ಬೆಂಗಳೂರು: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಿರಂತರ ಶ್ರಮಿಸುತ್ತಿದ್ದು, ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಭಾಗದಲ್ಲಿ 2100 ಹೊಸ ಶಾಲಾ ಕೊಠಡಿ ನಿರ್ಮಿಸಲು ಚಿಂತನೆ ನಡೆಸುತ್ತಿದೆ.
ವಿದ್ಯಾ ಕಲ್ಯಾಣ ಯೋಜನೆಯಡಿಯಲ್ಲಿ ರಾಜ್ಯದ ಇತಿಹಾಸದಲ್ಲೇ ಏಕಕಾಲಕ್ಕೆ ಅತಿಹೆಚ್ಚು ಶಾಲಾ ಕೊಠಡಿ ನಿರ್ಮಾಣ ಮಾಡುತ್ತಿದೆ.
ಕಲ್ಯಾಣ ಕರ್ನಾಟಕದಾದ್ಯಂತ 2100 ಹೊಸ ಶಾಲಾ ಕೊಠಡಿಗಳು, 2500 ಹೊಸ ಅಂಗನವಾಡಿಗಳನ್ನು ನಿರ್ಮಾಣ ಮಾಡುವ ಮೂಲಕ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲೆಂಬ ಅಶಯದಿಂದ ಈ ದಿಟ್ಟ ಹೆಜ್ಜೆ ಇಟ್ಟಿದೆ.
ಇದನ್ನು ಕೂ ಮಾಡಿರುವ ಬಿಜೆಪಿ, ಸಮುದಾಯ ಬೆಳೆದಾಗಲಷ್ಟೇ ಪ್ರದೇಶದ ಅಭಿವೃದ್ಧಿ ಸಾಧ್ಯ. ಅದಕ್ಕಾಗಿ ಅಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ಲಭ್ಯವಾಗಿಸುವುದು ನಮ್ಮ ಆದ್ಯತೆ. #ಕಲ್ಯಾಣಕರ್ನಾಟಕ ದ ಅಭಿವೃದ್ಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ನಿರಂತರ ಶ್ರಮಿಸುತ್ತಿದೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಭಾಗದಲ್ಲಿ 2100 ಹೊಸ ಶಾಲಾ ಕೊಠಡಿ ನಿರ್ಮಿಸಲಾಗುತ್ತಿದೆ ಎಂದು ಹೇಳಿದೆ.
ಭೂಕಂಪನಕ್ಕೆ ಅಲುಗಾಡಿದ ಕಟ್ಟಡ, ಸ್ವಿಮ್ಮಿಂಗ್ ಪೂಲ್ನಲ್ಲಿ ಮಿನಿ ಸುನಾಮಿ! ಇಲ್ಲಿದೆ ಭಯಾನಕ ವಿಡಿಯೋ
ರ್ಯಾಗಿಂಗ್ನಿಂದ ರೋಸಿ ಹೋದ ವಿದ್ಯಾರ್ಥಿ: ಪ್ರಾಧ್ಯಾಪಕರ ಎದುರೇ ಇಬ್ಬರ ಮೇಲೆ ಹಲ್ಲೆ, ರಾಯಚೂರಿನಲ್ಲಿ ಘಟನೆ
ನಾಸ್ತಿಕರೂ ಆಸ್ತಿಕರಾಗುವ ಕಾಂತಾರ; ಕಂಬಳ ಕಥೆಯ ಭಾಗವಷ್ಟೇ, ಕಂಬಳವೇ ಚಿತ್ರವಲ್ಲ: ರಿಷಬ್