More

    ಶೌಚಗೃಹಕ್ಕೆ ಹೋದ ಇನ್ಸ್​ಪೆಕ್ಟರ್​ ಪತ್ನಿ ತುಂಬಾ ಹೊತ್ತು ಬರಲೇ ಇಲ್ಲ: ಬಾಗಿಲು ತೆರೆದ ಪತಿಗೆ ಕಾದಿತ್ತು ಶಾಕ್​!

    ಕೊಲ್ಲಂ: ಪತ್ನಿ ಸಾವಿನ ಪ್ರಕರಣದಲ್ಲಿ ಕೇರಳದ ಸಹಾಯಕ ಮೋಟಾರು ವಾಹನ ನಿರೀಕ್ಷಕರನ್ನು ಬಂಧಿಸಲಾಗಿದ್ದು, ಇನ್ಸ್​ಪೆಕ್ಟರ್​ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಕೇಸು ದಾಖಲಿಸಲಾಗಿದೆ.

    ಪತ್ನಿ ವಿಸ್ಮಯ ಮನೆಯಲ್ಲಿ ಶವವಾಗಿ ಪತ್ತೆಯಾದ ಒಂದು ದಿನದ ಬಳಿಕ ಆರೋಪಿ ಇನ್ಸ್​ಪೆಕ್ಟರ್​ ಕಿರಣ್​ಕುಮಾರ್​ರನ್ನು ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಮಂಗಳವಾರ ಕಿರಣ್​ರನ್ನು ಬಂಧಿಸುವ ಮುನ್ನ ಅವರನ್ನು ಅನೇಕ ಸಮಯದವರೆಗೆ ವಿಚಾರಣೆ ನಡೆಸಲಾಗಿದೆ. ಈ ವೇಳೆ ತಪ್ಪೊಪ್ಪಿಕೊಂಡಿರುವ ಕಿರಣ್​ಕುಮಾರ್​ ಆಗಾಗ ವಿಸ್ಮಯಳಿಗೆ ಥಳಿಸುತ್ತಿದ್ದೆ ಎಂದು ಹೇಳಿದ್ದಾರೆ. ವಿಸ್ಮಯ ತವರು ಮನೆಗೆ ಕಳುಹಿಸಿರುವ ಫೋಟೋಗಳಲ್ಲಿರುವ ಗಾಯಗಳು ಸಹ ನಾನೇ ಮಾಡಿದ್ದು ಎಂದು ಒಪ್ಪಿಕೊಂಡಿದ್ದಾರೆ.

    ಶೌಚಗೃಹಕ್ಕೆ ಹೋದ ಇನ್ಸ್​ಪೆಕ್ಟರ್​ ಪತ್ನಿ ತುಂಬಾ ಹೊತ್ತು ಬರಲೇ ಇಲ್ಲ: ಬಾಗಿಲು ತೆರೆದ ಪತಿಗೆ ಕಾದಿತ್ತು ಶಾಕ್​!

    ಸೋಮವಾರ ಮುಂಜಾನೆ ನಾನು ಮತ್ತು ವಿಸ್ಮಯ ಜಗಳ ಆಡಿದೆವು. ಇದಾದ ಬಳಿಕ ತವರು ಮನೆಗೆ ಹೋಗುವುದಾಗಿ ಹೇಳಿದಳು. ತದನಂತರದಲ್ಲಿ ಇಬ್ಬರ ನಡುವಿನ ವೈಮನಸ್ಸು ಹಿರಿಯರ ಸಮ್ಮುಖದಲ್ಲಿ ಬಗೆಹರಿಯಿತು. ಆದರೆ, ತುಂಬಾ ನೊಂದಿದ್ದ ವಿಸ್ಮಯ ತನ್ನ ಜೀವನಕ್ಕೆ ತಾನೇ ಅಂತ್ಯವಾಡಿದಳು.

    ಶೌಚಗೃಹಕ್ಕೆ ತೆರಳಿದ ವಿಸ್ಮಯ ಅನೇಕ ಸಮಯದವರೆಗೂ ಮರಳಿ ಬರಲಿಲ್ಲ. ಸುಮಾರು 20 ನಿಮಿಷವಾದರು ಬರಲಿಲ್ಲ. ಅನುಮಾನದಿಂದ ಬಾಗಿಲು ಮುರಿದು ನೋಡಿದಾಗ ಆಕೆ ಸತ್ತು ಬಿದ್ದಿದ್ದಳು ಎಂದು ಕಿರಣ್​ ಹೇಳಿಕೆ ನೀಡಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಿರಣ್​ ಮತ್ತು ವಿಸ್ಮಯ ಪಾಲಕರನ್ನು ವಿಚಾರಣೆ ಮಾಡುತ್ತಿದ್ದಾರೆ. ಕಿರಣ್​ ತಾಯಿಯು ಕೂಡ ವಿಸ್ಮಯ ಮೇಲೆ ಹಲ್ಲೆ ಮಾಡಿದ್ದರು ಎಂದು ವಿಸ್ಮಯ ಪಾಲಕರು ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಸರ್ಕಾರಕ್ಕೆ ಡಾ. ದೇವಿಶೆಟ್ಟಿ‌ ವರದಿ ಸಲ್ಲಿಕೆ: ಶಾಲೆ ಆರಂಭಕ್ಕೆ ಸೂಚನೆ ನೀಡಿದ್ರೂ ಒಪ್ಪದ ಸರ್ಕಾರ

    ಹೆಂಡತಿ ಮೇಲೇ ಅನುಮಾನ; ಕತ್ತು ಕೊಯ್ದು ಕೊಲೆ ಮಾಡಿದ ಪತಿರಾಯ!

    ಜಿಲ್ಲಾಧಿಕಾರಿ ಅಧಿಕೃತ ನಿವಾಸದಲ್ಲಿ ಈಜುಕೊಳ ನಿರ್ಮಾಣ: ರೋಹಿಣಿ ಸಿಂಧೂರಿ ಮಾಡಿದ್ದಾರೆನ್ನಲಾದ ತಪ್ಪುಗಳ ಪಟ್ಟಿ ಹೀಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts