ಕೊಲಂಬೋ: ಶ್ರೀಲಂಕಾದಲ್ಲಿ ಹಣ ಹಂಚುತ್ತಿದ್ದ ಭಾರತೀಯ ಉದ್ಯಮಿಯನ್ನು ಅಲ್ಲಿನ ಪೊಲೀಸರು ವಶಕ್ಕೆ ಪಡೆದಿರುವ ಪ್ರಸಂಗ ಬೆಳಕಿಗೆ ಬಂದಿದೆ. ಉದ್ಯಮಿಯನ್ನು ರವೀಂದರ್ ರೆಡ್ಡಿ ಎಂದು ಗುರುತಿಸಲಾಗಿದೆ.
ಈ ಕುರಿತು ಮಾತನಾಡಿರುವ ರವೀಂದರ್ ರೆಡ್ಡಿ, ಪ್ರತಿ ತಿಂಗಳು ನಾನು ಶ್ರೀಲಂಕಾಗೆ ಹೋಗುತ್ತೇನೆ. ಕಳೆದ ನಾಲ್ಕೈದು ತಿಂಗಳಿಂದ ನಿತ್ಯವು ಲಂಕಾಗೆ ಭೇಟಿ ನೀಡುತ್ತಿದ್ದೇನೆ. 21 ದಿನಗಳ ಅಲ್ಲಿ ಉಳಿದುಕೊಂಡಿದ್ದೆ. ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಲಂಕಾ ಜನರು ಅಲ್ಲಿನ ಅಧ್ಯಕ್ಷರ ವಿರುದ್ಧ ನಡೆಸಿದ ಬೃಹತ್ ಪ್ರತಿಭಟನೆ ಸಮಯದಲ್ಲೂ ನಾನು ಭಾಗವಹಿಸಿದ್ದೆ. ಈ ವೇಳೆ ಎರಡ್ಮೂರು ದಿನ ಉಳಿದುಕೊಂಡಿದ್ದೆ ಮತ್ತು ಅಲ್ಲಿನ ಜನರಿಗೆ ಆಹಾರ ಮತ್ತು ಹಣವನ್ನು ಹಂಚಿದ್ದೆ ಎಂದು ಹೇಳಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿದ್ದ ಜನರಿಗಾಗಿ ಸಾಕಷ್ಟು ಆಹಾರ ಮತ್ತು ಹಣವನ್ನು ಹಂಚಿದ್ದೇನೆ. ಸುಮಾರು 5 ಲಕ್ಷ ರೂಪಾಯಿವರೆಗೂ ಹಣ ಹಂಚಿದ್ದೇನೆ. ಈ ವೇಳೆ ಲಂಕಾ ಪೊಲೀಸರು ನನ್ನನ್ನು ವಶಕ್ಕೆ ಪಡೆದರು. ಈ ವೇಳೆ ಲಂಕಾದ ಸಿಐಡಿ ಅಧಿಕಾರಿಗಳು ರೆಕಾರ್ಡ್ ಮಾಡಿದ್ದ ವಿಡಿಯೋ ಕ್ಲಿಪ್ಗಳನ್ನು ನನ್ನ ಮಗನಿಗೆ ಶೇರ್ ಮಾಡಿದ್ದಾರೆ ಎಂದು ರವೀಂದರ್ ಹೇಳಿದ್ದಾರೆ.
ಶ್ರೀಲಂಕಾ ಪೊಲೀಸ್ ಇಲಾಖೆಯ ಮಾಧ್ಯಮ ವಕ್ತಾರರಾದ ತಲ್ದುವಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ರವೀಂದರ್ ರೆಡ್ಡಿ ಅವರನ್ನು ಬಂಧಿಸಲಾಗಿಲ್ಲ, ಅವರ ಹೇಳಿಕೆಯನ್ನು ಮಾತ್ರ ದಾಖಲಿಸಲಾಗಿದೆ ಮತ್ತು ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)
ಬಾತ್ರೂಮ್ ಕಿಟಕಿಯಲ್ಲಿ ವ್ಯಕ್ತಿಯ ನೆರಳು ಕಂಡು ಮಹಿಳೆ ಶಾಕ್: ರಾಜಕೀಯ ನಾಯಕನ ಮುಖವಾಡ ಬಯಲು
ಇಡಿಯಿಂದ ರಾಹುಲ್ ಗಾಂಧಿ ಬಂಧನವಾಗುತ್ತಾ? ಛತ್ತೀಸ್ಗಢ ಮುಖ್ಯಮಂತ್ರಿ ಕೊಟ್ಟ ಸ್ಫೋಟಕ ಉತ್ತರ ಹೀಗಿದೆ…
ನದಿ ಜೋಡಣೆಯಿಂದ ಮಾನ್ಸೂನ್ಗೆ ಧಕ್ಕೆ; ಜೀವವೈವಿಧ್ಯದ ಮೇಲೆ ಪ್ರತಿಕೂಲ ಪರಿಣಾಮ