ಬೆಂಗಳೂರು: ಬಿಗ್ಬಾಸ್ ಸೀಸನ್ 8ರ ಗ್ರ್ಯಾಂಡ್ ಫಿನಾಲೆಗೆ ವೇದಿಕೆ ಸಜ್ಜಾಗುತ್ತಿದೆ. ಈ ಬಾರಿಯ ಟ್ರೋಫಿ ಮತ್ತು ನಗದು ಬಹುಮಾನ ಯಾರ ಪಾಲಾಗಲಿದೆ ಎಂಬುದು ಆಗಸ್ಟ್ 8ರಂದು ಹೊರಬೀಳಲಿದೆ. ಅರವಿಂದ್ ಕೆ.ಪಿ. ಮಂಜು ಪಾವಗಡ, ವೈಷ್ಣವಿ, ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಂಬರಗಿ ಫೈನಲ್ ಪ್ರವೇಶಿಸಿದ್ದು, ಐವರಲ್ಲಿ ವಿನ್ನರ್ ಯಾರೆಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಫೈನಲ್ ಪ್ರವೇಶ ಪಡೆದಿರುವುದರಿಂದ ಎಲ್ಲ ಸ್ಪರ್ಧಿಗಳಿಗೂ ಕೊಂಚ ಸಂತಸ ತಂದಿದೆ. ಸದ್ಯ ಯಾವುದೇ ಟಾಸ್ಕ್ಗಳಿಲ್ಲದೆ ಸ್ಪರ್ಧಿಗಳು ಫೈನಲ್ ಎಪಿಸೋಡ್ಗೆ ಎದುರು ನೋಡುತ್ತಿದ್ದಾರೆ. ಇದರ ನಡುವೆ ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಂಬರಗಿ ನಡುವಿನ ಮಾತುಕತೆ ಬಹಳಷ್ಟು ಕುತೂಹಲ ಕೆರಳಿಸಿದೆ. ಬಹುಶಃ ಅರವಿಂದ್ ಮತ್ತು ದಿವ್ಯಾ ಉರುಡುಗ ನಡುವಿನ ಸಂಬಂಧ ಪ್ರಶಾಂತ್ ಸಂಬರಗಿಗೆ ಇಷ್ಟವಿಲ್ಲ ಎಂದು ಗೋಚರಿಸುತ್ತದೆ.
ಅಷ್ಟಕ್ಕೂ ಯಾಕೆ ಇಷ್ಟವಿಲ್ಲ ಎಂದು ನೋಡುವುದಾದರೆ, ಇತ್ತೀಚಿನ ಎಪಿಸೋಡ್ ಒಂದರಲ್ಲಿ ಪ್ರಶಾಂತ್ ಮತ್ತು ದಿವ್ಯಾ ಉರುಡುಗ ನಡುವೆ ಮಾತುಕತೆ ನಡೆಯಿತು. ಈ ವೇಳೆ ಅರವಿಂದ್ ಜತೆ ಸಂಬಂಧ ಕಡಿದುಕೊಳ್ಳುವಂತೆ ದಿವ್ಯಾಗೆ ಪ್ರಶಾಂತ್ ಸಲಹೆ ನೀಡಿದರು. ಅರವಿಂದ್ ನಿನ್ನ ಮೇಲೆ ತುಂಬಾ ಪೊಸ್ಸೆಸ್ಸಿವ್ ಆಗಿದ್ದಾನೆ. ಸಂಬಂಧದ ಆರಂಭದಲ್ಲಿ ಇದು ನಿನಗೆ ಉತ್ತಮ ಎನಿಸಿರಬಹುದು. ಆದರೆ, ಅತಿಯಾದ ಪೊಸ್ಸೆಸ್ಸಿವ್ನೆಸ್ ನಿನ್ನನ್ನು ಕೊಲ್ಲಲು ಬಹುದು. ನೀನು ಅವನಿಂದ ನಿನ್ನದೇಯಾದ ಸ್ಥಳಾವಕಾಶ ಕೇಳುವಂತೆ ಮಾಡಬಹುದು ಎಂದಿದ್ದಾರೆ.
ಇದಕ್ಕೆ ಉತ್ತರಿಸಿರುವ ದಿವ್ಯಾ, ನಿಮ್ಮ ಮಾತುಗಳನ್ನು ನಾನು ಒಪ್ಪುವುದಿಲ್ಲ. ಏಕೆಂದರೆ ಅರವಿಂದ್ ಸೂಕ್ಷ್ಮ ವ್ಯಕ್ತಿತ್ವದವರು. ಎಲ್ಲರಿಗಿಂತ ಅವರ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿದೆ ಎಂದು ಸಂಬರಗಿಗೆ ದಿವ್ಯಾ ಪ್ರತ್ಯುತ್ತರ ನೀಡಿದ್ದಾರೆ. ಈ ಮೂಲಕ ಅರವಿಂದ್ ಮೇಲಿನ ತಮ್ಮ ಪ್ರೀತಿಯನ್ನು ಮತ್ತೊಮ್ಮೆ ಹೊರಗೆ ಹಾಕಿದ್ದಾರೆ. (ಏಜೆನ್ಸೀಸ್)
ಬಿಗ್ಬಾಸ್ ಟ್ರೋಫಿ ಗೆಲ್ಲದಿರುವುದೇ ದಿವ್ಯಾ ಉರುಡುಗಗೆ ಅದೃಷ್ಟವಂತೆ: ಫ್ಯಾನ್ಸ್ ಕೊಟ್ಟ ಅಚ್ಚರಿಯ ಕಾರಣ ಇಲ್ಲಿದೆ..!
ಇಡೀ ರಾಜ್ಯವೇ ಬೆಚ್ಚಿಬೀಳುವ ಸುದ್ದಿ… ಬೆಂಗಳೂರು ಮೂಲದ ಯುವಕನಿಂದಲೇ ನಡೆದಿತ್ತು ಮಹಾ ಸಂಚು
10 ತಾಸಿನ ಫಿನಾಲೆ: ಬಿಗ್ಬಾಸ್ ಕನ್ನಡ ಸೀಸನ್-8ರ ಮುಕ್ತಾಯಕ್ಕೆ ಮೂರೇ ದಿನ ಬಾಕಿ..