ಡೆಹ್ರಾಡೂನ್: ಉತ್ತರಾಖಂಡದ ಆರೋಗ್ಯ ಸಚಿವ ಧಾನ್ ಸಿಂಗ್ ರಾವತ್ ಅವರಿದ್ದ ಕಾರು ಮಂಗಳವಾರ ಸಂಜೆ ಅಪಘಾತಕ್ಕೀಡಾಗಿದೆ. ರಾವತ್ ಅವರು ತಮ್ಮ ಸಿಬ್ಬಂದಿಯೊಂದಿಗೆ ತಲಿಸ್ಮಾನ್ ಪಟ್ಟಣದಿಂದ ಡೆಹ್ರಾಡೂನ್ಗೆ ಮರಳುವಾಗ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತಕ್ಕೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೋಟೋದಲ್ಲಿ ಸಚಿವರು ಕಾರು ಉರುಳಿಬಿದ್ದು ಪಕ್ಕದಲ್ಲಿ ಪಾರ್ಕ್ ಮಾಡಿರುವ ಕಾರಿಗೆ ಗುದ್ದಿ ಒರಗಿಕೊಂಡು ನಿಂತಿರುವ ದೃಶ್ಯವನ್ನು ಕಾಣಬಹುದು.
ಘಟನೆಯಲ್ಲಿ ಸಚಿವರು ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ. ಸದ್ಯ ಅವರನ್ನು ಚಿಕಿತ್ಸೆಗಾಗಿ ಪ್ಯಾಬೊ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಸಚಿವರ ಕೆಲ ಸಿಬ್ಬಂದಿಗಳಿಗೂ ಅಲ್ಪ ಪ್ರಮಾಣ ಗಾಯಗಳಾಗಿದ್ದು, ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)
ಮತಾಂತರ ತಡೆ ಮಸೂದೆ ಕರಡು ಸಿದ್ಧ; ಶಾಲೆ, ಸರ್ಕಾರಿ ಸೇವಾ ದಾಖಲೆಯಲ್ಲೂ ಉಲ್ಲೇಖ ಕಡ್ಡಾಯ
ಬಿಜೆಪಿಗೆ ಜಾರಕಿಹೊಳಿ ಶಾಕ್!; 13 ಜನ ಶಾಸಕರು, ಮೂವರು ಸಂಸದರಿದ್ದರೂ ಕಮಲಪಡೆಗೆ ದಕ್ಕದ ಜಯ