ಕೋಲಾರ: ಏಪ್ರಿಲ್ 14ರ ಗುರುವಾರದಂದು ತೆರೆಗೆ ಅಪ್ಪಳಿಸಿರುವ ನಟ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾ ವಿಶ್ವದಾಂದ್ಯಂತ ಬಿಡುಗಡೆಯಾಗಿದೆ. ಆದರೆ, ದುರಂತ ಅಂದರೆ ಕೆಜಿಎಫ್ ಹೆಸರಿಟ್ಟುಕೊಂಡು ವಿಶ್ವದಾದ್ಯಂತ ಸದ್ದು ಮಾಡಿದ್ದ ಕೆಜಿಎಫ್ ಸಿನಿಮಾ ಕೆಜಿಎಫ್ ನಗರದಲ್ಲೇ ಬಿಡುಗಡೆಯಾಗಿಲ್ಲ, ಈ ಮೂಲಕ ಕೆಜಿಎಫ್ ಜನರಿಗೆ ಹಾಗೂ ಕೆಜಿಎಫ್ ಬಾಗದ ಯಶ್ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ.
ಸಿನಿಮಾ ವಿತರಕರು ಹೆಚ್ಚಿನ ಹಣ ಕೇಳಿದ್ದರಿಂದ ಅಷ್ಟು ಹಣವನ್ನು ಕೊಡಲಾಗದಿದ್ದಕ್ಕೆ ಕೆಜಿಎಫ್ನಲ್ಲಿ ಈ ಸಿನಿಮಾ ಬಿಡುಗಡೆಯಾಗಿಲ್ಲ. ಕೆಜಿಎಫ್ನ ಲಕ್ಷ್ಮೀ ಸಿನಿಮಾ, ಒಲಂಪಿಯಾ ಸಿನಿಮಾ ಚಿತ್ರಮಂದಿರದ ಮಾಲೀಕರುಗಳು ವಿತರಕ ಜಯಣ್ಣ ಬಳಿ ಎರಡು ಮೂರು ಬಾರಿ ಅಲೆದಾಡಿದರೂ ಕೂಡಾ ಸಿನಿಮಾ ಕೊಟ್ಟಿಲ್ಲವಂತೆ.
ಕೆಜಿಎಫ್ ಭಾಗದಲ್ಲಿ ಹೆಚ್ಚಾಗಿ ಬಡ ಜನರೇ ಇರುವುದು. ಅವರು ನೂರಾರು ರೂಪಾಯಿ ದುಡ್ಡು ಕೊಟ್ಟು ಸಿನಿಮಾ ನೋಡುವುದಿಲ್ಲ. ಹಾಗಾಗಿ ಇವರು ಹೇಳಿದಷ್ಟು ಹಣ ನೀಡಲಾಗದೆ ಕೆಜಿಎಫ್ ಚಿತ್ರಮಂದಿರದ ಮಾಲೀಕರುಗಳು ಚಿತ್ರವನ್ನು ತರಲಾಗಿಲ್ಲ, ಪರಿಣಾಮ ಇಂದು ಕೆಜಿಎಫ್ ಹೆಸರಿಟ್ಟುಕೊಂಡು, ಕೆಜಿಎಫ್ನಲ್ಲೇ ಹೆಚ್ಚಾಗಿ ಶೂಟಿಂಗ್ ಮಾಡಿ ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೆಜಿಎಫ್-2 ಸಿನಿಮಾ ಕೆಜಿಎಫ್ನಲ್ಲೇ ಬಿಡುಗಡೆಯಾಗಿಲ್ಲ.
ಕನಿಷ್ಠ ಕೆಜಿಎಫ್ ಅನ್ನೋ ಹೆಸರಿಟ್ಟುಕೊಂಡಿದಕ್ಕಾದರೂ ಚಿತ್ರತಂಡ ಇಲ್ಲಿ ಸಿನಿಮಾ ಬಿಡುಗಡೆ ಮಾಡಬೇಕಿತ್ತು ಅನ್ನೋದು ಸಿನಿ ಪ್ರಿಯರ ಮಾತಾಗಿದೆ. ಅಲ್ಲದೆ, ಅಭಿಮಾನಿಗಳ ನಿರಾಶೆಗೂ ಕಾರಣವಾಗಿದೆ. ಇನ್ನಾದರೂ ಸಿನಿಮಾ ತಂಡ ಎಚ್ಚೆತ್ತುಕೊಳ್ಳಲಿ ಎಂಬುದು ಜನರ ಮಾತಾಗಿದೆ. (ದಿಗ್ವಿಜಯ ನ್ಯೂಸ್)
ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರಾ ನಟ ವಿಶಾಲ್? ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ ಈ ಒಂದು ಟ್ವೀಟ್!