More

    ಅರವಿಂದ್​ ಜತೆ ಸಂಬಂಧ ಮುರಿದಿಕೋ ಎಂದ ಪ್ರಶಾಂತ್​ಗೆ ದಿವ್ಯಾ ಉರುಡುಗ ಕೊಟ್ಟ ಉತ್ತರವಿದು..!

    ಬೆಂಗಳೂರು: ಬಿಗ್​​ಬಾಸ್​ ಸೀಸನ್​ 8ರ ಗ್ರ್ಯಾಂಡ್​ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದೆ. ಈ ಬಾರಿಯ ಟ್ರೋಫಿ ಮತ್ತು ನಗದು ಬಹುಮಾನ ಯಾರ ಪಾಲಾಗಲಿದೆ ಎಂಬುದು ಆಗಸ್ಟ್​ 8ರಂದು ಹೊರಬೀಳಲಿದೆ. ಅರವಿಂದ್​ ಕೆ.ಪಿ. ಮಂಜು ಪಾವಗಡ, ವೈಷ್ಣವಿ, ದಿವ್ಯಾ ಉರುಡುಗ ಮತ್ತು ಪ್ರಶಾಂತ್​ ಸಂಬರಗಿ ಫೈನಲ್​ ಪ್ರವೇಶಿಸಿದ್ದು, ಐವರಲ್ಲಿ ವಿನ್ನರ್​ ಯಾರೆಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

    ಫೈನಲ್​ ಪ್ರವೇಶ ಪಡೆದಿರುವುದರಿಂದ ಎಲ್ಲ ಸ್ಪರ್ಧಿಗಳಿಗೂ ಕೊಂಚ ಸಂತಸ ತಂದಿದೆ. ಸದ್ಯ ಯಾವುದೇ ಟಾಸ್ಕ್​ಗಳಿಲ್ಲದೆ ಸ್ಪರ್ಧಿಗಳು ಫೈನಲ್​ ಎಪಿಸೋಡ್​ಗೆ ಎದುರು ನೋಡುತ್ತಿದ್ದಾರೆ. ಇದರ ನಡುವೆ ದಿವ್ಯಾ ಉರುಡುಗ ಮತ್ತು ಪ್ರಶಾಂತ್​ ಸಂಬರಗಿ ನಡುವಿನ ಮಾತುಕತೆ ಬಹಳಷ್ಟು ಕುತೂಹಲ ಕೆರಳಿಸಿದೆ. ಬಹುಶಃ ಅರವಿಂದ್​ ಮತ್ತು ದಿವ್ಯಾ ಉರುಡುಗ ನಡುವಿನ ಸಂಬಂಧ ಪ್ರಶಾಂತ್​ ಸಂಬರಗಿಗೆ ಇಷ್ಟವಿಲ್ಲ ಎಂದು ಗೋಚರಿಸುತ್ತದೆ.

    ಅಷ್ಟಕ್ಕೂ ಯಾಕೆ ಇಷ್ಟವಿಲ್ಲ ಎಂದು ನೋಡುವುದಾದರೆ, ಇತ್ತೀಚಿನ ಎಪಿಸೋಡ್​ ಒಂದರಲ್ಲಿ ಪ್ರಶಾಂತ್​ ಮತ್ತು ದಿವ್ಯಾ ಉರುಡುಗ ನಡುವೆ ಮಾತುಕತೆ ನಡೆಯಿತು. ಈ ವೇಳೆ ಅರವಿಂದ್​ ಜತೆ ಸಂಬಂಧ ಕಡಿದುಕೊಳ್ಳುವಂತೆ ದಿವ್ಯಾಗೆ ಪ್ರಶಾಂತ್​ ಸಲಹೆ ನೀಡಿದರು. ಅರವಿಂದ್​ ನಿನ್ನ ಮೇಲೆ ತುಂಬಾ ಪೊಸ್ಸೆಸ್ಸಿವ್​ ಆಗಿದ್ದಾನೆ. ಸಂಬಂಧದ ಆರಂಭದಲ್ಲಿ ಇದು ನಿನಗೆ ಉತ್ತಮ ಎನಿಸಿರಬಹುದು. ಆದರೆ, ಅತಿಯಾದ ಪೊಸ್ಸೆಸ್ಸಿವ್​ನೆಸ್​ ನಿನ್ನನ್ನು ಕೊಲ್ಲಲು ಬಹುದು. ನೀನು ಅವನಿಂದ ನಿನ್ನದೇಯಾದ ಸ್ಥಳಾವಕಾಶ ಕೇಳುವಂತೆ ಮಾಡಬಹುದು ಎಂದಿದ್ದಾರೆ.

    ಇದಕ್ಕೆ ಉತ್ತರಿಸಿರುವ ದಿವ್ಯಾ, ನಿಮ್ಮ ಮಾತುಗಳನ್ನು ನಾನು ಒಪ್ಪುವುದಿಲ್ಲ. ಏಕೆಂದರೆ ಅರವಿಂದ್​ ಸೂಕ್ಷ್ಮ ವ್ಯಕ್ತಿತ್ವದವರು. ಎಲ್ಲರಿಗಿಂತ ಅವರ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿದೆ ಎಂದು ಸಂಬರಗಿಗೆ ದಿವ್ಯಾ ಪ್ರತ್ಯುತ್ತರ ನೀಡಿದ್ದಾರೆ. ಈ ಮೂಲಕ ಅರವಿಂದ್​ ಮೇಲಿನ ತಮ್ಮ ಪ್ರೀತಿಯನ್ನು ಮತ್ತೊಮ್ಮೆ ಹೊರಗೆ ಹಾಕಿದ್ದಾರೆ. (ಏಜೆನ್ಸೀಸ್​)

    ಬಿಗ್​ಬಾಸ್​ ಟ್ರೋಫಿ ಗೆಲ್ಲದಿರುವುದೇ ದಿವ್ಯಾ ಉರುಡುಗಗೆ ಅದೃಷ್ಟವಂತೆ: ಫ್ಯಾನ್ಸ್​ ಕೊಟ್ಟ ಅಚ್ಚರಿಯ ಕಾರಣ ಇಲ್ಲಿದೆ..!

    ಇಡೀ ರಾಜ್ಯವೇ ಬೆಚ್ಚಿಬೀಳುವ ಸುದ್ದಿ… ಬೆಂಗಳೂರು ಮೂಲದ ಯುವಕನಿಂದಲೇ ನಡೆದಿತ್ತು ಮಹಾ ಸಂಚು

    10 ತಾಸಿನ ಫಿನಾಲೆ: ಬಿಗ್​ಬಾಸ್​ ಕನ್ನಡ ಸೀಸನ್​-8ರ ಮುಕ್ತಾಯಕ್ಕೆ ಮೂರೇ ದಿನ ಬಾಕಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts