More

    ಅಪಾಯಕಾರಿ ಓವರ್​ಟೇಕ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಸಹೋದರಿಯರಿಬ್ಬರಿಗೆ ಪ್ರಭಾವಿ ಪುತ್ರನಿಂದ ಥಳಿತ!

    ಮಲಪ್ಪುರಂ: ವೇಗವಾಗಿ ಬಂದಿದ್ದಲ್ಲದೆ, ಅಪಾಯಕಾರಿಯಾಗಿ ಓವರ್​ಟೇಕ್​ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಸಹೋದರಿಯರಿಬ್ಬರನ್ನು ವ್ಯಕ್ತಿಯೊಬ್ಬ ಥಳಿಸಿರುವ ಘಟನೆ ಕೇರಳದ ಮಲಪ್ಪುರಂನ ಪನಂಬರದಲ್ಲಿ ನಡೆದಿದೆ.

    ನಡು ರಸ್ತೆಯಲ್ಲೇ ಸಹೋದರಿಯರ ಮೇಲೆ ದರ್ಪ ಮೆರೆದ ಕಾರು ಚಾಲಕನನ್ನು ಸಿ.ಎಚ್​. ಇಬ್ರಾಹಿಂ ಶಬೀರ್​ ಎಂದು ಗುರುತಿಸಲಾಗಿದೆ. ಈ ಘಟನೆ ಏ. 16ರಂದು ಪನಂಬರಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಕರಿಂಗಲ್ಲಥನಿ ಮೂಲದ ಸಹೋದರಿಯರಾದ ಅಸ್ನಾ ಕೆ ಅಜೀಜ್​ ಮತ್ತು ಹಮ್ನಾ ಕೆ. ಅಜೀಜ್​ ಮೇಲೆ ಶಬೀರ್​ ಹಲ್ಲೆ ಮಾಡಿದ್ದಾರೆ.

    ಸಹೋದರಿಯರಿಬ್ಬರು ಕೋಯಿಕ್ಕೋಡ್​ನಿಂದ ಮನೆಗೆ ತೆರಳುತ್ತಿದ್ದರು. ಈ ವೇಳೆ ಎಡಗಡೆಯಿಂದ ವೇಗವಾಗಿ ಶಬೀರ್ ಕಾರು ಓವರ್​ಟೇಕ್​ ಮಾಡಿದೆ. ಇದರಿಂದ ಗಾಬರಿಗೊಂಡ ಸಹೋದರಿಯರು ಕಾರು ಚಾಲಕನನ್ನು ಈ ವಿಚಾರವಾಗಿ ಪ್ರಶ್ನಿಸಿದ್ದಾರೆ. ಇಷ್ಟಕ್ಕೆ ಕುಪಿತಗೊಂಡ ಶಬೀರ್​, ಸಹೋದರಿಯರಿಬ್ಬರಲ್ಲಿ ಸ್ಕೂಟರ್​ ಚಾಲನೆ ಮಾಡುತ್ತಿದ್ದವಳ ಕೆನ್ನಗೆ ಮೊದಲು ಬಾರಿಸಿದ್ದಾನೆ. ಬಳಿಕ ಇಬ್ಬರ ಮೇಲೆಯೂ ಹಲ್ಲೆ ಮಾಡಿದ್ದಾನೆ. ಯಾವಾಗ ಸ್ಥಳೀಯರು ಮಧ್ಯ ಪ್ರವೇಶಿಸಿದರು ಶಬೀರ್​ ಕಾರು ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.

    ಗಾಯಗೊಂಡಿರುವ ಸಹೋದರಿಯರು ತಿರುರಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ, ಪೊಲೀಸರಿಗೆ ದೂರು ನೀಡಿದ್ದರೂ ಸಣ್ಣ ಆರೋಪದ ಹೆಸರಿನಲ್ಲಿ ಪ್ರಕರಣ ದಾಖಲಾಗಿದೆ. ಇದೊಂದು ಕೊಲೆ ಯತ್ನವಾಗಿದ್ದರೂ ದೂರಿನಲ್ಲಿ ಈ ಬಗ್ಗೆ ಉಲ್ಲೇಖಿಸಿಲ್ಲ ಎಂದು ಸಹೋದರಿಯರು ಆರೋಪಿಸಿದ್ದಾರೆ. ರಾಜಿ ಸಂಧಾನಕ್ಕಾಗಿ ಪೊಲೀಸರ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ. ಆರೋಪಿ ಶಬೀರ್​ ಸ್ಥಳೀಯ ಲೀಗ್ ಮುಖಂಡರೊಬ್ಬರ ಪುತ್ರನಾಗಿದ್ದು, ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. (ಏಜೆನ್ಸೀಸ್​)

    ಕೆಜಿಎಫ್​ 2 ಕೊಂಡಾಡಿದ ಅಲ್ಲು ಅರ್ಜುನ್​: ರಾಕಿಂಗ್​ ಸ್ಟಾರ್​ ಯಶ್​ಗೆ ಟ್ವೀಟ್​ ಮಾಡಿ ಹೇಳಿದ್ದೇನು?

    ಬೆಡ್​ ರೂಮಲ್ಲಿ ಎಲೆಕ್ಟ್ರಿಕ್​​ ಸ್ಕೂಟರ್​ನ ಬ್ಯಾಟರಿ ಸ್ಫೋಟ: ಪತಿ ಸಾವು, ಪತ್ನಿ ಸ್ಥಿತಿ ಚಿಂತಾಜನಕ… ಸ್ಕೂಟರ್​ ಖರೀದಿಸಿದ ಮರುದಿನವೇ ದುರಂತ

    ಬಾಲಕಿಗೆ ಫೋನ್​ ನಂಬರ್​ ಕೊಟ್ಟು ಮನೇಲಿ ಯಾರೆಲ್ಲಾ ಇದ್ದಾರೆ ಎಂದ ಕಂಡಕ್ಟರ್​ಗೆ ಹಿಗ್ಗಾಮುಗ್ಗಾ ಥಳಿಸಿದ ತಾಯಿ​! ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts