More

    ಶಾಲೆಗೆ ಹೋದ ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆ: ನೇತ್ರದಾನ ಮೂಲಕ ಸಾವಿನ ನೋವಲ್ಲೂ ಕುಟುಂಬದ ಸಾರ್ಥಕತೆ

    ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದ ಆನಿಕೆರೆಯಲ್ಲಿ ಮುಳುಗಿ ನಿನ್ನೆ ಹದಿನಾರು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಮೃತಳನ್ನು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಗುಂಡೂರು ಗ್ರಾಮದ ಸಾವಿತ್ರಿ ದೊಡ್ಡಮನಿ ಅಂತಾ ಗುರುತಿಸಲಾಗಿತ್ತು.

    ಹಾನಗಲ್ ಪಟ್ಟಣದ ಜನತಾ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ವಿದ್ಯಾರ್ಥಿನಿ ನಿನ್ನೆ ಬೆಳಿಗ್ಗೆ ಶಾಲೆಗೆ ಹೋಗೋದಾಗಿ ಬಂದಿದ್ದು, ಮಧ್ಯಾಹ್ನದ ವೇಳೆಗೆ ಆಕೆಯ ಮೃತದೇಹ ಕೆರೆಯಲ್ಲಿ ಪತ್ತೆಯಾಗಿತ್ತು. ನಂತರ ಮೃತದೇಹವನ್ನು ಹಾನಗಲ್ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ದಾಖಲಿಸಲಾಗಿತ್ತು. ಈ ಕುರಿತು ಹಾನಗಲ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿತ್ತು.

    ಇದೀಗ ಕೆರೆಯ ನೀರಿನಲ್ಲಿ ಮೃತಪಟ್ಟಿದ್ದ ಬಾಲಕಿಯ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಗಳ ಸಾವಿನ ನೋವಿನಲ್ಲಿ ಕುಟುಂಬ ಸಾರ್ಥಕತೆ ಮೆರೆದಿದೆ. ಶಿರಸಿಯ ನಯನ ನೇತ್ರ ಭಂಡಾರಕ್ಕೆ ಮೃತಳ ಎರಡು ಕಣ್ಣುಗಳನ್ನು ದಾನ ಮಾಡಿ ಮಗಳ ಸಾವಿನ ದುಃಖದಲ್ಲಿ ಅಂಧರ ಬಾಳಿಗೆ ಬೆಳಕಾಗಿದ್ದಾರೆ.

    ಎರಡೇ ನಿಮಿಷದಲ್ಲಿ ಮುಗಿಯುತ್ತದೆ! ನಟಿ ರೆಜಿನಾ ಹೇಳಿದ ಅಶ್ಲೀಲ ಜೋಕ್ಸ್​ ಕೇಳಿ ಆ್ಯಂಕರ್​ ಶಾಕ್​, ವಿಡಿಯೋ ವೈರಲ್​

    ರಾಹುಲ್​ ಗಾಂಧಿಯ ಟೀ ಶರ್ಟ್​ ಅಣುಕಿಸಿದ ಬಿಜೆಪಿಗೆ ಕಾಂಗ್ರೆಸ್​ ಕೊಟ್ಟ ತಿರುಗೇಟು ಹೀಗಿದೆ….

    ಗಣೇಶ ಮೂರ್ತಿ ನಿಮಜ್ಜನ ವೇಳೆ 7 ಮಂದಿ ದುರಂತ ಸಾವು: ಅಪ್ಪನೊಂದಿಗೆ ನೀರಿಗಿಳಿದ ಪುತ್ರನೂ ನೀರುಪಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts