ನವದೆಹಲಿ: ಮೊನ್ನೆ (ಅ.1) ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಇಲೆವೆನ್ ತಂಡದ ಬ್ಯಾಟ್ಸ್ಮನ್ ಶಾರುಖ್ ಖಾನ್, ಎದುರಾಳಿ ಕೋಲ್ಕತ ನೈಟ್ ರೈಡರ್ಸ್ ತಂಡದ ವಿರುದ್ಧ ಕೇವಲ 9 ಎಸೆತಗಳಲ್ಲಿ 22 ರನ್ ಗಳಿಸುವ ಮೂಲಕ ಐಪಿಎಲ್ನ ಮಹತ್ವದ ಘಟ್ಟದಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ.
ವಿಶೇಷವೆಂದರೆ ಪಂಜಾಬ್ ಮತ್ತು ಕೋಲ್ಕತ ನಡುವಿನ ಪಂದ್ಯದ ವೇಳೆ ಶಾರುಖ್ ಖಾನ್ ಹೆಸರು ವಿಶೇಷ ಗಮನವನ್ನು ಸೆಳೆಯಿತು. ಅದಕ್ಕೆ ಕಾರಣವೆಂದರೆ, ಕೋಲ್ಕತ ತಂಡದ ಸಹ ಮಾಲೀಕ ಬಾಲಿವುಡ್ ನಟ ಶಾರುಖ್ ಖಾನ್. ಪಂಜಾಬ್ ತಂಡದಲ್ಲೂ ಶಾರುಕ್ ಖಾನ್ ಇದ್ದು, ಮೊನ್ನೆ ನಡೆದ ಪಂದ್ಯದಲ್ಲಿ ಶಾರುಖ್ ಖಾನ್ ತಂಡದ ಸೋಲಿಗೆ ಕಾರಣವಾಗಿದ್ದೇ ಶಾರುಖ್ ಖಾನ್. ಇದರಿಂದ ಪಂಜಾಬ್ ತಂಡದ ಮಾಲಕಿ ಪ್ರೀತಿ ಝಿಂಟಾಗೆ ಬಹಳ ಖುಷಿಯಾಗಿದೆ.
ಕೋಲ್ಕತ ತಂಡವನ್ನು ಪಂಜಾಬ್ 5 ವಿಕೆಟ್ಗಳಿಂದ ಮಣಿಸಿದೆ. ಪಂಜಾಬ್ ತಂಡದ ನಾಯಕ ಕನ್ನಡಿಗ ಕೆ.ಎಲ್. ರಾಹುಲ್ ಉತ್ತಮ ಆಟವನ್ನು ಪ್ರದರ್ಶನ ಮಾಡಿದರೂ ಸಹ ಅಂದಿನ ಪಂದ್ಯದಲ್ಲಿ ಎಲ್ಲರ ಮನಸ್ಸನ್ನು ಸೆಳೆದಿದ್ದು ಮಾತ್ರ ಶಾರುಖ್. ತಮ್ಮ ಸ್ಫೋಟಕ ಆಟದಿಂದ ಶಾರುಖ್, ಪಂಜಾಬ್ಗೆ ಮಹತ್ವದ ಹಂತದಲ್ಲಿ ಗೆಲವು ದೊರಕಿಸಿ ಕೊಟ್ಟಿದ್ದಾರೆ. ಅದರಲ್ಲೂ ಶಾರುಖ್ಗೆ ಈ ಆವೃತ್ತಿಯ ಮೊದಲನೇ ಪಂದ್ಯ. ಆರಂಭದಲ್ಲೇ ಅಬ್ಬರಿಸುವ ಮೂಲಕ ಪಂಜಾಬ್ ಶಕ್ತಿ ತುಂಬಿದ್ದಾರೆ. ಅಲ್ಲದೆ, ಸ್ಫೋಟಕ ಬ್ಯಾಟಿಂಗ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಶಾರುಖ್ ಎಚ್ಚರಿಕೆ ನೀಡಿದ್ದಾರೆ.
ಅಂದಹಾಗೆ ಪಂಜಾಬ್ ಮುಂದಿನ ಎರಡು ಪಂದ್ಯಗಳಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ತಂಡವನ್ನು ಎದುರಿಸಲಿದೆ. ಇಂದು ಆರ್ಸಿಬಿ ವಿರುದ್ಧ ಪಂಜಾಬ್ ಕಣಕ್ಕಿಳಿಯಲಿದ್ದು, ಐಪಿಎಲ್ ಪ್ಲೇ ಆಫ್ ಹಂತವೇರಲು ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. ಇದಾದ ಬಳಿಕ ಅ. 7ರಂದು ಚೆನ್ನೈ ವಿರುದ್ಧ ಪಂಜಾಬ್ಗೆ ಮತ್ತೊಂದು ಪಂದ್ಯವಿದೆ. ಶಾರುಕ್ ಬಲಿಷ್ಠ ಬ್ಯಾಟಿಂಗ್ ಪಂಜಾಬ್ಗೆ ಇದೀಗ ವರವಾಗಿದೆ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಶಾರುಖ್ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದಾಗ ಪಂಜಾಬ್ ಗೆಲುವಿಗೆ 21 ಬಾಲ್ಗೆ 32 ರನ್ ಅವಶ್ಯಕತೆ ಇತ್ತು. ಈ ವೇಳೆ ಎದೆಗುಂದದೆ 244.44 ರನ್ ಸರಾಸರಿಯಲ್ಲಿ ರನ್ ಮಳೆಗೈದ ಶಾರುಖ್ ಕೇವಲ 9 ಎಸೆತಗಳಲ್ಲಿ 2 ಸಿಕ್ಸರ್ ಮತ್ತು ಒಂದು ಬೌಂಡರಿ ಒಳಗೊಂಡ ಅಜೇಯ 22 ರನ್ ಗಳಿಸಿದರು. ಈ ಮೂಲಕ ಪಂಜಾಬ್ ಗೆಲುವಿಗೆ ಕಾರಣರಾದರು.
ಶಾರುಖ್ ಬ್ಯಾಟಿಂಗ್ ಪ್ರದರ್ಶನ ಇದೀಗ ಎದುರಾಳಿ ತಂಡದ ನಿದ್ದೆಗೆಡಿಸಿದೆ. ಶಾರುಕ್ನ ಪ್ರತಿ ಹೊಡೆತ ಕರಾರುವೊಕ್ಕಾಗಿತ್ತು. ಅಲ್ಲಿಯೂ ಕೂಡ ಆತನೊಬ್ಬ ಹೊಸ ಬ್ಯಾಟ್ಸ್ಮನ್ ಎಂಬಂತೆ ಕಾಣುತ್ತಿರಲಿಲ್ಲ. ಅನುಭವಿ ಆಟಗಾರನಂತೆ ಬ್ಯಾಟ್ ಬೀಸಿದ್ದು, ಆರ್ಸಿಬಿ ಮತ್ತು ಸಿಎಸ್ಕೆ ಪಾಲಿಗೆ ಶಾರುಖ್ ಸವಾಲಾದರೂ ಅಚ್ಚರಿಪಡಬೇಕಿಲ್ಲ. (ಏಜೆನ್ಸೀಸ್)
ಡಿವೋರ್ಸ್ ಬೆನ್ನಲ್ಲೇ ಟ್ವೀಟ್ ಮೂಲಕ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ನಟಿ ಸಮಂತಾ..!
ನಾಗಸಮಂತಾ ಬೇರೆಯಾಗಲು ವಿಚ್ಛೇದನ ತಜ್ಞ ಬಾಲಿವುಡ್ ಸೂಪರ್ಸ್ಟಾರ್ ಕಾರಣ ಅಂದ್ರು ಕಂಗನಾ..!
ಮದ್ವೆ ಎಂಬುದು ಸಾವು, ಡಿವೋರ್ಸ್ ಪುನರ್ಜನ್ಮ: ನಾಗಸಮಂತಾ ವಿಚ್ಛೇದನ ಬೆನ್ನಲ್ಲೇ ಆರ್ಜಿವಿ ಟ್ವೀಟ್