ವಿಜಯವಾಡ: ಶುಕ್ರವಾರವಷ್ಟೇ ಹೊಸದಾಗಿ ಖರೀದಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ನ ಬ್ಯಾಟರಿ ಮರುದಿನ ಸ್ಫೋಟಗೊಂಡು ಓರ್ವನ ಪ್ರಾಣ ತೆಗೆದಿದೆ. ಈ ಅವಘಡದಲ್ಲಿ ಪತಿ ಮೃತಪಟ್ಟಿದ್ದು, ಪತ್ನಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಮಕ್ಕಳಿಬ್ಬರ ಸ್ಥಿತಿಯೂ ಗಂಭೀರವಾಗಿದೆ. ಇಂತಹ ದುರ್ಘಟನೆ ಆಂಧ್ರದ ವಿಜಯವಾಡದಲ್ಲಿ ಶನಿವಾರ ಬೆಳಗಿನಜಾವ ಸಂಭವಿಸಿದೆ. ಮೂರು ದಿನಗಳ ಹಿಂದಷ್ಟೇ ತೆಲಂಗಾಣದಲ್ಲೂ ಇಂತಹದ್ದೇ ಘಟನೆ ಸಂಭವಿಸಿತ್ತು. ವಿಜಯವಾಡ ನಿವಾಸಿಗಳಾದ ಶಿವಕುಮಾರ್ ದಂಪತಿ ಶುಕ್ರವಾರ ಬೂಮ್ ಮೋಟಾರ್ಸ್ ಕಂಪನಿಯ ಕಾರ್ಬೆಟ್-14 ಸ್ಕೂಟರ್ ಖರೀದಿಸಿದ್ದರು. ಶುಕ್ರವಾರ ರಾತ್ರಿ ಬೆಡ್ರೂಮ್ನಲ್ಲಿ ಸ್ಕೂಟರ್ನ ಬ್ಯಾಟರಿಯನ್ನು ಚಾರ್ಜ್ಗೆ ಇಟ್ಟು ಮಲಗಿದ್ದರು. … Continue reading ಬೆಡ್ ರೂಮಲ್ಲಿ ಎಲೆಕ್ಟ್ರಿಕ್ ಸ್ಕೂಟರ್ನ ಬ್ಯಾಟರಿ ಸ್ಫೋಟ: ಪತಿ ಸಾವು, ಪತ್ನಿ ಸ್ಥಿತಿ ಚಿಂತಾಜನಕ… ಸ್ಕೂಟರ್ ಖರೀದಿಸಿದ ಮರುದಿನವೇ ದುರಂತ
Copy and paste this URL into your WordPress site to embed
Copy and paste this code into your site to embed