ಹೈದರಾಬಾದ್: ಬಾಯ್ಫ್ರೆಂಡ್ ಮದುವೆ ಆಗಲು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಖಮ್ಮಮ್ ಜಿಲ್ಲೆಯ ಸತ್ತುಪಲ್ಲಿಯ ದ್ವಾರಕಪುರಿ ಕಾಲನಿಯಲ್ಲಿ ನಡೆದಿದೆ.
ಪ್ರತ್ಯುಷಾ (18) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೃತ ಯುವತಿ ಡೇವಿಡ್ರಾಜು ಮತ್ತು ರಾಣಿ ಎಂಬುವರ ಮಗಳು. ಈಕೆ ಸಿರಿಸಿಲ್ಲಾದಲ್ಲಿ ಡಿಪ್ಲಮೋ ಓದುತ್ತಿದ್ದಳು. ಕಳೆದ ವರ್ಷ ಕರೊನಾ ಸಮಸ್ಯೆ ಉದ್ಭವ ಆದಾಗಿನಿಂದ ಸರಿಯಾಗಿ ತರಗತಿಗಳು ನಡೆಯದ ಕಾರಣ ಹೈದರಾಬಾದ್ನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.
ಈ ಮಧ್ಯೆ ಪ್ರತ್ಯುಷಾ ಸತ್ತುಪಲ್ಲಿ ಮಂಡಲದ ತಂಬೂರ್ ಗ್ರಾಮದಲ್ಲಿರುವ ಅಜ್ಜಿ ಮನೆಗೆ ಒಮ್ಮೆ ಭೇಟಿ ನೀಡಿದ್ದಳು. ಈ ವೇಳೆ ಅದೇ ಊರಿನ ಜಗದೀಶ್ ಎಂಬಾತನ ಪರಿಚಯ ಆಗಿ, ಇಬ್ಬರ ನಡುವೆ ಪ್ರೀತಿ ಚಿಗುರಿ, ನಂಬರ್ ವಿನಿಮಯ ಸಹ ಆಗಿದೆ.
ಇದಾದ ಬಳಿಕ ಇಬ್ಬರು ಫೋನ್ನಲ್ಲಿ ಮಾತನಾಡುವುದು ಸಾಮಾನ್ಯವಾಗಿತ್ತು. ಪ್ರೇಮ ಶುರುವಾದ ಎಂಟು ತಿಂಗಳ ನಂತರ ಪ್ರತ್ಯುಷಾ, ಜಗದೀಶ್ ಜತೆ ಮದುವೆ ಪ್ರಸ್ತಾಪ ಮಾಡಿದ್ದಾಳೆ. ಆದರೆ, ಆತ ಮದುವೆ ಆಗಲು ನಿರಾಕರಿಸಿದ್ದಾನೆ. ಇದರಿಂದ ಮನನೊಂದಿದ್ದ ಪ್ರತ್ಯುಷಾ ಏಪ್ರಿಲ್ 30ರಂದು ಹೈದರಾಬಾದ್ನಲ್ಲಿ ಸ್ಯಾನಿಟೈಜರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಇದನ್ನು ನೋಡಿದ ಆಕೆಯ ಫ್ರೆಂಡ್ಸ್ ಆಸ್ಪತ್ರೆಗೆ ದಾಖಲಿಸಿದ್ದರು.
ಆದರೆ, ಚಿಕಿತ್ಸೆ ಫಲಿಸದೇ ಮೇ 2ರಂದು ಪ್ರತ್ಯುಷಾ ಕೊನೆಯುಸಿರೆಳೆದಿದ್ದಾಳೆ. ಇದೀಗ ಮಗಳನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಮಗಳ ಸಾವಿಗೆ ಜಗದೀಶ್ ಕಾರಣ ಎಂದು ಆರೋಪಿಸಿ ಪ್ರತ್ಯುಷಾ ಪಾಲಕರು ಬಷೀರ್ಬಾಘ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇತ್ತ ದೂರು ದಾಖಲಾಗುತ್ತಿದ್ದಂತೆ ಜಗದೀಶ್ ಪರಾರಿಯಾಗಿದ್ದಾನೆ. ಮಂಗಳವಾರ ಪ್ರತ್ಯುಷಾ ಮೃತದೇಹವನ್ನು ಜಗದೀಶ್ ಮನೆ ಮುಂದೆ ಇಟ್ಟು ಪ್ರತಿಭಟನೆ ಸಹ ನಡೆಸಿದ್ದಾರೆ. ಇದೀಗ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. (ಏಜೆನ್ಸೀಸ್)
ಕ್ರಿಕೆಟಿಗನನ್ನು ಅಪಹರಿಸಿದ ದುಷ್ಕರ್ಮಿಗಳು! ಥಳಿಸಿದರು, ಗನ್ ಹಿಡಿದು ಬೆದರಿಸಿದರು
ಗಂಡನಿದ್ದರೂ ಪರಪುರುಷನೊಂದಿಗೆ 2 ಮಕ್ಕಳ ತಾಯಿ ಕಾಮದಾಟ! ತಡರಾತ್ರಿ ನಡೆದೇ ಹೋಯ್ತು ಭೀಕರ ದುರಂತ