ಹುಬ್ಬಳ್ಳಿ: ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿಯುವ ಮುನ್ನ ಸಿಎಂ ಬಸವರಾಜ ಬೊಮ್ಮಾಯಿ ಅವರಿದ್ದ ವಿಮಾನ ಲ್ಯಾಡಿಂಗ್ ಸಮಸ್ಯೆಯಿಂದಾಗಿ ಅಕಾಶದಲ್ಲೇ ಕೆಲ ಕಾಲ ಸುತ್ತಾಟ ನಡೆಸಿದ ಘಟನೆ ನಡೆದಿದೆ. ಕೊನೆಗೂ ವಿಮಾನ ಲ್ಯಾಂಡ್ ಆಗಿದೆ.
ಬೊಮ್ಮಾಯಿ ಅವರಿಂದು 6E7227 ಇಂಡಿಗೋ ವಿಮಾನದಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ವಿಮಾನದಲ್ಲಿ ಸಿಎಂ ಜತೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡ ಇದ್ದರು. ವಿಮಾನ ಬೆಳಗ್ಗೆ 7.30ಕ್ಕೆ ಲ್ಯಾಂಡಿಂಗ್ ಆಗಬೇಕಿತ್ತು. ಆದರೆ, ದಟ್ಟ ಮಂಜು ಆವರಿಸಿದ ಹಿನ್ನೆಲೆಯಲ್ಲಿ ಲ್ಯಾಂಡಿಂಗ್ ಸಮಸ್ಯೆ ಎದುರಾಗಿ ವಿಮಾನ ಆಗಸದಲ್ಲೇ ಕೆಲ ಕಾಲ ಸುತ್ತಾಟ ನಡೆಸಿತು.
ಸತತ ಅರ್ಧ ಗಂಟೆಗಳ ಬಳಿಕ ವಿಮಾನ ಹುಬ್ಬಳ್ಳಿ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಒಂದು ವೇಳೆ ಲ್ಯಾಂಡ್ ಆಗದೇ ಹೋಗಿದ್ದರೆ, ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವ ಸಾಧ್ಯತೆ ಇತ್ತು. ಆದರೆ, ಕೊನೆಗೂ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲೇ ಸುರಕ್ಷಿತವಾಗಿ ವಿಮಾನ ಲ್ಯಾಂಡ್ ಆಗಿದೆ. (ದಿಗ್ವಿಜಯ ನ್ಯೂಸ್)
ಬೆನ್ನ ಹಿಂದೆಯೇ ಜವರಾಯ ಹಿಂಬಾಲಿಸುತ್ತಿರುವುದನ್ನು ನೋಡದೇ ಸಜೀವ ದಹನವಾದ ರೈತ
ಜನಜಂಗುಳಿಗೆ ಬೇಕು ಬ್ರೇಕ್: ಕರೊನಾ ತಡೆಗೆ ತಜ್ಞರ ಸಲಹೆ; ಮದುವೆ, ಹಬ್ಬ, ಸಮಾರಂಭಗಳಿಗೆ ನಿರ್ಬಂಧ
ಶಾಲೆ ಮುಚ್ಚಲ್ಲ, ಭಯ ಬೇಕಿಲ್ಲ: 1-10ನೇ ತರಗತಿ ಮಕ್ಕಳಲ್ಲಿ ಸೋಂಕು ಕಂಡಿಲ್ಲ, ಸಚಿವ ನಾಗೇಶ್ ಸ್ಪಷ್ಟನೆ