ಕಲಬುರಗಿ: ಪಾರ್ಕಿನಲ್ಲಿ ಆಟ ಆಡುವಾಗ ವಿದ್ಯುತ್ ತಂತಿ ತಗುಲಿ ಬಾಲಕ ಸಾವಿಗೀಡಾಗಿರುವ ಘಟನೆ ಕಲಬುರಗಿಯ ಎನ್ಜಿಓ ಕಾಲೋನಿಯ ಹನುಮಾನ್ ಮಂದಿರ ಗಾರ್ಡನ್ನಲ್ಲಿ ಬುಧವಾರ (ಸೆ.29) ನಡೆದಿದೆ.
ಸಿದ್ದು (6) ವಿದ್ಯುತ್ ತಂತಿ ತಗುಲಿ ಮೃತಪಟ್ಟ ಬಾಲಕ. ಎನ್ಜಿಓ ಕಾಲೋನಿಯ ಮಹಾದೇವಿ-ಸುರೇಶ್ ದಂಪತಿ ಪುತ್ರ. ಪಾರ್ಕ್ನಲ್ಲಿ ಹೈಮಾಸ್ಕ್ ದೀಪದ ವಿದ್ಯುತ್ ವೈರ್ ತುಂಡಾಗಿ ಬಿದ್ದಿತ್ತು. ಆಟವಾಡುತ್ತಾ ಹೋಗಿ ವಿದ್ಯುತ್ ವೈರ್ ತುಳಿದ ಬಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಸಾವಿಗೆ ಜೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪ ಮಾಡಿದೆ. ಘಟನೆ ಸಂಬಂಧ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್)
ಸರ್ಕಾರಿ ಹಣ ಪತಿಯ ಟ್ರಸ್ಟ್ಗೆ: ಮಾಜಿ ಸಚಿವೆಗೆ ಐದು ವರ್ಷ ಜೈಲು- ತೀರ್ಪು ಪ್ರಕಟಿಸುತ್ತಿದ್ದಂತೆಯೇ ಅನಾರೋಗ್ಯ!
ವಿಕೃತಕಾಮಿ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂ: 22 ವರ್ಷ ಹಿಂದಿನ ಕೇಸ್ ಹಿಸ್ಟರಿ ಇಲ್ಲಿದೆ