More

    ತಂದೆ-ತಾಯಿಯನ್ನು ಕೊಂದು ಶವಗಳ ಮುಂದೆ ಸೇಬು ಸವಿದ ಪಾಪಿ ಪುತ್ರ: ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ!

    ಪಲಕ್ಕಾಡ್​: ಪಾಪಿ ಮಗನೊಬ್ಬ ವಯಸ್ಸಾದ ತಂದೆ-ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೇರಳದ ಪಲಕ್ಕಾಡ್​ನಲ್ಲಿ ನಡೆದಿದೆ. ಪ್ರಕರಣದ ಸ್ವತಃ ತಪ್ಪೊಪ್ಪಿಕೊಂಡಿರುವ ಆರೋಪಿ ಸನಲ್​, ಸಾವು ಖಚಿತಪಡಿಸಿಕೊಳ್ಳಲು ಇಬ್ಬರಿಗೂ ಅನೇಕ ಬಾರಿ ಇರಿದು ಕೊಲೆ ಮಾಡಿರುವುದಾಗಿ ಹೇಳಿದ್ದಾನೆ.

    ಪಾಲಕರನ್ನು ಕೊಲೆ ಮಾಡಿದ ಬಳಿಕ ಆರೋಪಿ ಸನಲ್​, ರಕ್ತಸಿಕ್ತ ಚಾಕು ಮತ್ತು ಬಟ್ಟೆಯನ್ನು ಮನೆಯಲ್ಲಿ ಬಚ್ಚಿಟ್ಟಿದ್ದಾನೆ. ನಂತರ ಸ್ನಾನ ಮುಗಿಸಿ, ಆರಾಮಾಗಿ ಶವಗಳ ಮುಂದೆಯೇ ಕುಳಿತು ಸೇಬು ಸೇವಿಸಿದ್ದಾನೆ. ಇದಾದ ಬಳಿಕ ಆರೋಪಿ ಬೆಂಗಳೂರಿಗೆ ಪರಾರಿಯಾಗಿದ್ದ.

    ಪಾಲಕರನ್ನು ಕೊಲೆ ಮಾಡಿದ ಪಶ್ಚಾತಾಪವಾಗಲಿ ಅಥವಾ ನೋವಾಗಲಿ ಆತನ ಮುಖದಲ್ಲಿ ಇರಲಿಲ್ಲ. ಬುಧವಾರ ಪಲಕ್ಕಾಡಿನ ರೈಲ್ವೆ ಕಾಲನಿ ಬಳಿಯಿರುವ ಒಟ್ಟರ್ಕಾಡುವಿನ ನಿವಾಸದಲ್ಲಿ ಪೊಲೀಸರು ಆರೋಪಿ ಸಮ್ಮುಖದಲ್ಲಿ ಸಾಕ್ಷ್ಯಾಧಾರ ಸಂಗ್ರಹಿಸುವಾಗ ಆರೋಪಿ ನಡೆದ ಘಟನೆಯನ್ನು ವಿವರಿಸಿದ್ದಾನೆ.

    ಕಳೆದ ಕೆಲವು ದಿನಗಳಿಂದ ಸನಲ್​, ತಾಯಿಯ ಜತೆ ಚೆನ್ನಾಗಿರಲಿಲ್ಲವಂತೆ. ಇಬ್ಬರ ನಡುವೆ ಆಗಾಗ ಜಗಳ ಆಗುತ್ತಿತ್ತು. ಕೊಲೆ ಮಾಡುವ ಮುನ್ನ ತನ್ನ ತಾಯಿ ಸೋಫಾ ಮೇಲೆ ಕುಳಿತು ಒಂದು ಲೋಟ ನೀರು ಕೊಡುವಂತೆ ಮಗನನ್ನು ಕೇಳಿದ್ದಾಳೆ. ಆದರೆ, ಅದಕ್ಕೆ ಸನಲ್​ ಸ್ಪಂದಿಸಿಲ್ಲ. ಬಳಿಕ ಪದೇಪದೆ ನೀರಿಗಾಗಿ ಒತ್ತಾಯ ಮಾಡಿದಾಗ ಕುಪಿತಗೊಂಡ ಸನಲ್​ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ತಾಯಿಗೆ ಮನಬಂದಂತೆ ಇರಿದಿದ್ದಾನೆ. ಅನೇಕ ಬಾರಿ ಚಾಕುವಿನಿಂದ ಇರಿದಿದ್ದಲ್ಲದೆ, ಕ್ರಿಮಿನಾಶಕವನ್ನು ಇಂಜೆಕ್ಟ್​ ಮಾಡಲು ಯತ್ನಿಸಿದ್ದಾನೆ. ಆದರೆ, ಅದು ಆಗದಿದ್ದಾಗ ಕ್ರಿಮಿನಾಶಕವನ್ನು ಆಕೆಯ ಮುಖದ ಮೇಲೆ ಸುರಿದಿದ್ದಾನೆ.

    ಇತ್ತ ಮಗನ ಕೃತ್ಯವನ್ನು ನೋಡಿದ ಪಾರ್ಶ್ವವಾಯು ಪೀಡಿತ ತಂದೆ ಚಂದ್ರನ್​ ಕಣ್ಣೀರು ಹಾಕುತ್ತಿರುವಾಗ ಸನಲ್​, ಆತನ ಬಳಿ ಓಡಿಬಂದು ಚಾಕುವಿನಿಂದ ಅನೇಕ ಬಾರಿ ಇರಿದು ಕೊಲೆ ಮಾಡಿದ್ದಾನೆ. ಇಬ್ಬರು ಮೃತಪಟ್ಟಿದ್ದಾರೆಂದು ಖಚಿತವಾದ ಬಳಿಕ ತಂದೆಯ ಬೆಡ್​ರೂಮ್​ನಲ್ಲಿ ಸ್ನಾನ ಮಾಡಿಕೊಂಡು ಬಂದು ಶವಗಳ ಮುಂದೆಯೇ ಕುಳಿತು ಸೇಬು ಹಣ್ಣನ್ನು ಸೇವಿಸಿದ್ದಾನೆ. ಅದಕ್ಕೂ ಮುನ್ನ ರಕ್ತದ ಕಲೆಯಿದ್ದ ಚಾಕು ಮತ್ತು ಬಟ್ಟೆಯನ್ನು ಮನೆಯಲ್ಲೇ ಬಚ್ಚಿಟ್ಟಿದ್ದಾನೆ.

    ಇಬ್ಬರನ್ನು ಭಾನುವಾರ ಸುಮಾರು 9ಗಂಟೆಗೆ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಸೋಮವಾರ ಬೆಳಗ್ಗೆ ಇದು ಬೆಳಕಿಗೆ ಬಂದಿದೆ. ಮಂಗಳವಾರ ಆತನನ್ನು ಸಹೋದರನ ನೆರವಿನಿಂದ ಬಂಧಿಸಲಾಗಿದೆ. ಪೊಲೀಸರು ಎಲ್ಲ ಸಾಕ್ಷ್ಯಾಧಾರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಆರೋಪಿಯನ್ನು ಪಲಕ್ಕಾಡ್ ಮೂರನೇ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. (ಏಜೆನ್ಸೀಸ್​)

    ಮೊದಲ ಮಗು ಕಳೆದುಕೊಂಡು ತುಂಬಾ ನೊಂದಿದ್ದ ಅಮೃತಾ ಪಾಲಿಗೆ 2ನೇ ಮಗುವೂ ಉಳಿಯಲಿಲ್ಲ… ಮನಕಲಕುತ್ತೆ ಈ ಸ್ಟೋರಿ

    ದಿಢೀರ್​ ಎದುರಾಗಿ ಬೈಕ್​ಗೆ ಡಿಕ್ಕಿ ಹೊಡೆದ ಕಾಡು ಹಂದಿ: ಯುವಕನ ದುರ್ಮರಣ

    ಕಣ್ಣೀರಿನ ಶಾಪ ತಟ್ಟದೇ ಬಿಡುತ್ತಾ? ಹೆತ್ತ ತಾಯಿ ಮೇಲೆ ಹಲ್ಲೆ ಮಾಡಿದ ಯೋಧನಿಗೆ ಎದುರಾಯ್ತು ಕಂಟಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts