೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ವಿದ್ಯಾರ್ಥಿನಿ ಮಾತನಾಡಿದ್ದಾಳೆ. ಮೊಟ್ಟೆ ತಿಂದರೇನೇ ನಾವು ಮುಂದೆ ಬದುಕುತ್ತೇವೆ, ಇಲ್ಲವಾದಲ್ಲಿ ನಾವು ಸಾಯುತ್ತೇವೆ. ನಾವು ಸಾಯುವುದು ಬೇಕಾ? ಅಥವಾ ಮೊಟ್ಟೆ ಕೊಡದೇ ಇರುವುದು ಬೇಕಾ? ನೀವೇ ಹೇಳಿ ಎಂದು ವಿದ್ಯಾರ್ಥಿನಿ ಪ್ರಶ್ನಿಸಿದ್ದಾಳೆ.

    ನಮಗೆ ಮೊಟ್ಟೆ ಕೊಡಬೇಡಿ ಎಂದು ವಿರೋಧ ಮಾಡಿದರೆ, ನಾವು ನಿಮ್ಮ ಮಠಕ್ಕೆ ಬಂದು ಮೊಟ್ಟೆ ತಿಂದು ಹೋಗುತ್ತೇವೆ ಎಂದು ವಿದ್ಯಾರ್ಥಿನಿ ಎಚ್ಚರಿಕೆಯನ್ನು ನೀಡಿದ್ದಾಳೆ. ನಮಗೆ ಯಾಕೆ ವಿರೋಧ ಮಾಡುತ್ತಿದ್ದೀರಾ? ಮಕ್ಕಳು ದೇವರ ಸಮಾನ ಅಂತಾರೆ, ಹಾಗಾದರೆ ದೇವರ ಆಸೆ ಯಾಕೆ ಈಡೇರಿಸುವುದಿಲ್ಲ? ನಾವು ರೋಡಿಗೆ ಬಂದು ಹೋರಾಟ ಮಾಡಬೇಕಾ? ಎಂದು ಮಠಾಧೀಶರನ್ನು ವಿದ್ಯಾರ್ಥಿನಿ ಪ್ರಶ್ನಿಸಿದ್ದಾಳೆ.

    ನಾವು ಒಂದಲ್ಲ ಎರಡು ಮೊಟ್ಟೆ ತಿಂತೀವಿ. ಅದನ್ನ ಕೇಳಲು ನೀವು ಯಾರು? ನಿಮ್ಮ ಮಠಕ್ಕೆ ಸ್ನಾನ ಮಾಡಿ ಬಂದು ಪೂಜೆ ಮಾಡಿಲ್ವಾ? ನಿಮಗೆ ದಕ್ಷಿಣೆ ಹಾಕಿಲ್ವಾ ಎಂದು ವಿದ್ಯಾರ್ಥಿನಿ ಸಾಲು ಸಾಲು ಪ್ರಶ್ನೆಗಳನ್ನು ಹಾಕಿದ್ದಾಳೆ. (ದಿಗ್ವಿಜಯ ನ್ಯೂಸ್​)

    ಜೂನಿಯರ್​ ಎನ್​ಟಿಆರ್​​ ಧರಿಸಿರುವ ಈ ವಾಚ್​ನ​ ಬೆಲೆ ಕೇಳಿದ್ರೆ ನಿಜಕ್ಕೂ ಬೆರಗಾಗ್ತಿರಾ..!

    ಅಪರಿಚಿತನ ಪುಂಡಾಟಕ್ಕೆ ಹೈರಾಣಾದ ಫ್ಯಾಮಿಲಿ: ಮಧ್ಯರಾತ್ರಿ ಕಾರಿನಲ್ಲಿ ಚೇಸ್​ ಮಾಡಿ ಬಂದು ಅಸಭ್ಯ ವರ್ತನೆ

    ನಿಯೋಜನೆಗೆ ಇತಿಶ್ರೀ?: ಸರ್ಕಾರಿ ನೌಕರರ ವಲಸೆ ತಡೆಗೆ ಸುಗ್ರೀವಾಜ್ಞೆಯ ಅಸ್ತ್ರ

    ಭಯೋತ್ಪಾದನೆಯ ಹೆಬ್ಬಾಗಿಲು! ತಬ್ಲಿಘಿ ಸಂಘಟನೆ ಬ್ಯಾನ್‌ ಮಾಡಿದ ಸೌದಿ: ಪ್ರಜೆಗಳಿಗೆ ಕೊಟ್ಟಿದೆ ಭಾರಿ ಎಚ್ಚರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts