More

    ಉತ್ತರಾಖಂಡದ ಆರೋಗ್ಯ ಸಚಿವರ ಕಾರು ಅಪಘಾತ: ಪಲ್ಟಿಯಾಗಿ ಇನ್ನೊಂದು ಕಾರಿಗೆ ಡಿಕ್ಕಿ

    ಡೆಹ್ರಾಡೂನ್​: ಉತ್ತರಾಖಂಡದ ಆರೋಗ್ಯ ಸಚಿವ ಧಾನ್​ ಸಿಂಗ್​ ರಾವತ್​ ಅವರಿದ್ದ ಕಾರು ಮಂಗಳವಾರ ಸಂಜೆ ಅಪಘಾತಕ್ಕೀಡಾಗಿದೆ. ರಾವತ್​ ಅವರು ತಮ್ಮ ಸಿಬ್ಬಂದಿಯೊಂದಿಗೆ ತಲಿಸ್ಮಾನ್​ ಪಟ್ಟಣದಿಂದ ಡೆಹ್ರಾಡೂನ್​​ಗೆ ಮರಳುವಾಗ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಅಪಘಾತಕ್ಕೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೋಟೋದಲ್ಲಿ ಸಚಿವರು ಕಾರು ಉರುಳಿಬಿದ್ದು ಪಕ್ಕದಲ್ಲಿ ಪಾರ್ಕ್​ ಮಾಡಿರುವ ಕಾರಿಗೆ ಗುದ್ದಿ ಒರಗಿಕೊಂಡು ನಿಂತಿರುವ ದೃಶ್ಯವನ್ನು ಕಾಣಬಹುದು.

    ಘಟನೆಯಲ್ಲಿ ಸಚಿವರು ಸಣ್ಣಪುಟ್ಟ ಗಾಯಗಳಿಂದ ಬಚಾವ್​ ಆಗಿದ್ದಾರೆ. ಸದ್ಯ ಅವರನ್ನು ಚಿಕಿತ್ಸೆಗಾಗಿ ಪ್ಯಾಬೊ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಸಚಿವರ ಕೆಲ ಸಿಬ್ಬಂದಿಗಳಿಗೂ ಅಲ್ಪ ಪ್ರಮಾಣ ಗಾಯಗಳಾಗಿದ್ದು, ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)

    ಮತಾಂತರ ತಡೆ ಮಸೂದೆ ಕರಡು ಸಿದ್ಧ; ಶಾಲೆ, ಸರ್ಕಾರಿ ಸೇವಾ ದಾಖಲೆಯಲ್ಲೂ ಉಲ್ಲೇಖ ಕಡ್ಡಾಯ

    ರೈತರಿಗೆ ಸಿಗುತ್ತಿಲ್ಲ ರಾಜ್ಯದ ಸಮ್ಮಾನ; 3000 ಕೋಟಿ ರೂಪಾಯಿ ಬಾಕಿ..

    ಬಿಜೆಪಿಗೆ ಜಾರಕಿಹೊಳಿ ಶಾಕ್!; 13 ಜನ ಶಾಸಕರು, ಮೂವರು ಸಂಸದರಿದ್ದರೂ ಕಮಲಪಡೆಗೆ ದಕ್ಕದ ಜಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts