ಕಣ್ಣೀರಿನ ಶಾಪ ತಟ್ಟದೇ ಬಿಡುತ್ತಾ? ಹೆತ್ತ ತಾಯಿ ಮೇಲೆ ಹಲ್ಲೆ ಮಾಡಿದ ಯೋಧನಿಗೆ ಎದುರಾಯ್ತು ಕಂಟಕ

ಹರಿಪಾದ: ಯೋಧನೊಬ್ಬ ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ ಪ್ರಕರಣವನ್ನು ಇಂಟಿಲಿಜೆನ್ಸ್​ ಬ್ಯೂರೋ (ಐಬಿ) ತನಿಖೆ ನಡೆಸಲಿದೆ. ಸದ್ಯ ಯೋಧನನ್ನು ಕೇರಳ ಪೊಲೀಸರು ಬಂಧಿಸಿದ್ದು, ಹರಿಪಾದದ ಜುಡಿಶಿಯಲ್​ ಮ್ಯಾಜಿಸ್ಟ್ರೇಟ್​ ವಶಕ್ಕೆ ನೀಡಲಾಗಿದೆ. ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಬಂಧಿತ ಯೋಧನನ್ನು ಅಲಕೊಟ್ಟಿಲ್​ ಸುಬೋಧ್​ (37) ಎಂದು ಗುರುತಿಸಲಾಗಿದೆ. ಕರೀಲಾಕುಲಂಗರ ಪೊಲೀಸ್​ ಠಾಣೆಯಿಂದ ಐಬಿ ಅಧಿಕಾರಿಗಳು ಮಾಹಿತಿ ಪಡೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಎಫ್​ಐಆರ್​ ಅನ್ನು ಶೀಘ್ರದಲ್ಲೇ ಆರ್ಮಿಗೆ ಹಸ್ತಾಂತರ ಮಾಡಲಾವುದು ಎಂದು … Continue reading ಕಣ್ಣೀರಿನ ಶಾಪ ತಟ್ಟದೇ ಬಿಡುತ್ತಾ? ಹೆತ್ತ ತಾಯಿ ಮೇಲೆ ಹಲ್ಲೆ ಮಾಡಿದ ಯೋಧನಿಗೆ ಎದುರಾಯ್ತು ಕಂಟಕ