More

    ಐಪಿಎಲ್​ 2021: ವಿರಾಟ್​ ಕೊಹ್ಲಿ-ಎಂ.ಎಸ್​. ಧೋನಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಶಾರುಖ್​ ಖಾನ್..!​

    ನವದೆಹಲಿ: ಮೊನ್ನೆ (ಅ.1) ನಡೆದ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ಇಲೆವೆನ್​ ತಂಡದ​ ಬ್ಯಾಟ್ಸ್​ಮನ್​​ ಶಾರುಖ್​ ಖಾನ್,​ ಎದುರಾಳಿ ಕೋಲ್ಕತ ನೈಟ್​ ರೈಡರ್ಸ್​ ತಂಡದ ವಿರುದ್ಧ ಕೇವಲ 9 ಎಸೆತಗಳಲ್ಲಿ 22 ರನ್​ ಗಳಿಸುವ ಮೂಲಕ ಐಪಿಎಲ್​ನ ಮಹತ್ವದ ಘಟ್ಟದಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.

    ವಿಶೇಷವೆಂದರೆ ಪಂಜಾಬ್​ ಮತ್ತು ಕೋಲ್ಕತ ನಡುವಿನ ಪಂದ್ಯದ ವೇಳೆ ಶಾರುಖ್​ ಖಾನ್​ ಹೆಸರು ವಿಶೇಷ ಗಮನವನ್ನು ಸೆಳೆಯಿತು. ಅದಕ್ಕೆ ಕಾರಣವೆಂದರೆ, ಕೋಲ್ಕತ ತಂಡದ ಸಹ ಮಾಲೀಕ ಬಾಲಿವುಡ್​ ನಟ ಶಾರುಖ್ ಖಾನ್​. ಪಂಜಾಬ್​ ತಂಡದಲ್ಲೂ ಶಾರುಕ್​ ಖಾನ್​ ಇದ್ದು, ಮೊನ್ನೆ ನಡೆದ ಪಂದ್ಯದಲ್ಲಿ ಶಾರುಖ್​ ಖಾನ್​ ತಂಡದ ಸೋಲಿಗೆ ಕಾರಣವಾಗಿದ್ದೇ ಶಾರುಖ್​ ಖಾನ್​. ಇದರಿಂದ ಪಂಜಾಬ್​ ತಂಡದ ಮಾಲಕಿ ಪ್ರೀತಿ ಝಿಂಟಾಗೆ ಬಹಳ ಖುಷಿಯಾಗಿದೆ. ​

    ಕೋಲ್ಕತ ತಂಡವನ್ನು ಪಂಜಾಬ್​ 5 ವಿಕೆಟ್​ಗಳಿಂದ ಮಣಿಸಿದೆ. ಪಂಜಾಬ್​ ತಂಡದ ನಾಯಕ ಕನ್ನಡಿಗ ಕೆ.ಎಲ್​. ರಾಹುಲ್ ಉತ್ತಮ ಆಟವನ್ನು ಪ್ರದರ್ಶನ ಮಾಡಿದರೂ ಸಹ​ ಅಂದಿನ ಪಂದ್ಯದಲ್ಲಿ ಎಲ್ಲರ ಮನಸ್ಸನ್ನು ಸೆಳೆದಿದ್ದು ಮಾತ್ರ ಶಾರುಖ್​. ತಮ್ಮ ಸ್ಫೋಟಕ ಆಟದಿಂದ ಶಾರುಖ್​​, ಪಂಜಾಬ್​ಗೆ ಮಹತ್ವದ ಹಂತದಲ್ಲಿ ಗೆಲವು ದೊರಕಿಸಿ ಕೊಟ್ಟಿದ್ದಾರೆ. ಅದರಲ್ಲೂ ಶಾರುಖ್​ಗೆ ಈ ಆವೃತ್ತಿಯ ಮೊದಲನೇ ಪಂದ್ಯ. ಆರಂಭದಲ್ಲೇ ಅಬ್ಬರಿಸುವ ಮೂಲಕ ಪಂಜಾಬ್​ ಶಕ್ತಿ ತುಂಬಿದ್ದಾರೆ. ಅಲ್ಲದೆ, ಸ್ಫೋಟಕ ಬ್ಯಾಟಿಂಗ್​ ಮೂಲಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ನಾಯಕ ವಿರಾಟ್​ ಕೊಹ್ಲಿ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ನಾಯಕ ಮಹೇಂದ್ರ ಸಿಂಗ್​ ಧೋನಿಗೆ ಶಾರುಖ್​ ಎಚ್ಚರಿಕೆ ನೀಡಿದ್ದಾರೆ.

    ಅಂದಹಾಗೆ ಪಂಜಾಬ್​ ಮುಂದಿನ ಎರಡು ಪಂದ್ಯಗಳಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ತಂಡವನ್ನು ಎದುರಿಸಲಿದೆ. ಇಂದು ಆರ್​ಸಿಬಿ ವಿರುದ್ಧ ಪಂಜಾಬ್​ ಕಣಕ್ಕಿಳಿಯಲಿದ್ದು, ಐಪಿಎಲ್​ ಪ್ಲೇ ಆಫ್ ಹಂತವೇರಲು ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಇದಾದ ಬಳಿಕ ಅ. 7ರಂದು ಚೆನ್ನೈ ವಿರುದ್ಧ ಪಂಜಾಬ್​​ಗೆ ಮತ್ತೊಂದು ಪಂದ್ಯವಿದೆ. ಶಾರುಕ್​ ಬಲಿಷ್ಠ ಬ್ಯಾಟಿಂಗ್​ ಪಂಜಾಬ್​ಗೆ ಇದೀಗ ವರವಾಗಿದೆ.

    ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ಶಾರುಖ್ ಬ್ಯಾಟ್​ ಹಿಡಿದು ಮೈದಾನಕ್ಕೆ ಇಳಿದಾಗ ಪಂಜಾಬ್​ ಗೆಲುವಿಗೆ 21 ಬಾಲ್​ಗೆ 32 ರನ್​ ಅವಶ್ಯಕತೆ ಇತ್ತು. ಈ ವೇಳೆ ಎದೆಗುಂದದೆ 244.44 ರನ್​ ಸರಾಸರಿಯಲ್ಲಿ ರನ್​ ಮಳೆಗೈದ ಶಾರುಖ್​ ಕೇವಲ 9 ಎಸೆತಗಳಲ್ಲಿ 2 ಸಿಕ್ಸರ್​ ಮತ್ತು ಒಂದು ಬೌಂಡರಿ ಒಳಗೊಂಡ ಅಜೇಯ 22 ರನ್ ಗಳಿಸಿದರು. ಈ ಮೂಲಕ ಪಂಜಾಬ್​ ಗೆಲುವಿಗೆ ಕಾರಣರಾದರು. ​​

    ಶಾರುಖ್​ ಬ್ಯಾಟಿಂಗ್​ ಪ್ರದರ್ಶನ ಇದೀಗ ಎದುರಾಳಿ ತಂಡದ ನಿದ್ದೆಗೆಡಿಸಿದೆ. ಶಾರುಕ್​ನ ಪ್ರತಿ ಹೊಡೆತ ಕರಾರುವೊಕ್ಕಾಗಿತ್ತು. ಅಲ್ಲಿಯೂ ಕೂಡ ಆತನೊಬ್ಬ ಹೊಸ ಬ್ಯಾಟ್ಸ್​ಮನ್​ ಎಂಬಂತೆ ಕಾಣುತ್ತಿರಲಿಲ್ಲ. ಅನುಭವಿ ಆಟಗಾರನಂತೆ ಬ್ಯಾಟ್​ ಬೀಸಿದ್ದು, ಆರ್​ಸಿಬಿ ಮತ್ತು ಸಿಎಸ್​ಕೆ ಪಾಲಿಗೆ ಶಾರುಖ್​ ಸವಾಲಾದರೂ ಅಚ್ಚರಿಪಡಬೇಕಿಲ್ಲ. (ಏಜೆನ್ಸೀಸ್​)

    ಡಿವೋರ್ಸ್​ ಬೆನ್ನಲ್ಲೇ ಟ್ವೀಟ್​ ಮೂಲಕ ಖಡಕ್​ ಎಚ್ಚರಿಕೆ ಸಂದೇಶ ರವಾನಿಸಿದ ನಟಿ ಸಮಂತಾ..!

    ನಾಗಸಮಂತಾ ಬೇರೆಯಾಗಲು ವಿಚ್ಛೇದನ ತಜ್ಞ ಬಾಲಿವುಡ್​ ಸೂಪರ್​ಸ್ಟಾರ್​ ಕಾರಣ ಅಂದ್ರು ಕಂಗನಾ..!​

    ಮದ್ವೆ ಎಂಬುದು ಸಾವು, ಡಿವೋರ್ಸ್​​ ಪುನರ್ಜನ್ಮ: ನಾಗಸಮಂತಾ ವಿಚ್ಛೇದನ ಬೆನ್ನಲ್ಲೇ ಆರ್​ಜಿವಿ ಟ್ವೀಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts